Home / ಕವನ / ಕವಿತೆ / ಪರಿವರ್‍ತನೆ

ಪರಿವರ್‍ತನೆ

ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ
ಯಾವುದೊಂದು ಆಗಿದ್ದ೦ಗೀಗಿಲ್ಲ
ಎಲ್ಲಾ ಬದಲಾಗಿ ಬಿಟ್ಟಿದೆ,
ಯಾರಿದ್ದಾರೆ ಆಗಿನವರು?
ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ
ಆಗಿದ್ದಂಗೆ ಯಾರಿದ್ದಾರೆ ಈಗ ?

ನಗ ನಗ್ತಾ ಕರೆದು ಮಾತಾಡೋರಿಲ್ಲ
ಹರ್ಷೋಲ್ಲಾಸ ತೋರುವರಿಲ್ಲ
ಮನೆಯಲ್ಲೂ ಕೂಡಾ ಅಷ್ಟೆ ಆಗಿದೆ
ಅಪ್ಪ, ಅಮ್ಮನಿಗೆ ವಯಸ್ಸಾಗಿ, ಶಕ್ತಿ, ಧ್ವನಿ ಉಡುಗಿಹೋಗಿ
ಚಲಾವಣೆಯ ಕಳೆದು ಕೊಂಡಿಹರು
ಮಾಡಿದ್ದು ಉಣ್ಣಬೇಕು, ಬಾಯ್ಮುಚ್ಚಿಕೊಂಡಿರಬೇಕು

ನಾನೇನಾದರೂ ಊರಿಗೆ ಹೋದರೆ
ಒಂದೇ ಸಮನೆ ಹೊಟ್ಟೆ ಸುಟ್ಟುಕೊಳ್ಳುವರು
ಇಲ್ಲೊಂದು ನನ್ಮನೆ ಇದೆಯೆಂದು ಆಮಗಾ
ಊರಿಂದ ಬಂದರೆ
ಇವರು ನೋಡಲ್ಲ ಮಾಡಲ್ಲ’ ಎಂದು
ಹೀಗಿರುವಾಗ ಮೇಲಿಂದ ಮೇಲೆ ನಾನ್ಯಾಕೆ ಹೋಗಿ
ಅವರ ಗಾಯದ ಮೇಲೆ ಬರೆ ಎಳೆದು ಬರಬೇಕು.

ನನಗೆ ಅವರ ಒಂದು ಕೊರಗಾಗಿ ಬಿಟ್ಟಿದೆ
ಹೋದರೆ ಒಂದು.. ಹೋಗದಿದ್ದರೆ ಇನ್ನೊಂದು
ಹೋಗಿ ಬಂದು ಮಾಡದೆ ಇದ್ದರೆ
ಎಲ್ಲರೂ ದೂರಾಗಿ ಬಿಟ್ಟರುಯೆಂದು ನೊಂದು ಕೊಳ್ಳುವರು.
ಈಗ ಅಣ್ಣ ಅತ್ತಿಗೆದೇ ಎಲ್ಲಾ ಕಾರುಬಾರು
ಅವರೆಲ್ಲಾ ಗಮನ ತಮ್ಮ ತಮ್ಮ ಮಕ್ಕಳ ಕಡೆಗೆ
ಹೊಸದಾಗಿ ಬೆಳೆದಂತ ಸಂಬಂಧದ ಕಡೆಗೆ
ಅಣ್ಣ ತಮ್ಮಂದಿರು ಒಂದಾಗಿ ಇದ್ದವರು ಬೇರೆ ಆಗಿದ್ದಾರೆ
ಒಬ್ಬರ ಮುಖ ಒಬ್ಬರಿಗಿಲ್ಲ
ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗಲ್ಲ
ಸಣ್ಣದ್ದು, ಪುಟ್ಟದ್ದಕ್ಕೆ… ಕಡಿದಾಟ, ಬಡಿದಾಟ
ರಕ್ತ ಸಂಬಂಧದ ಅರ್ಥವನ್ನೇ ಕೆಡಿಸಿಹರು.

ನೆಟ್ಟ ನೇರನೆ ಒಂದೇ ಒಂದು ಮಾತಿಲ್ಲ
ಬಾಯಿ ಬಿಟ್ಟರೆ ಸಾಕು ಬರಿಕೊಂಕು ಡೊಂಕು
ತಮ್ಮ ತಮ್ಮದೆ ಅವರಿಗೆ ದೊಡ್ಡದಾಗಿ ಬಿಟ್ಟಿಹದು
ಹೋದರೂ ಕೂಡ ಮುಖ ಕೊಟ್ಟು ಸರಿಯಾಗಿ ಮಾತಾಡುವುದಿಲ್ಲ
ಒಳ್ಳೆದೊಂದು ಮಾತಿಲ್ಲ ಕತೆಯಿಲ್ಲ
ಬಂದವಳೆ ಅಂದರೆ ಯಾಕಂತೆ? ಅನ್ನದಾಗ
ಹೋಗೋದರಲ್ಲೇನಾದರೂ ಆರ್ಥ ವಿದೆಯಾ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...