Home / ಕವನ / ಕವಿತೆ / ಹಣತೆಯ ಕೊರಗು…..

ಹಣತೆಯ ಕೊರಗು…..

ಹಚ್ಚಿಟ್ಟ ಹಣತೆ ಆರಿ ಹೋಗುವುದು
ಗಾಳಿಯ ಸೋಂಕಿಗೆ
ಉಸಿರಿನ ಉಫ್‌ಗೆ
ನೀರೆಯರ ಸೀರೆಯಂಚಿನ ಸ್ಪರ್ಶಕೆ
ದಾರಿದೀಪವಾಗುವ ಹಮ್ಮನು
ಬಿಟ್ಟು ಬಯಲಾದಾಗ
ನಾನು ಉರಿದು ಬೂದಿಯಾಗುತ್ತೇನೆ
‘ಹಚ್ಚೇವು ಕನ್ನಡದ ದೀಪ’
ಎಂಬ ಹಾಡನ್ನು ಕೇಳುತ್ತ
ಕ್ಷಣದಷ್ಟು ತಮದ ಅಲೆಯನು
ಸರಿಸಿ ಬಾರಿದಿಸಿತು ಅಲೆಯನು
ನನ್ನ ಒಳಗಿನ ಉರಿ
ನನ್ನ ದುರ್ಗತಿಗೆ ಮೊರೆಯಿಡುತ್ತದೆ
ಅಲ್ಪ ಅಸ್ಮಿತೆಯ ಚಿತ್ವವನು
ಕಣ್ಣೆದುರು ತಂದಿಡುವಾಗ
ನೋವು ಭಯವಾಗುತ್ತದೆ.

ಅವನ ಮಧುರ ಮಿಲನದ
ಬಯಕೆ ಹೊತ್ತು ಉರಿದು
ಬೆಳಕ ತೋರುವ ಭ್ರಮೆ
ನಿರಸನವಾಗುತ್ತದೆ.
ನನ್ನ ಆರಿಹೋಗುವಿಕೆಯೆ
ಒಂದು ದುರಂತ!

ನಾನು ಆಶೆ ಉತ್ಸಾಹಗಳ ಪುಂಜ
ಪ್ರೇಮಿಗಳ ಮಿಲನದ
ಜ್ಞಾನದಾಹಗಳ ಸಂಕೇತ..
ಮನೆ-ಮನ ಬಾಗಿಲ ದಂಡೆಯಲಿ
ದೇಗುಲದ ದೇವರ ಅಂಗಳದಲಿ
ಉತ್ಸವದ ದೀಪಗಳ ಸಾಲಿನಲಿ
ಸೊಗಸಾಗಿ ಅಂದವಾಗಿ ಮಿಣುಕುತ್ತ
ಗುಂಪಿನ ಬೆಳಕಿನಲಿ ಪಯಣಿಗರ
ಪಥ ದರ್ಶನ ಮಾಡುತ್ತೇನೆಂಬ
ಹೆಮ್ಮೆಯ ಹೊತ್ತು ಇಂಬಿಟ್ಟು
ಹೊಸೆದ ಮನಸುಗಳ
ನಂಬಿಸಿ, ಹುರಿದುಂಬಿಸಿ
ಜೀವಂತವಾಗಿರುವಾಗ
ಎದುರಾಗುವ ಮಂಡೆಲರ ತೊಡಕು
ಕಂಪನ ಹುಚ್ಚಿಸಿ
ಆರುವ ಭಯವನ್ನೆ ಹುಟ್ಟಿಸುತ್ತದಲ್ಲ!
ಎಂದಿನವರೆಗೆ ನಿಮ್ಮ ಮನೆಯ ಬೆಳಗಲಿ?
ನಿಮ್ಮಾಶೆಗಳಿಗೆ ಬಲವಾಗಿ, ಫಲವಾಗಿ
ಎಷ್ಟು ಉರಿಯಲಿ….

ನಾನು ಪಮದಲ್ಲೊಂದು
ಮಿಣುಕುಹುಳ
ಕ್ಷಣಭಂಗುರ ನನ್ನ ಅಸ್ಮಿತೆ
ಆದರೆ ನಾನೊಂದು ಅನಲ ಕಣ
ಅನುಕೂಲ ಪವನ ಬಲದಿಂದ
ಆಕಾಶಕ್ಕೆ ಹಾರಿ, ಅಂಬರವನು ಸುಡಬಲ್ಲೆ
ಪ್ರಿಯೆಯ ಪ್ರೇಮ ಕತೆಗೆ
ನಾಂದಿಯಾಗಿಯೂ, ಮುಳುವಾಗಬಲ್ಲೆ
ಕಣ ಒಂದೆ ಸಾಕು
ಮನೆ ಸುಡಲು, ಮನ ಸುಡಲು

ಸುಂದರ ಕನಕತುಲ್ಯ
ಬೆಳಕಿನಿಂದ ನಾವೆಲ್ಲರ ಮನ
ಸೂರೆಗೊಂಡರೂ
ಭಯಂಕರ ಬೆಂಕಿಯ ಉಂಡೆ,
ಸುಡುವ ಕಾರ್ಯದ ನಾನು
ಯಾರಿಗೂ ದಾರಿದೀಪವಾಗಲಾರೆನು
ನಿಮ್ಮ ವಿಶ್ವಾಸಕ್ಕೆ ಪ್ರೇಮಕೆ
ಪಾತ್ರನಲ್ಲ……!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...