Home / ಕವನ / ಕವಿತೆ / ಕೆಂಪು ದೀಪದ ಕೆಳಗೆ

ಕೆಂಪು ದೀಪದ ಕೆಳಗೆ

ಹನ್ನೆರಡು ವರ್ಷದವಳಿದ್ದಾಗ,
ನನ್ನ ಮದುವೆ ಆಯಿತು.
ದಿನಾಲೂ ಆರು ಗಂಟೆಗೆ
ಎದ್ದು ಕೂಳು ಕುದಿಸಿ,
ಸೂರ್ಯ ಕಣ್ಣು ತೆರೆಯುವ ಮೊದಲೇ
ಭತ್ತ ಕೊಯ್ಯಲು ಹೋಗುತ್ತಿದ್ದೆ.
ಸಂಜೆ ತಂದ ಕೂಲಿಯೆಲ್ಲ
ಗಂಡ ಕಿತ್ತುಕೊಳ್ಳುತ್ತಿದ್ದ.
ಕುಡಿದು ಬಂದು
ಮನಬಂದಂತೆ ಬಡಿಯುತ್ತಿದ್ದ.
ಉಪವಾಸವಿದ್ದ ಹೊಟ್ಟೆ
ಮೇಲಿ೦ದ ಹೊಡೆತಗಳ
ಸಹಿಸಬೇಕಿತ್ತು.
ನಾನೇನೋ ಸಹಿಸಬಹುದು,
ಉಪವಾಸವಿರಬಹುದು
ಆದರೆ ನನ್ನ ಮಕ್ಕಳು
ಹಸಿವಿನಿಂದ ಬಳಲುವುದನ್ನು
ಸಹಿಸಲಸಾಧ್ಯವಾಗುತ್ತಿದ್ದು,

ದಿನದಿನಕ್ಕೆ ಬುದುಕು
ಸಂಕೀರ್ಣವಾಗುತ್ತಿತ್ತು,
ನನ್ನ ಶರೀರ ದಿನದಿನವೂ
ಯಾತನ ಶಿಬಿರವಾಗುತ್ತಿತ್ತು.
ಈಗ ನಾನು
ಪಾತ್ರೆ ತೊಳೆಯುತ್ತೇನೆ.
ಕಸ ಗುಡಿಸುತ್ತೇನೆ
ಬಟ್ಟೆ ಒಗೆಯುತ್ತೇನೆ.
ನಮ್ಮ ಮಾಲೀಕರ
ಮಕ್ಕಳನ್ನು ಆಡಿಸುತ್ತೇನೆ.

ಒಂದು ದಿನ –
ಅಂದು ಮಾಲೀಕರ
ಮನೆಗೆಲಸಕ್ಕೆ ಹೋಗಿದ್ದೆ,
ಮನೆಯ ಮಂದಿಯಲ್ಲ
ಸಿನಿಮಾಕ್ಕೆ ಹೋಗಿದ್ದರು,
ಮಾಲೀಕರು ನನ್ನ
ತಂದೆಯ ವಯಸ್ಸಿನವರು
ಅವರ ಮೇಲೆ ನನಗೆ
ಪೂರ್ಣ ವಿಶ್ವಾಸವಿತ್ತು.
ಆದರೆ ಅವರು ನನ್ನ ವಿಶ್ವಾಸವನ್ನು
ನುಚ್ಚು ನೂರಾಗಿಸಿದ್ದರು.

ಅದನ್ನು ಕಂಡ ಅವನ ಪತ್ನಿ
ನನ್ನನ್ನೇ ಹೊಡೆದು ದೂರಕ್ಕಟ್ಟಿದಳು
ಗಂಡನೂ ಮನೆಯಿಂದ
ದೂರ ಮಾಡಿದನು
ಅಂದಿನಿಂದ ಇಂದಿನವರೆಗೆ
ಈ ಕೆಂಪು ದೀಪದ
ಕೆಳಗೆ ಕುಳಿತು
ನನ್ನ ಮಕ್ಕಳು ಬರುವ
ದಾರಿ ನೋಡುತ್ತಿರುವೆ.
ಬದುಕಿನ ಕೊನೆಯ
ಅಂಚಿನಲ್ಲಿರುವ ಅವರು
ಈಗಲೂ ಬರುವುದಿಲ್ಲವೇನೋ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...