Home / ಕವನ / ಕವಿತೆ / ಪರಿವರ್‍ತನೆ

ಪರಿವರ್‍ತನೆ

ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ
ಯಾವುದೊಂದು ಆಗಿದ್ದ೦ಗೀಗಿಲ್ಲ
ಎಲ್ಲಾ ಬದಲಾಗಿ ಬಿಟ್ಟಿದೆ,
ಯಾರಿದ್ದಾರೆ ಆಗಿನವರು?
ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ
ಆಗಿದ್ದಂಗೆ ಯಾರಿದ್ದಾರೆ ಈಗ ?

ನಗ ನಗ್ತಾ ಕರೆದು ಮಾತಾಡೋರಿಲ್ಲ
ಹರ್ಷೋಲ್ಲಾಸ ತೋರುವರಿಲ್ಲ
ಮನೆಯಲ್ಲೂ ಕೂಡಾ ಅಷ್ಟೆ ಆಗಿದೆ
ಅಪ್ಪ, ಅಮ್ಮನಿಗೆ ವಯಸ್ಸಾಗಿ, ಶಕ್ತಿ, ಧ್ವನಿ ಉಡುಗಿಹೋಗಿ
ಚಲಾವಣೆಯ ಕಳೆದು ಕೊಂಡಿಹರು
ಮಾಡಿದ್ದು ಉಣ್ಣಬೇಕು, ಬಾಯ್ಮುಚ್ಚಿಕೊಂಡಿರಬೇಕು

ನಾನೇನಾದರೂ ಊರಿಗೆ ಹೋದರೆ
ಒಂದೇ ಸಮನೆ ಹೊಟ್ಟೆ ಸುಟ್ಟುಕೊಳ್ಳುವರು
ಇಲ್ಲೊಂದು ನನ್ಮನೆ ಇದೆಯೆಂದು ಆಮಗಾ
ಊರಿಂದ ಬಂದರೆ
ಇವರು ನೋಡಲ್ಲ ಮಾಡಲ್ಲ’ ಎಂದು
ಹೀಗಿರುವಾಗ ಮೇಲಿಂದ ಮೇಲೆ ನಾನ್ಯಾಕೆ ಹೋಗಿ
ಅವರ ಗಾಯದ ಮೇಲೆ ಬರೆ ಎಳೆದು ಬರಬೇಕು.

ನನಗೆ ಅವರ ಒಂದು ಕೊರಗಾಗಿ ಬಿಟ್ಟಿದೆ
ಹೋದರೆ ಒಂದು.. ಹೋಗದಿದ್ದರೆ ಇನ್ನೊಂದು
ಹೋಗಿ ಬಂದು ಮಾಡದೆ ಇದ್ದರೆ
ಎಲ್ಲರೂ ದೂರಾಗಿ ಬಿಟ್ಟರುಯೆಂದು ನೊಂದು ಕೊಳ್ಳುವರು.
ಈಗ ಅಣ್ಣ ಅತ್ತಿಗೆದೇ ಎಲ್ಲಾ ಕಾರುಬಾರು
ಅವರೆಲ್ಲಾ ಗಮನ ತಮ್ಮ ತಮ್ಮ ಮಕ್ಕಳ ಕಡೆಗೆ
ಹೊಸದಾಗಿ ಬೆಳೆದಂತ ಸಂಬಂಧದ ಕಡೆಗೆ
ಅಣ್ಣ ತಮ್ಮಂದಿರು ಒಂದಾಗಿ ಇದ್ದವರು ಬೇರೆ ಆಗಿದ್ದಾರೆ
ಒಬ್ಬರ ಮುಖ ಒಬ್ಬರಿಗಿಲ್ಲ
ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗಲ್ಲ
ಸಣ್ಣದ್ದು, ಪುಟ್ಟದ್ದಕ್ಕೆ… ಕಡಿದಾಟ, ಬಡಿದಾಟ
ರಕ್ತ ಸಂಬಂಧದ ಅರ್ಥವನ್ನೇ ಕೆಡಿಸಿಹರು.

ನೆಟ್ಟ ನೇರನೆ ಒಂದೇ ಒಂದು ಮಾತಿಲ್ಲ
ಬಾಯಿ ಬಿಟ್ಟರೆ ಸಾಕು ಬರಿಕೊಂಕು ಡೊಂಕು
ತಮ್ಮ ತಮ್ಮದೆ ಅವರಿಗೆ ದೊಡ್ಡದಾಗಿ ಬಿಟ್ಟಿಹದು
ಹೋದರೂ ಕೂಡ ಮುಖ ಕೊಟ್ಟು ಸರಿಯಾಗಿ ಮಾತಾಡುವುದಿಲ್ಲ
ಒಳ್ಳೆದೊಂದು ಮಾತಿಲ್ಲ ಕತೆಯಿಲ್ಲ
ಬಂದವಳೆ ಅಂದರೆ ಯಾಕಂತೆ? ಅನ್ನದಾಗ
ಹೋಗೋದರಲ್ಲೇನಾದರೂ ಆರ್ಥ ವಿದೆಯಾ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...