ಅಂಬೇಡ್ಕರ್ ಕುರಿತು

ಹೋರಾಟದ ಹಾದಿಯನ್ನು
ನಂಬಿ ನಡೆದ ಶಕ್ತಿಯೇ
ಕಪ್ಪು ಜನರ ಕೆಂಪು ಕಥೆಗೆ
ನಾಂದಿಯನ್ನು ಹಾಡಿದವನೇ.

ಕುಡಿಯಲು ನೀರು ಕೊಡದ
ದೇವರ ನೋಡಲು ಬಿಡದ
ಮನುಜ ಮನುಜರ ಮಧ್ಯ
ವಿಷ ಬಿತ್ತುವ ಜನಕೆ ನೀನು.

ದುಡಿಮೆಯನ್ನು ದೋಚುತ್ತ
ಬಿಸಿ ರಕ್ತವ ಹೀರುತ್ತಾ
ನೀತಿ ಶಾಸ್ತ್ರಗಳ ರಕ್ಷೆಯಲ್ಲಿ
ಅಡಗಿ ಕುಳಿತ ಭಂಡರಿಗೆ-

ದುಃಸ್ವಪ್ನವಾಗಿ ನೀನು
ಮಹಾರಾಷ್ಟ್ರದ ಮಣ್ಣಿಂದ
ದಲಿತ ಜನಗಳ ಧ್ವನಿಯಾಗಿ
ಹುಟ್ಟಿ ಬಂದ ವ್ಯಕ್ತಿಯೇ.

ದಾಸ್ಯದ ಸಂಕೋಲೆ ಕಳಚಿ
ನೂತನ ಬದುಕು ನಡೆಸಿ,
ಸ್ವಾಭಿಮಾನದ ಮಂತ್ರ
ಹೇಳಿಕೊಟ್ಟ ಧೀರನೇ.

ನಿನ್ನ ಮನಸ್ಸಿನ ನೋವು
ಭುಗಿಲೆಂದು ಕೆರಳಿ ನಿಂತು
ಚರಿತ್ರೆಯ ಪುಟದಲ್ಲಿ ಮಿಂಚಿ
ಹೊಸ ತಿರುವು ಕೊಟ್ಟಿತಿಂದು.

ಹೆಣ್ಣಿಗೆ ಮುಕ್ತಿಯಿಲ್ಲವೆಂದ
ಬೌದ್ಧ ಧರ್ಮವ ಕೊನೆಗೆ
ಎತ್ತಿ ಹಿಡಿದು ನೀನು-
ಹೆಣ್ಣಿಗೆ ಮಾಡಿದೆ ಏನನ್ನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸದ್ದಿನ ಪೇಟೆಯಳಿಸದೆ ಸಾವಯವ ವ್ಯಾಪಾರದಿಂದೇನು ?
Next post ಸಂದರ್ಶನ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…