Home / ಕವನ / ಕವಿತೆ / ನಮ್ಮನ್ನು ದೂರುವುದು ಯಾವ ನ್ಯಾಯ

ನಮ್ಮನ್ನು ದೂರುವುದು ಯಾವ ನ್ಯಾಯ

ಹೊಂದಿಕೊಂಡು ಹೋಗದ ಹೆಣ್ಣು
ಮನೆಯ ಒಡೆಯುವಳೆನ್ನುವರು
ಎಲ್ಲಾ ನಿಂದನೆಯ ನಮ್ಮ ತಲೆಗೆ ಕಟ್ಟುವರು
ವಿಚಾರ ಮಾಡುವವರು ಯಾರೂ ಇಲ್ಲ.

ಎಳೆಯ ಹುಡುಗಿಯ ತಂದು
ಮನೆದುಂಬಿಸಿ ಕೊಂಡಾಗ
ಹ್ಯಾಗೆ ನಡೆಸಿ ಕೊಳ್ಳಬೇಕಂತಾ
ತಿಳಿದಿಹರಾ?

ಅಪ್ಪ, ಅಮ್ಮನ ಮನೆಯಲ್ಲಿ
ಬದುಕನ್ನು ಎಷ್ಟೇ ಹತ್ತಿರದಿಂದ ನೋಡಿದರೂ ಸಹ
ಮುಖ್ಯ! ಮುಖಾಮುಖಿ ಇಲ್ಲಿ ತಾನೆ ?

ಅಲ್ಲಿ, ಆಡುತ್ತ ಕಲಿತಿದ್ದನ್ನು
ಇಲ್ಲಿ ಗಂಡನ ಮನೆಯಲ್ಲಿ
ಪ್ರಯೋಗಿಸಬೇಕಾಗಿ ಬಂದಾಗ
ತಪ್ಪುಗಳಾಗುವುದು ಸಹಜ ತಾನೆ ?

ಆಗೆಲ್ಲಾ! ತಿದ್ದಿ ತಿಳಿಸಿ ಹೇಳುವರಾರು ?
ಹಿರಿತನದ ಹೆಸರಲ್ಲಿ
ಬಯ್ದು ಬಡಿದು ಕಂಗೆಡಿಸುವರೆ ಬಹಳ ತಾನೆ ?
ಆಗ ಮನಸಿಗೆ ಏನನ್ನಿಸುತ್ತೆ
ನೀವೆ ಹೇಳಿ.

ಪ್ರಾಯವು ತುಂಬಾ ರಮ್ಯವಾದದ್ದು
ತಲೆತುಂಬಾ ನೂರಾರು ಸಿಹಿ ಸಿಹಿ ಕಲ್ಪನೆ, ಕನಸುಗಳು
ಪುಕ್ಕ ಬಿಚ್ಚಿದ ನವಿಲಿನಂತೆ ಒಂದೇ ಸಮನೆ ಕುಣಿಯುತ್ತಿರುತ್ತವೆ
ಯಾವುದು ಮಾಡೋಣ, ಹೇಗೆ ತಣಿಯೋಣ ಅನ್ನಿಸುತ್ತಿರುತ್ತದೆ.
ಇಂತದಕ್ಕೆಲ್ಲಾ ಒಟ್ಟು ಕುಟಂಬದಲ್ಲಿ ಆಸ್ಪದವಿರುತ್ತದೆಯೆ?

ಸರಸ ಸಲ್ಲಾಪ ವಿಹಾರ ವಿನೋದಗಳು ಗೌರವವಲ್ಲ ಎನ್ನುವಾಗ
ಮೂರ ಹೊತ್ತು ಮೂಗು ಹಿಡಿದುಕೊಂಡು ದುಡಿಯುತ್ತಿರಬೇಕೆಂದಾಗ
ಕೆಲವೊಮ್ಮೆ ಏಕಾಂತದ ಸಾಧನೆಯ ದುಸ್ತರವಾಗುವಾಗ
ದಿನ ದಿನಕ್ಕೆ ಕಿಚ್ಚು ಪುಟವಾಗುತ್ತ ಹೋಗುವುದೇ ಹೊರತು
ತಣಿಯುವುದಿಲ್ಲ;
ಅಂದಾಗ ಏನು ಮಾಡಬೇಕು ?

ಕೂಡಿ ಇದ್ದಾಗ ವ್ಯಕ್ತಿ ಗೌಣವಾಗುವನು
ಒಟ್ಟಾರೆಯ ವಿಚಾರಗಳು ತೂಕವಾಗುವವು
ಹೋಲಿಕೆ, ವ್ಯತ್ಯಾಸ ಹುಟ್ಟಿ ಮನಸು ರಾಡಿಯಾಗುವುದು
ತಾರುಣ್ಯದ ವಿಶಿಷ್ಟ ಬೆಳವಣಿಗೆಯಲ್ಲಿ
ತಂದೆ ತಾಯಿ ಅಣ್ಣ ತಮ್ಮಂದಿರೆಂಬ ಅನುಬಂಧದ ಕಾವು ತಗ್ಗುವುದು
ಆಗ…..
ಇದರ ಹಿಂದೆ ಇಷ್ಟು ಇನ್ನೆಷ್ಟೋ ಇರುವಾಗ
ನಮ್ಮನ್ನು ದೂರುವುದು ಯಾವ ನ್ಯಾಯ ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...