ಹಣತೆಯ ಕೊರಗು…..

ಹಚ್ಚಿಟ್ಟ ಹಣತೆ ಆರಿ ಹೋಗುವುದು
ಗಾಳಿಯ ಸೋಂಕಿಗೆ
ಉಸಿರಿನ ಉಫ್‌ಗೆ
ನೀರೆಯರ ಸೀರೆಯಂಚಿನ ಸ್ಪರ್ಶಕೆ
ದಾರಿದೀಪವಾಗುವ ಹಮ್ಮನು
ಬಿಟ್ಟು ಬಯಲಾದಾಗ
ನಾನು ಉರಿದು ಬೂದಿಯಾಗುತ್ತೇನೆ
‘ಹಚ್ಚೇವು ಕನ್ನಡದ ದೀಪ’
ಎಂಬ ಹಾಡನ್ನು ಕೇಳುತ್ತ
ಕ್ಷಣದಷ್ಟು ತಮದ ಅಲೆಯನು
ಸರಿಸಿ ಬಾರಿದಿಸಿತು ಅಲೆಯನು
ನನ್ನ ಒಳಗಿನ ಉರಿ
ನನ್ನ ದುರ್ಗತಿಗೆ ಮೊರೆಯಿಡುತ್ತದೆ
ಅಲ್ಪ ಅಸ್ಮಿತೆಯ ಚಿತ್ವವನು
ಕಣ್ಣೆದುರು ತಂದಿಡುವಾಗ
ನೋವು ಭಯವಾಗುತ್ತದೆ.

ಅವನ ಮಧುರ ಮಿಲನದ
ಬಯಕೆ ಹೊತ್ತು ಉರಿದು
ಬೆಳಕ ತೋರುವ ಭ್ರಮೆ
ನಿರಸನವಾಗುತ್ತದೆ.
ನನ್ನ ಆರಿಹೋಗುವಿಕೆಯೆ
ಒಂದು ದುರಂತ!

ನಾನು ಆಶೆ ಉತ್ಸಾಹಗಳ ಪುಂಜ
ಪ್ರೇಮಿಗಳ ಮಿಲನದ
ಜ್ಞಾನದಾಹಗಳ ಸಂಕೇತ..
ಮನೆ-ಮನ ಬಾಗಿಲ ದಂಡೆಯಲಿ
ದೇಗುಲದ ದೇವರ ಅಂಗಳದಲಿ
ಉತ್ಸವದ ದೀಪಗಳ ಸಾಲಿನಲಿ
ಸೊಗಸಾಗಿ ಅಂದವಾಗಿ ಮಿಣುಕುತ್ತ
ಗುಂಪಿನ ಬೆಳಕಿನಲಿ ಪಯಣಿಗರ
ಪಥ ದರ್ಶನ ಮಾಡುತ್ತೇನೆಂಬ
ಹೆಮ್ಮೆಯ ಹೊತ್ತು ಇಂಬಿಟ್ಟು
ಹೊಸೆದ ಮನಸುಗಳ
ನಂಬಿಸಿ, ಹುರಿದುಂಬಿಸಿ
ಜೀವಂತವಾಗಿರುವಾಗ
ಎದುರಾಗುವ ಮಂಡೆಲರ ತೊಡಕು
ಕಂಪನ ಹುಚ್ಚಿಸಿ
ಆರುವ ಭಯವನ್ನೆ ಹುಟ್ಟಿಸುತ್ತದಲ್ಲ!
ಎಂದಿನವರೆಗೆ ನಿಮ್ಮ ಮನೆಯ ಬೆಳಗಲಿ?
ನಿಮ್ಮಾಶೆಗಳಿಗೆ ಬಲವಾಗಿ, ಫಲವಾಗಿ
ಎಷ್ಟು ಉರಿಯಲಿ….

ನಾನು ಪಮದಲ್ಲೊಂದು
ಮಿಣುಕುಹುಳ
ಕ್ಷಣಭಂಗುರ ನನ್ನ ಅಸ್ಮಿತೆ
ಆದರೆ ನಾನೊಂದು ಅನಲ ಕಣ
ಅನುಕೂಲ ಪವನ ಬಲದಿಂದ
ಆಕಾಶಕ್ಕೆ ಹಾರಿ, ಅಂಬರವನು ಸುಡಬಲ್ಲೆ
ಪ್ರಿಯೆಯ ಪ್ರೇಮ ಕತೆಗೆ
ನಾಂದಿಯಾಗಿಯೂ, ಮುಳುವಾಗಬಲ್ಲೆ
ಕಣ ಒಂದೆ ಸಾಕು
ಮನೆ ಸುಡಲು, ಮನ ಸುಡಲು

ಸುಂದರ ಕನಕತುಲ್ಯ
ಬೆಳಕಿನಿಂದ ನಾವೆಲ್ಲರ ಮನ
ಸೂರೆಗೊಂಡರೂ
ಭಯಂಕರ ಬೆಂಕಿಯ ಉಂಡೆ,
ಸುಡುವ ಕಾರ್ಯದ ನಾನು
ಯಾರಿಗೂ ದಾರಿದೀಪವಾಗಲಾರೆನು
ನಿಮ್ಮ ವಿಶ್ವಾಸಕ್ಕೆ ಪ್ರೇಮಕೆ
ಪಾತ್ರನಲ್ಲ……!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಲುಗುವ ಹೂವು
Next post ಸಾ ಎಂದೊಡದು ಸ್ವರ್ಗಕ್ಕೆ ಸರಣಿ ಮೆಟ್ಟಿಲಾಗದೇ?

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys