ನನ್ನ ಜೀವಿತ ಮುಗಿದು ಕಾಲ ಮೂಳೆಗಳನ್ನು
ಮಣ್ಣಲ್ಲಿ ಹೂಳುವನು. ಅದೃಷ್ಟದಿಂದಾಗ
ನೀ ನನ್ನ ಕಳಪೆ ಸಾಲುಗಳ ಓದಿದೆಯೆನ್ನು.
ನನ್ನ ಕಾಲದ ಪ್ರಗತಿ ಜೊತೆಗೆ ಹೋಲಿಸಿದಾಗ
ಪ್ರತಿಯೊಂದು ಬರೆಹವೂ ಮೀರಿದ್ದರೂ ಇದನು,
ಇದರ ಕೌಶಲ ಆ ಅದೃಷ್ಟವಂತರ ಬರೆಹ-
ಕಿಂತ ಕೆಳಗಿದ್ದರೂ, ನೆನೆದೆನ್ನ ಪ್ರೀತಿಯನು
ಉಳಿಸಿಕೊ ಇದನ್ನು. ನನಗಾಗಿ ನೀನೀ ತರಹ
ಯೋಚಿಸುವ ಕೃಪೆ ಮಾಡು: ಗೆಳೆಯ ತಾ ಬದುಕಿದ್ದ
ಕಾಲದುನ್ನತಿಯೊಡನೆ ಸೇರಿ ಬೆಳೆದಿದ್ದಲ್ಲಿ
ಇದಕು ಮಿಗಿಲಾದ ಕೃತಿಯನ್ನು ಸೃಷ್ಟಿಸುತಿದ್ದ,
ಸಾಗುತಿತ್ತದು ಇನ್ನೂ ಹೆಚ್ಚು ಎತ್ತರದಲ್ಲಿ.
ಆದರವನಿಲ್ಲ, ಮೀರಿದರಿವರು ಗೆಳೆಯನನು,
ಮೆಚ್ಚುವೆನು ಅವರ ಕಲೆಯನು, ಇವನ ಪ್ರೀತಿಯನು.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 32
If thou survive my well-contented day
Related Post
ಸಣ್ಣ ಕತೆ
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
-
ಗಂಗೆ ಅಳೆದ ಗಂಗಮ್ಮ
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…