ಎಲ್ಲಿದೆ ನನ್ನ ಕಾಶ್ಮೀರ

ಭೂಗೋಳದ ತುಂಬ
ಕಣ್ಣಾಡಿಸಿ ನೋಡಿದೆ-
ನನ್ನ ಸುಂದರ ಕಾಶ್ಮೀರ
ಕಾಣುತ್ತಲೇ ಇಲ್ಲ,
ಎಲ್ಲಿದೆ ಅ ನಿಸರ್ಗದ ಬೀಡು-
ಪ್ರವಾಸಿಗರ ಸ್ವರ್ಗದ ನೆಲೆವೀಡು,

ಸುಂದರವಾದ ‘ದಲೆ’ ಸರೋವರದ
ತಿಳಿ ನೀರನು ಕೆಂಪಾಗಿಸಿದ
ವ್ಯವಸ್ಥೆಯ ವಕ್ತಾರರೇ
ತೋರಿಸಿ ಕೊಡಿ ನನ್ನ
ಹೂವಿನ ಕಾಶ್ಮೀರ

ಗುಂಡಿನ ಸದ್ದಿಗೆ
ಆಟವನೇ ಮರೆತು
ಶಾಲೆಯ ಮುಖ ಕಾಣದೇ
ತಾಯ ಮಡಿಲ ಸೇರಿದ
ಪುಟಾಣಿಗಳ ಕಿಲಕಿಲ
ಎಲ್ಲಿ ಮಾಯವಾದವು ಹೇಳಿ?

ಶಾಂತ ಸರೋವರಗಳಿಂದು
ಹಿಂಸೆಯ ರೂಪ ತಾಳಿ,
ರಕ್ತದೋಕುಳಿಯಿಂದ ಕೆಂಪಾಗಿವೆ
ಎಲ್ಲಿದೆ ತೋರಿಸಿ,
ತಾವರೆಗಳಿಂದ ತುಂಬಿದ
ನನ್ನ ಕನಸಿನ ಕಾಶ್ಮೀರ

ನಾನು ಮತ್ತೆ ಹುಟ್ಟುವದಾದರೆ
ಸ್ವರ್ಗದ ಕಾಶ್ಮೀರದಲ್ಲೇ
ಹುಟ್ಟಬೇಕೆನ್ನುತ್ತಿದ್ದೆ,
ಆ ನನ್ನ ಕಾಶ್ಮೀರದಲಿ
ರಾಶಿರಾಶಿಯಾಗಿ ಬಿದ್ದ ಹೆಣಗಳು
ಕಾದು ಕುಳಿತಿರುವ
ರಣಹದ್ದುಗಳು

ಅರಳಲೊಲ್ಲದೇ ಬಾಡಿ
ಬಿದ್ದಿರುವ ತಾವರೆಗಳು
ಜನಗಳಿಲ್ಲದೇ ಭಣಗುಟ್ಟುವ
ಬೋಟೆ ಹೌಸುಗಳು
ಭಯ ಹುಟ್ಟಿಸುತ್ತಿವೆ

ನನ್ನ ಪುಟ್ಟ ಕಾಶ್ಮೀರಕೆ
ಕೊಳ್ಳಿಯಿಟ್ಟು –
ಕುರೂಪಗೊಳಿಸಿದ ರಾಕ್ಷಸರೇ
ನಿಮಗೆ ನಾನೆಂದಿಗೂ
ಕ್ಷಮಿಸಲಾರೆ,
ನಾನೆಂದಿಗೂ ಕ್ಷಮಿಸಲಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಗೃಹಸ್ಥನಾಗದೆ ಸಾವಯವವುಂಟೇ ?
Next post ಆನಿವರ್ಸರಿ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…