ಬಾರಯ್ಯಾ

ಬಾರಯ್ಯಾ ಎನ್ನ ಎದೆಗೆ ಎದೆ ಗುಡಿಯ ಪೀಠಕ್ಕೆ
ಬಾರಯ್ಯಾ ಎನ್ನ ಎದೆಗೆ || ಪ ||

ಕತ್ತಲು ಬೆಳಕಾಟ ಇನ್ನೆಷ್ಟು ದಿನವಯ್ಯಾ
ಚಿತ್ತವೂ ಮಸಕೂ ಮಸಕಾಗಿದೆ
ಏಳಂತೆ ಬೀಳಂತೆ ಅಳುವಂತೆ ನಗುವಂತೆ
ಅಂತಿಂತು ನೀನಂತೂ ದೂರವಾದೆ || ೧ ||

ಹಸಿವಾಗಿ ಬಾಯಾರಿ ತಪನಂತೆ ತಪಿಸುತ್ತ
ಹಸಗೆಟ್ಟು ಉಂಡುಂಡು ಸಾಕಾಗಿದೆ
ನಂಬೀಕೆ ಬೇರೆಲ್ಲ ಅಲುಗಾಡಿ ಹೊರಬಿದ್ದು
ಕೂದಾಲ ಎಳೆಯಾಗೆ ಟುಕು ಎನುತಿದೆ || ೨ ||

ರಾತ್ರೆಲ್ಲ ರಾಮಾಯ್ಣ ಹಗಲೆಲ್ಲ ಭಾರತ
ಸೀತೆಗು ಕೋತಿಗು ಮಾತಾಗಿದೆ
ತಾಯಿ ತಂದೇ ಎಂದು ತಂದಾನಾ ಹಾಡಲು
ತಂತಿ ಎಳೆಯಾಗೆ ಬೇಸೂರಾಗಿದೆ || ೩ ||

ಅಳ್ಳಳ್ಳಿ ಬುವ್ವಾಗಿ ಏಸೊಂದು ದಿನವಿರಲಿ
ಕೊಳ್ಳಿ ದೆವ್ವದ ಕುಣಿತ ಸಾಕಾಗಿದೆ
ತೊಗಲೆದ್ದು ಬಡದೀತು ತಟಮಟ ತಮ್ಮಟ
ತಾರಮ್ಮಯ್ಯಂಬಂತೆ ತೂತಾಗಿದೆ || ೪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖೂನಿ
Next post W B Yeats – ಅನನ್ಯ ಕಾವ್ಯ ಸಂವೇದನೆಯ ಕವಿ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…