ಅಂಬೇಡ್ಕರ್ ಕುರಿತು

ಹೋರಾಟದ ಹಾದಿಯನ್ನು
ನಂಬಿ ನಡೆದ ಶಕ್ತಿಯೇ
ಕಪ್ಪು ಜನರ ಕೆಂಪು ಕಥೆಗೆ
ನಾಂದಿಯನ್ನು ಹಾಡಿದವನೇ.

ಕುಡಿಯಲು ನೀರು ಕೊಡದ
ದೇವರ ನೋಡಲು ಬಿಡದ
ಮನುಜ ಮನುಜರ ಮಧ್ಯ
ವಿಷ ಬಿತ್ತುವ ಜನಕೆ ನೀನು.

ದುಡಿಮೆಯನ್ನು ದೋಚುತ್ತ
ಬಿಸಿ ರಕ್ತವ ಹೀರುತ್ತಾ
ನೀತಿ ಶಾಸ್ತ್ರಗಳ ರಕ್ಷೆಯಲ್ಲಿ
ಅಡಗಿ ಕುಳಿತ ಭಂಡರಿಗೆ-

ದುಃಸ್ವಪ್ನವಾಗಿ ನೀನು
ಮಹಾರಾಷ್ಟ್ರದ ಮಣ್ಣಿಂದ
ದಲಿತ ಜನಗಳ ಧ್ವನಿಯಾಗಿ
ಹುಟ್ಟಿ ಬಂದ ವ್ಯಕ್ತಿಯೇ.

ದಾಸ್ಯದ ಸಂಕೋಲೆ ಕಳಚಿ
ನೂತನ ಬದುಕು ನಡೆಸಿ,
ಸ್ವಾಭಿಮಾನದ ಮಂತ್ರ
ಹೇಳಿಕೊಟ್ಟ ಧೀರನೇ.

ನಿನ್ನ ಮನಸ್ಸಿನ ನೋವು
ಭುಗಿಲೆಂದು ಕೆರಳಿ ನಿಂತು
ಚರಿತ್ರೆಯ ಪುಟದಲ್ಲಿ ಮಿಂಚಿ
ಹೊಸ ತಿರುವು ಕೊಟ್ಟಿತಿಂದು.

ಹೆಣ್ಣಿಗೆ ಮುಕ್ತಿಯಿಲ್ಲವೆಂದ
ಬೌದ್ಧ ಧರ್ಮವ ಕೊನೆಗೆ
ಎತ್ತಿ ಹಿಡಿದು ನೀನು-
ಹೆಣ್ಣಿಗೆ ಮಾಡಿದೆ ಏನನ್ನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸದ್ದಿನ ಪೇಟೆಯಳಿಸದೆ ಸಾವಯವ ವ್ಯಾಪಾರದಿಂದೇನು ?
Next post ಸಂದರ್ಶನ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…