Home / ಕವನ / ಕವಿತೆ / ನಮ್ಮನ್ನು ದೂರುವುದು ಯಾವ ನ್ಯಾಯ

ನಮ್ಮನ್ನು ದೂರುವುದು ಯಾವ ನ್ಯಾಯ

ಹೊಂದಿಕೊಂಡು ಹೋಗದ ಹೆಣ್ಣು
ಮನೆಯ ಒಡೆಯುವಳೆನ್ನುವರು
ಎಲ್ಲಾ ನಿಂದನೆಯ ನಮ್ಮ ತಲೆಗೆ ಕಟ್ಟುವರು
ವಿಚಾರ ಮಾಡುವವರು ಯಾರೂ ಇಲ್ಲ.

ಎಳೆಯ ಹುಡುಗಿಯ ತಂದು
ಮನೆದುಂಬಿಸಿ ಕೊಂಡಾಗ
ಹ್ಯಾಗೆ ನಡೆಸಿ ಕೊಳ್ಳಬೇಕಂತಾ
ತಿಳಿದಿಹರಾ?

ಅಪ್ಪ, ಅಮ್ಮನ ಮನೆಯಲ್ಲಿ
ಬದುಕನ್ನು ಎಷ್ಟೇ ಹತ್ತಿರದಿಂದ ನೋಡಿದರೂ ಸಹ
ಮುಖ್ಯ! ಮುಖಾಮುಖಿ ಇಲ್ಲಿ ತಾನೆ ?

ಅಲ್ಲಿ, ಆಡುತ್ತ ಕಲಿತಿದ್ದನ್ನು
ಇಲ್ಲಿ ಗಂಡನ ಮನೆಯಲ್ಲಿ
ಪ್ರಯೋಗಿಸಬೇಕಾಗಿ ಬಂದಾಗ
ತಪ್ಪುಗಳಾಗುವುದು ಸಹಜ ತಾನೆ ?

ಆಗೆಲ್ಲಾ! ತಿದ್ದಿ ತಿಳಿಸಿ ಹೇಳುವರಾರು ?
ಹಿರಿತನದ ಹೆಸರಲ್ಲಿ
ಬಯ್ದು ಬಡಿದು ಕಂಗೆಡಿಸುವರೆ ಬಹಳ ತಾನೆ ?
ಆಗ ಮನಸಿಗೆ ಏನನ್ನಿಸುತ್ತೆ
ನೀವೆ ಹೇಳಿ.

ಪ್ರಾಯವು ತುಂಬಾ ರಮ್ಯವಾದದ್ದು
ತಲೆತುಂಬಾ ನೂರಾರು ಸಿಹಿ ಸಿಹಿ ಕಲ್ಪನೆ, ಕನಸುಗಳು
ಪುಕ್ಕ ಬಿಚ್ಚಿದ ನವಿಲಿನಂತೆ ಒಂದೇ ಸಮನೆ ಕುಣಿಯುತ್ತಿರುತ್ತವೆ
ಯಾವುದು ಮಾಡೋಣ, ಹೇಗೆ ತಣಿಯೋಣ ಅನ್ನಿಸುತ್ತಿರುತ್ತದೆ.
ಇಂತದಕ್ಕೆಲ್ಲಾ ಒಟ್ಟು ಕುಟಂಬದಲ್ಲಿ ಆಸ್ಪದವಿರುತ್ತದೆಯೆ?

ಸರಸ ಸಲ್ಲಾಪ ವಿಹಾರ ವಿನೋದಗಳು ಗೌರವವಲ್ಲ ಎನ್ನುವಾಗ
ಮೂರ ಹೊತ್ತು ಮೂಗು ಹಿಡಿದುಕೊಂಡು ದುಡಿಯುತ್ತಿರಬೇಕೆಂದಾಗ
ಕೆಲವೊಮ್ಮೆ ಏಕಾಂತದ ಸಾಧನೆಯ ದುಸ್ತರವಾಗುವಾಗ
ದಿನ ದಿನಕ್ಕೆ ಕಿಚ್ಚು ಪುಟವಾಗುತ್ತ ಹೋಗುವುದೇ ಹೊರತು
ತಣಿಯುವುದಿಲ್ಲ;
ಅಂದಾಗ ಏನು ಮಾಡಬೇಕು ?

ಕೂಡಿ ಇದ್ದಾಗ ವ್ಯಕ್ತಿ ಗೌಣವಾಗುವನು
ಒಟ್ಟಾರೆಯ ವಿಚಾರಗಳು ತೂಕವಾಗುವವು
ಹೋಲಿಕೆ, ವ್ಯತ್ಯಾಸ ಹುಟ್ಟಿ ಮನಸು ರಾಡಿಯಾಗುವುದು
ತಾರುಣ್ಯದ ವಿಶಿಷ್ಟ ಬೆಳವಣಿಗೆಯಲ್ಲಿ
ತಂದೆ ತಾಯಿ ಅಣ್ಣ ತಮ್ಮಂದಿರೆಂಬ ಅನುಬಂಧದ ಕಾವು ತಗ್ಗುವುದು
ಆಗ…..
ಇದರ ಹಿಂದೆ ಇಷ್ಟು ಇನ್ನೆಷ್ಟೋ ಇರುವಾಗ
ನಮ್ಮನ್ನು ದೂರುವುದು ಯಾವ ನ್ಯಾಯ ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...