ಯಾರ ಪ್ರತಿಭೆಗೆ ಸ್ಫೂರ್ತಿ ಚಿತ್ರಸ್ಥ ರೂಪಸಿಯೊ,

ಯಾರ ಪ್ರತಿಭೆಗೆ ಸ್ಫೂರ್ತಿ ಚಿತ್ರಸ್ಥ ರೂಪಸಿಯೊ,
ಸೂರ್ಯ ಶಶಿ ಇಳೆ ಕಡಲು ಚೈತ್ರ ಪುಷ್ಪಗಳನ್ನು
ಸ್ವರ್ಗವನ್ನೂ ಯಾರು ಬಣ್ಣನೆಗೆ ಕರೆವರೋ,
ಸ್ವರ್ಗ ಬಳಸಿರುವ ಅಪರೂಪ ವಸ್ತುಗಳನ್ನು
ತಾವು ಸ್ತುತಿಸುವ ಚೆಲುವಿನೊಡನೆ ಹೋಲಿಕೆ ಮಾಡಿ
ಘನಜೋಡಿಗಳ ಯಾರು ಹೆಮ್ಮೆಯಲಿ ತರುವರೋ
ಅಂಥ ಕವಿ ನಾನಲ್ಲ. ನಿಜ ಒಲವಿನೊಳಗಾಡಿ
ಬಣ್ಣಿಸುವೆ ಅವನು ಯಾವುದು ನಿಜಕು ಚೆಲುವೋ.
ಆಕಾಶದಲಿ ಭದ್ರ ನೆಲೆ ಹೂಡಿರುವ ಸ್ವರ್ಣ
ದೀಪ್ತಿಗಳ ಪ್ರಭೆ ಅದಕ್ಕೆ ಇಲ್ಲದಿರಬಹುದು;
ಆದರೂ ಇದ ನಂಬಿ, ತಾಯಿಯೊಬ್ಬಳ ಚಿಣ್ಣ
ಎಷ್ಟು ಚೆಲುವೋ ಅಷ್ಟೆ ಚೆಲುವು ನನ್ನೊಲವೂ
ಅಂತೆ ಕಂತೆಗಳ ಥರ ಅವರು ಬರೆದರು ಏನು,
ಹೊಗಳಲಾರೆನು ನಾನು ಮಾರಲೊಲ್ಲದುದನ್ನು
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 21
So is it not with me as with that Muse

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಂಸ್ತ್ರೀ – ೨
Next post ಇನ್ನೂ ಕೇಳಿರದ ಹಾಡು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…