ನಮ್ಮನ್ನು ದೂರುವುದು ಯಾವ ನ್ಯಾಯ

ಹೊಂದಿಕೊಂಡು ಹೋಗದ ಹೆಣ್ಣು
ಮನೆಯ ಒಡೆಯುವಳೆನ್ನುವರು
ಎಲ್ಲಾ ನಿಂದನೆಯ ನಮ್ಮ ತಲೆಗೆ ಕಟ್ಟುವರು
ವಿಚಾರ ಮಾಡುವವರು ಯಾರೂ ಇಲ್ಲ.

ಎಳೆಯ ಹುಡುಗಿಯ ತಂದು
ಮನೆದುಂಬಿಸಿ ಕೊಂಡಾಗ
ಹ್ಯಾಗೆ ನಡೆಸಿ ಕೊಳ್ಳಬೇಕಂತಾ
ತಿಳಿದಿಹರಾ?

ಅಪ್ಪ, ಅಮ್ಮನ ಮನೆಯಲ್ಲಿ
ಬದುಕನ್ನು ಎಷ್ಟೇ ಹತ್ತಿರದಿಂದ ನೋಡಿದರೂ ಸಹ
ಮುಖ್ಯ! ಮುಖಾಮುಖಿ ಇಲ್ಲಿ ತಾನೆ ?

ಅಲ್ಲಿ, ಆಡುತ್ತ ಕಲಿತಿದ್ದನ್ನು
ಇಲ್ಲಿ ಗಂಡನ ಮನೆಯಲ್ಲಿ
ಪ್ರಯೋಗಿಸಬೇಕಾಗಿ ಬಂದಾಗ
ತಪ್ಪುಗಳಾಗುವುದು ಸಹಜ ತಾನೆ ?

ಆಗೆಲ್ಲಾ! ತಿದ್ದಿ ತಿಳಿಸಿ ಹೇಳುವರಾರು ?
ಹಿರಿತನದ ಹೆಸರಲ್ಲಿ
ಬಯ್ದು ಬಡಿದು ಕಂಗೆಡಿಸುವರೆ ಬಹಳ ತಾನೆ ?
ಆಗ ಮನಸಿಗೆ ಏನನ್ನಿಸುತ್ತೆ
ನೀವೆ ಹೇಳಿ.

ಪ್ರಾಯವು ತುಂಬಾ ರಮ್ಯವಾದದ್ದು
ತಲೆತುಂಬಾ ನೂರಾರು ಸಿಹಿ ಸಿಹಿ ಕಲ್ಪನೆ, ಕನಸುಗಳು
ಪುಕ್ಕ ಬಿಚ್ಚಿದ ನವಿಲಿನಂತೆ ಒಂದೇ ಸಮನೆ ಕುಣಿಯುತ್ತಿರುತ್ತವೆ
ಯಾವುದು ಮಾಡೋಣ, ಹೇಗೆ ತಣಿಯೋಣ ಅನ್ನಿಸುತ್ತಿರುತ್ತದೆ.
ಇಂತದಕ್ಕೆಲ್ಲಾ ಒಟ್ಟು ಕುಟಂಬದಲ್ಲಿ ಆಸ್ಪದವಿರುತ್ತದೆಯೆ?

ಸರಸ ಸಲ್ಲಾಪ ವಿಹಾರ ವಿನೋದಗಳು ಗೌರವವಲ್ಲ ಎನ್ನುವಾಗ
ಮೂರ ಹೊತ್ತು ಮೂಗು ಹಿಡಿದುಕೊಂಡು ದುಡಿಯುತ್ತಿರಬೇಕೆಂದಾಗ
ಕೆಲವೊಮ್ಮೆ ಏಕಾಂತದ ಸಾಧನೆಯ ದುಸ್ತರವಾಗುವಾಗ
ದಿನ ದಿನಕ್ಕೆ ಕಿಚ್ಚು ಪುಟವಾಗುತ್ತ ಹೋಗುವುದೇ ಹೊರತು
ತಣಿಯುವುದಿಲ್ಲ;
ಅಂದಾಗ ಏನು ಮಾಡಬೇಕು ?

ಕೂಡಿ ಇದ್ದಾಗ ವ್ಯಕ್ತಿ ಗೌಣವಾಗುವನು
ಒಟ್ಟಾರೆಯ ವಿಚಾರಗಳು ತೂಕವಾಗುವವು
ಹೋಲಿಕೆ, ವ್ಯತ್ಯಾಸ ಹುಟ್ಟಿ ಮನಸು ರಾಡಿಯಾಗುವುದು
ತಾರುಣ್ಯದ ವಿಶಿಷ್ಟ ಬೆಳವಣಿಗೆಯಲ್ಲಿ
ತಂದೆ ತಾಯಿ ಅಣ್ಣ ತಮ್ಮಂದಿರೆಂಬ ಅನುಬಂಧದ ಕಾವು ತಗ್ಗುವುದು
ಆಗ…..
ಇದರ ಹಿಂದೆ ಇಷ್ಟು ಇನ್ನೆಷ್ಟೋ ಇರುವಾಗ
ನಮ್ಮನ್ನು ದೂರುವುದು ಯಾವ ನ್ಯಾಯ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲಿಗೆ ಕಟ್ಟಿದ ಗುಂಡು
Next post ಸಂಬಂಧ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys