ಅಂಬೇಡ್ಕರ್ ಕುರಿತು

ಹೋರಾಟದ ಹಾದಿಯನ್ನು
ನಂಬಿ ನಡೆದ ಶಕ್ತಿಯೇ
ಕಪ್ಪು ಜನರ ಕೆಂಪು ಕಥೆಗೆ
ನಾಂದಿಯನ್ನು ಹಾಡಿದವನೇ.

ಕುಡಿಯಲು ನೀರು ಕೊಡದ
ದೇವರ ನೋಡಲು ಬಿಡದ
ಮನುಜ ಮನುಜರ ಮಧ್ಯ
ವಿಷ ಬಿತ್ತುವ ಜನಕೆ ನೀನು.

ದುಡಿಮೆಯನ್ನು ದೋಚುತ್ತ
ಬಿಸಿ ರಕ್ತವ ಹೀರುತ್ತಾ
ನೀತಿ ಶಾಸ್ತ್ರಗಳ ರಕ್ಷೆಯಲ್ಲಿ
ಅಡಗಿ ಕುಳಿತ ಭಂಡರಿಗೆ-

ದುಃಸ್ವಪ್ನವಾಗಿ ನೀನು
ಮಹಾರಾಷ್ಟ್ರದ ಮಣ್ಣಿಂದ
ದಲಿತ ಜನಗಳ ಧ್ವನಿಯಾಗಿ
ಹುಟ್ಟಿ ಬಂದ ವ್ಯಕ್ತಿಯೇ.

ದಾಸ್ಯದ ಸಂಕೋಲೆ ಕಳಚಿ
ನೂತನ ಬದುಕು ನಡೆಸಿ,
ಸ್ವಾಭಿಮಾನದ ಮಂತ್ರ
ಹೇಳಿಕೊಟ್ಟ ಧೀರನೇ.

ನಿನ್ನ ಮನಸ್ಸಿನ ನೋವು
ಭುಗಿಲೆಂದು ಕೆರಳಿ ನಿಂತು
ಚರಿತ್ರೆಯ ಪುಟದಲ್ಲಿ ಮಿಂಚಿ
ಹೊಸ ತಿರುವು ಕೊಟ್ಟಿತಿಂದು.

ಹೆಣ್ಣಿಗೆ ಮುಕ್ತಿಯಿಲ್ಲವೆಂದ
ಬೌದ್ಧ ಧರ್ಮವ ಕೊನೆಗೆ
ಎತ್ತಿ ಹಿಡಿದು ನೀನು-
ಹೆಣ್ಣಿಗೆ ಮಾಡಿದೆ ಏನನ್ನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸದ್ದಿನ ಪೇಟೆಯಳಿಸದೆ ಸಾವಯವ ವ್ಯಾಪಾರದಿಂದೇನು ?
Next post ಸಂದರ್ಶನ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…