Home / ಕವನ / ಕವಿತೆ / ಕೆಂಪು ದೀಪದ ಕೆಳಗೆ

ಕೆಂಪು ದೀಪದ ಕೆಳಗೆ

ಹನ್ನೆರಡು ವರ್ಷದವಳಿದ್ದಾಗ,
ನನ್ನ ಮದುವೆ ಆಯಿತು.
ದಿನಾಲೂ ಆರು ಗಂಟೆಗೆ
ಎದ್ದು ಕೂಳು ಕುದಿಸಿ,
ಸೂರ್ಯ ಕಣ್ಣು ತೆರೆಯುವ ಮೊದಲೇ
ಭತ್ತ ಕೊಯ್ಯಲು ಹೋಗುತ್ತಿದ್ದೆ.
ಸಂಜೆ ತಂದ ಕೂಲಿಯೆಲ್ಲ
ಗಂಡ ಕಿತ್ತುಕೊಳ್ಳುತ್ತಿದ್ದ.
ಕುಡಿದು ಬಂದು
ಮನಬಂದಂತೆ ಬಡಿಯುತ್ತಿದ್ದ.
ಉಪವಾಸವಿದ್ದ ಹೊಟ್ಟೆ
ಮೇಲಿ೦ದ ಹೊಡೆತಗಳ
ಸಹಿಸಬೇಕಿತ್ತು.
ನಾನೇನೋ ಸಹಿಸಬಹುದು,
ಉಪವಾಸವಿರಬಹುದು
ಆದರೆ ನನ್ನ ಮಕ್ಕಳು
ಹಸಿವಿನಿಂದ ಬಳಲುವುದನ್ನು
ಸಹಿಸಲಸಾಧ್ಯವಾಗುತ್ತಿದ್ದು,

ದಿನದಿನಕ್ಕೆ ಬುದುಕು
ಸಂಕೀರ್ಣವಾಗುತ್ತಿತ್ತು,
ನನ್ನ ಶರೀರ ದಿನದಿನವೂ
ಯಾತನ ಶಿಬಿರವಾಗುತ್ತಿತ್ತು.
ಈಗ ನಾನು
ಪಾತ್ರೆ ತೊಳೆಯುತ್ತೇನೆ.
ಕಸ ಗುಡಿಸುತ್ತೇನೆ
ಬಟ್ಟೆ ಒಗೆಯುತ್ತೇನೆ.
ನಮ್ಮ ಮಾಲೀಕರ
ಮಕ್ಕಳನ್ನು ಆಡಿಸುತ್ತೇನೆ.

ಒಂದು ದಿನ –
ಅಂದು ಮಾಲೀಕರ
ಮನೆಗೆಲಸಕ್ಕೆ ಹೋಗಿದ್ದೆ,
ಮನೆಯ ಮಂದಿಯಲ್ಲ
ಸಿನಿಮಾಕ್ಕೆ ಹೋಗಿದ್ದರು,
ಮಾಲೀಕರು ನನ್ನ
ತಂದೆಯ ವಯಸ್ಸಿನವರು
ಅವರ ಮೇಲೆ ನನಗೆ
ಪೂರ್ಣ ವಿಶ್ವಾಸವಿತ್ತು.
ಆದರೆ ಅವರು ನನ್ನ ವಿಶ್ವಾಸವನ್ನು
ನುಚ್ಚು ನೂರಾಗಿಸಿದ್ದರು.

ಅದನ್ನು ಕಂಡ ಅವನ ಪತ್ನಿ
ನನ್ನನ್ನೇ ಹೊಡೆದು ದೂರಕ್ಕಟ್ಟಿದಳು
ಗಂಡನೂ ಮನೆಯಿಂದ
ದೂರ ಮಾಡಿದನು
ಅಂದಿನಿಂದ ಇಂದಿನವರೆಗೆ
ಈ ಕೆಂಪು ದೀಪದ
ಕೆಳಗೆ ಕುಳಿತು
ನನ್ನ ಮಕ್ಕಳು ಬರುವ
ದಾರಿ ನೋಡುತ್ತಿರುವೆ.
ಬದುಕಿನ ಕೊನೆಯ
ಅಂಚಿನಲ್ಲಿರುವ ಅವರು
ಈಗಲೂ ಬರುವುದಿಲ್ಲವೇನೋ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...