ಹೊಸಕಿದ ವಸಂತಗಳು

ಕಣ್ಣೀರು ಬತ್ತಿಹೋದ ನನ್ನ
ಗುಳಿಬಿದ್ದ ಕಣ್ಣುಗಳಲ್ಲಿ
ನೋವಿನ ಸೆಳಕು
ಏಕೆಂದರೆ
ಮೊಗ್ಗಗಳು ಬಿರಿವಾಗ
ಹಸಿರುಟ್ಟು ನಲಿವಾಗ
ನನ್ನ ಸುಕ್ಕುಗಟ್ಟಿದ
ಕಪ್ಪು ಮುತ್ತಿದ
ಕಣ್ಣುಗಳು ಯಾತನೆಯಿಂದ
ಹನಿಗೂಡುತ್ತಿದ್ದವು.
ಎಣ್ಣಿಗಟ್ಟಿ ಮಸುಕಾದ
ಭಾರವಾಗಿ ಜೋತುಬಿದ್ದ
ನನ್ನ ಮೂಗುತಿ
ಅವ್ವನ ಹರಿದ ಸೀರೆಗೆ
ತೇಪೆಗಳ ಜೋಡಿಸಲು
ಕಾಲಿಗೆ ಗೆಜ್ಜೆ ಕಟ್ಟಿ
ಉಟ್ಟಿರುವ ಪೊರೆಗಳ ಕಳಚಿ ಬಿಚ್ಚಿದ್ದೆ.
ಕೊಳೆಯನು ಗಂಗೆಯಲಿ
ಹರಿಯಬಿಟ್ಟ ನಾನು
ಹೃದಯದಲಿ ಇಂದಿಗೂ
ಪವಿತ್ರ ಗಂಗೋತ್ರಿಯಾಗಿದ್ದೆ
ಬದುಕಿನ ಮುಸ್ಸಂಜೆಯಲಿ
ಬಿರಿಯಲ್ಲಿರುವ
ಮೊಗ್ಗುಗಳ ಕಂಡು
ಯಾತನೆ ಪಡುತ್ತಿರುವ ನಾನು
ತುಂಬಿ ಬಂದ ಕಣ್ಣುಗಳಲ್ಲಿ
ಕನಸುಗಳ ಕಾಣುತ್ತಿದ್ದೆ.
ಹೊಸಕಿ ಹಾಕಿದ ನನ್ನ
ವಸಂತಗಳ ನೆನೆಯುತ್ತಿದ್ದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನ ತಪವದಾರದೋ? ಸಿದ್ದಿ ಯಾರಿಗೋ?
Next post ಸುಳ್ಳು

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…