ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ

ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ,
ಆದರೂ ಇದೆ ನನಗೆ ಜ್ಯೋತಿಷ್ಯ ನುಡಿವ ಬಲ.
ಬರಲಿರುವ ಹಿತ, ಅಹಿತ, ಪಿಡುಗು, ಋತು ಧಾಟಿಗಳ
ಕಾಲಕಾಲಕ್ಕೆ ಅದು ಹೇಳಬಲ್ಲದ್ದಲ್ಲ ;
ವ್ಯಕ್ತಿಯೊಬ್ಬನ ಬಾಳಿನೊಳಗೆ ಹಾಯುವ ಗಾಳಿ
ಸಿಡಿಲು ಮಳೆ ಗುಡುಗುಗಳ ಗುಣಿಸಬಲ್ಲದ್ದಲ್ಲ ;
ಸ್ವರ್ಗದೊಳು ಕಣ್ಣಾಡಿ ಕಂಡದ್ದ ಕಣಿಮಾಡಿ
ಅರಸು ಮಕ್ಕಳಿಗೆ ವಿವರಿಸುವ ನೀತಿಯದಲ್ಲ ;
ನಿನ್ನ ಕಣ್ಣಿನ ಕಾಂತಿ ನನಗಿತ್ತ ಶಕ್ತಿ ಅದು.
ನಿತ್ಯನಕ್ಷತ್ರ ನಿನ್ನ ಕಣ್ಣಿಂದ ಅದ ಪಡೆವೆ,
ಹೇಳುವೆನು : ಸತ್ಯಸೌಂದರ್ಯ ಜೊತೆ ಬೆರೆದು
ನಾನು ಸಂಗ್ರಹಿಸಿದ್ದ ನೀನು ಪರಿವರ್ತಿಸುವೆ.
ಇಲ್ಲವೋ, ಇದೊ ನುಡಿವೆ ಮುಂದಿನ ಭವಿಷ್ಯವನೆ:
ನಿನ್ನ ಕೊನೆಯೇ ಸತ್ಯಸೌಂದರ್ಯಕೂ ಕೊನೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 14
Not from the stars do i my judgment pluck

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಪ್ನ ಮಂಟಪ – ೬
Next post ತಿದ್ದು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…