ಕಣ್ಣೀರು ಬತ್ತಿಹೋದ ನನ್ನ
ಗುಳಿಬಿದ್ದ ಕಣ್ಣುಗಳಲ್ಲಿ
ನೋವಿನ ಸೆಳಕು
ಏಕೆಂದರೆ
ಮೊಗ್ಗಗಳು ಬಿರಿವಾಗ
ಹಸಿರುಟ್ಟು ನಲಿವಾಗ
ನನ್ನ ಸುಕ್ಕುಗಟ್ಟಿದ
ಕಪ್ಪು ಮುತ್ತಿದ
ಕಣ್ಣುಗಳು ಯಾತನೆಯಿಂದ
ಹನಿಗೂಡುತ್ತಿದ್ದವು.
ಎಣ್ಣಿಗಟ್ಟಿ ಮಸುಕಾದ
ಭಾರವಾಗಿ ಜೋತುಬಿದ್ದ
ನನ್ನ ಮೂಗುತಿ
ಅವ್ವನ ಹರಿದ ಸೀರೆಗೆ
ತೇಪೆಗಳ ಜೋಡಿಸಲು
ಕಾಲಿಗೆ ಗೆಜ್ಜೆ ಕಟ್ಟಿ
ಉಟ್ಟಿರುವ ಪೊರೆಗಳ ಕಳಚಿ ಬಿಚ್ಚಿದ್ದೆ.
ಕೊಳೆಯನು ಗಂಗೆಯಲಿ
ಹರಿಯಬಿಟ್ಟ ನಾನು
ಹೃದಯದಲಿ ಇಂದಿಗೂ
ಪವಿತ್ರ ಗಂಗೋತ್ರಿಯಾಗಿದ್ದೆ
ಬದುಕಿನ ಮುಸ್ಸಂಜೆಯಲಿ
ಬಿರಿಯಲ್ಲಿರುವ
ಮೊಗ್ಗುಗಳ ಕಂಡು
ಯಾತನೆ ಪಡುತ್ತಿರುವ ನಾನು
ತುಂಬಿ ಬಂದ ಕಣ್ಣುಗಳಲ್ಲಿ
ಕನಸುಗಳ ಕಾಣುತ್ತಿದ್ದೆ.
ಹೊಸಕಿ ಹಾಕಿದ ನನ್ನ
ವಸಂತಗಳ ನೆನೆಯುತ್ತಿದ್ದೆ.
*****
Related Post
ಸಣ್ಣ ಕತೆ
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ದೊಡ್ಡ ಬೋರೇಗೌಡರು
ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…