ಬೆಂಜಮಿನ್ ಮೊಲಾಯಿಸ್

ಅನ್ಯಾಯದ
ಬೆಂಕಿಯಲ್ಲಿ ನೀನು
ಕುದಿದು ಕುದಿದು ಕೆಂಪಾಗಿ-
ಲಾವಾ ರಸವಾಗಿ-
ನಿನ್ನೆದೆಯ ಲಾವಾ
ಸ್ಫೋಟಗೊಂಡಾಗ
ಜ್ವಾಲಾಮುಖಿ-
ಅಗ್ನಿ ಪರ್ವತದಂತೆ
ಬಂಡೆಯಾದೆಯಾ?
ಗಟ್ಟಿಯಾದೆಯಾ ಬೆಂಜಮಿನ್.

ಕಪ್ಪು ದೇಶದ ಆಗಸದಲಿ
ಕೆಂಪು ಸೂರ್ಯನ ಉಗಮ
ನೆತ್ತಿಗೇರಲು ಬಿಡಲಿಲ್ಲ-
ಸೂರ್ಯನ – ಕತ್ತು
ಹಿಸುಕಿದರಲ್ಲ ಇವರು –
ಬರಿದಾದ ಹಾಳು ಹೊಡೆವ
ಧೂಳು ತುಂಬಿದ ದಾರಿಯಲಿ
ಚೈತ್ರದ ಹಸಿರಿನುಸಿರನು
ಚಿವುಟಿ ಹಾಕಿದರಲ್ಲಿ
ಬೆಂಜಮಿನ್ – ಕನಸುಗಳು
ಹರಡಿ ಹೋದವಲ್ಲ.

ಭೋರ್ಗರೆದು ಧುಮ್ಮಿಕ್ಕಿ
ಹೆದರಿಸುತ್ತ ಉಕ್ಕಿ ಬರುವ
ದೈತ್ಯ ಅಲೆಗಳಿಗೆ
ಎದೆಕೊಟ್ಟೆಯಾ ಬೆಂಜಮಿನ್
ಗಟ್ಟಿ ಬಂಡೆಯಾದೆಯಾ?
ಬಂಡವಾಳಶಾಹಿ ಶನಿ ಸಂತಾನದ
ಹುಟ್ಟಡಗಿಸಲು ಮತ್ತೇ
ಹುಟ್ಟಿ ಬಾ ಬೆಂಜಮಿನ್.

ನಿನ್ನ ಹೋರಾಟದ
ಉಸಿರ ಧಗೆಯಲಿ ಬೆಂದು
ಹುಟ್ಟಿದ ಸಿಡಿಲ ಮರಿಗಳು
ಸಾರಿ ಸಾರಿ ಹೇಳುತ್ತಿವೆ
ಭೂಗೋಳದ ಮೂಲೆ
ಮೂಲೆಗಳಿಂದ ಮೊಳಗುತ್ತಿದೆ-
“ಬೆಂಜಮಿನ್ ನೀನಿನ್ನೂ ಸತ್ತಿಲ್ಲ
ನೀನಿನ್ನೂ ಸತ್ತಿಲ್ಲ” ಎಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೋರ ಸೂತ್ರವಾದರೂ ಎಲ್ಲರಿಗೊಂದಾದೀತೇ?
Next post ಲಂಚ ನಿರ್ಮೂಲನಾಧಿಕಾರಿ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…