ಪರಿವರ್‍ತನೆ

ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ
ಯಾವುದೊಂದು ಆಗಿದ್ದ೦ಗೀಗಿಲ್ಲ
ಎಲ್ಲಾ ಬದಲಾಗಿ ಬಿಟ್ಟಿದೆ,
ಯಾರಿದ್ದಾರೆ ಆಗಿನವರು?
ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ
ಆಗಿದ್ದಂಗೆ ಯಾರಿದ್ದಾರೆ ಈಗ ?

ನಗ ನಗ್ತಾ ಕರೆದು ಮಾತಾಡೋರಿಲ್ಲ
ಹರ್ಷೋಲ್ಲಾಸ ತೋರುವರಿಲ್ಲ
ಮನೆಯಲ್ಲೂ ಕೂಡಾ ಅಷ್ಟೆ ಆಗಿದೆ
ಅಪ್ಪ, ಅಮ್ಮನಿಗೆ ವಯಸ್ಸಾಗಿ, ಶಕ್ತಿ, ಧ್ವನಿ ಉಡುಗಿಹೋಗಿ
ಚಲಾವಣೆಯ ಕಳೆದು ಕೊಂಡಿಹರು
ಮಾಡಿದ್ದು ಉಣ್ಣಬೇಕು, ಬಾಯ್ಮುಚ್ಚಿಕೊಂಡಿರಬೇಕು

ನಾನೇನಾದರೂ ಊರಿಗೆ ಹೋದರೆ
ಒಂದೇ ಸಮನೆ ಹೊಟ್ಟೆ ಸುಟ್ಟುಕೊಳ್ಳುವರು
ಇಲ್ಲೊಂದು ನನ್ಮನೆ ಇದೆಯೆಂದು ಆಮಗಾ
ಊರಿಂದ ಬಂದರೆ
ಇವರು ನೋಡಲ್ಲ ಮಾಡಲ್ಲ’ ಎಂದು
ಹೀಗಿರುವಾಗ ಮೇಲಿಂದ ಮೇಲೆ ನಾನ್ಯಾಕೆ ಹೋಗಿ
ಅವರ ಗಾಯದ ಮೇಲೆ ಬರೆ ಎಳೆದು ಬರಬೇಕು.

ನನಗೆ ಅವರ ಒಂದು ಕೊರಗಾಗಿ ಬಿಟ್ಟಿದೆ
ಹೋದರೆ ಒಂದು.. ಹೋಗದಿದ್ದರೆ ಇನ್ನೊಂದು
ಹೋಗಿ ಬಂದು ಮಾಡದೆ ಇದ್ದರೆ
ಎಲ್ಲರೂ ದೂರಾಗಿ ಬಿಟ್ಟರುಯೆಂದು ನೊಂದು ಕೊಳ್ಳುವರು.
ಈಗ ಅಣ್ಣ ಅತ್ತಿಗೆದೇ ಎಲ್ಲಾ ಕಾರುಬಾರು
ಅವರೆಲ್ಲಾ ಗಮನ ತಮ್ಮ ತಮ್ಮ ಮಕ್ಕಳ ಕಡೆಗೆ
ಹೊಸದಾಗಿ ಬೆಳೆದಂತ ಸಂಬಂಧದ ಕಡೆಗೆ
ಅಣ್ಣ ತಮ್ಮಂದಿರು ಒಂದಾಗಿ ಇದ್ದವರು ಬೇರೆ ಆಗಿದ್ದಾರೆ
ಒಬ್ಬರ ಮುಖ ಒಬ್ಬರಿಗಿಲ್ಲ
ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗಲ್ಲ
ಸಣ್ಣದ್ದು, ಪುಟ್ಟದ್ದಕ್ಕೆ… ಕಡಿದಾಟ, ಬಡಿದಾಟ
ರಕ್ತ ಸಂಬಂಧದ ಅರ್ಥವನ್ನೇ ಕೆಡಿಸಿಹರು.

ನೆಟ್ಟ ನೇರನೆ ಒಂದೇ ಒಂದು ಮಾತಿಲ್ಲ
ಬಾಯಿ ಬಿಟ್ಟರೆ ಸಾಕು ಬರಿಕೊಂಕು ಡೊಂಕು
ತಮ್ಮ ತಮ್ಮದೆ ಅವರಿಗೆ ದೊಡ್ಡದಾಗಿ ಬಿಟ್ಟಿಹದು
ಹೋದರೂ ಕೂಡ ಮುಖ ಕೊಟ್ಟು ಸರಿಯಾಗಿ ಮಾತಾಡುವುದಿಲ್ಲ
ಒಳ್ಳೆದೊಂದು ಮಾತಿಲ್ಲ ಕತೆಯಿಲ್ಲ
ಬಂದವಳೆ ಅಂದರೆ ಯಾಕಂತೆ? ಅನ್ನದಾಗ
ಹೋಗೋದರಲ್ಲೇನಾದರೂ ಆರ್ಥ ವಿದೆಯಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮೊಳಗೊಬ್ಬ ನಾಜೂಕಯ್ಯ
Next post ಸೇವೆ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys