Home / ಕವನ / ಕವಿತೆ / ಹಣತೆಯ ಕೊರಗು…..

ಹಣತೆಯ ಕೊರಗು…..

ಹಚ್ಚಿಟ್ಟ ಹಣತೆ ಆರಿ ಹೋಗುವುದು
ಗಾಳಿಯ ಸೋಂಕಿಗೆ
ಉಸಿರಿನ ಉಫ್‌ಗೆ
ನೀರೆಯರ ಸೀರೆಯಂಚಿನ ಸ್ಪರ್ಶಕೆ
ದಾರಿದೀಪವಾಗುವ ಹಮ್ಮನು
ಬಿಟ್ಟು ಬಯಲಾದಾಗ
ನಾನು ಉರಿದು ಬೂದಿಯಾಗುತ್ತೇನೆ
‘ಹಚ್ಚೇವು ಕನ್ನಡದ ದೀಪ’
ಎಂಬ ಹಾಡನ್ನು ಕೇಳುತ್ತ
ಕ್ಷಣದಷ್ಟು ತಮದ ಅಲೆಯನು
ಸರಿಸಿ ಬಾರಿದಿಸಿತು ಅಲೆಯನು
ನನ್ನ ಒಳಗಿನ ಉರಿ
ನನ್ನ ದುರ್ಗತಿಗೆ ಮೊರೆಯಿಡುತ್ತದೆ
ಅಲ್ಪ ಅಸ್ಮಿತೆಯ ಚಿತ್ವವನು
ಕಣ್ಣೆದುರು ತಂದಿಡುವಾಗ
ನೋವು ಭಯವಾಗುತ್ತದೆ.

ಅವನ ಮಧುರ ಮಿಲನದ
ಬಯಕೆ ಹೊತ್ತು ಉರಿದು
ಬೆಳಕ ತೋರುವ ಭ್ರಮೆ
ನಿರಸನವಾಗುತ್ತದೆ.
ನನ್ನ ಆರಿಹೋಗುವಿಕೆಯೆ
ಒಂದು ದುರಂತ!

ನಾನು ಆಶೆ ಉತ್ಸಾಹಗಳ ಪುಂಜ
ಪ್ರೇಮಿಗಳ ಮಿಲನದ
ಜ್ಞಾನದಾಹಗಳ ಸಂಕೇತ..
ಮನೆ-ಮನ ಬಾಗಿಲ ದಂಡೆಯಲಿ
ದೇಗುಲದ ದೇವರ ಅಂಗಳದಲಿ
ಉತ್ಸವದ ದೀಪಗಳ ಸಾಲಿನಲಿ
ಸೊಗಸಾಗಿ ಅಂದವಾಗಿ ಮಿಣುಕುತ್ತ
ಗುಂಪಿನ ಬೆಳಕಿನಲಿ ಪಯಣಿಗರ
ಪಥ ದರ್ಶನ ಮಾಡುತ್ತೇನೆಂಬ
ಹೆಮ್ಮೆಯ ಹೊತ್ತು ಇಂಬಿಟ್ಟು
ಹೊಸೆದ ಮನಸುಗಳ
ನಂಬಿಸಿ, ಹುರಿದುಂಬಿಸಿ
ಜೀವಂತವಾಗಿರುವಾಗ
ಎದುರಾಗುವ ಮಂಡೆಲರ ತೊಡಕು
ಕಂಪನ ಹುಚ್ಚಿಸಿ
ಆರುವ ಭಯವನ್ನೆ ಹುಟ್ಟಿಸುತ್ತದಲ್ಲ!
ಎಂದಿನವರೆಗೆ ನಿಮ್ಮ ಮನೆಯ ಬೆಳಗಲಿ?
ನಿಮ್ಮಾಶೆಗಳಿಗೆ ಬಲವಾಗಿ, ಫಲವಾಗಿ
ಎಷ್ಟು ಉರಿಯಲಿ….

ನಾನು ಪಮದಲ್ಲೊಂದು
ಮಿಣುಕುಹುಳ
ಕ್ಷಣಭಂಗುರ ನನ್ನ ಅಸ್ಮಿತೆ
ಆದರೆ ನಾನೊಂದು ಅನಲ ಕಣ
ಅನುಕೂಲ ಪವನ ಬಲದಿಂದ
ಆಕಾಶಕ್ಕೆ ಹಾರಿ, ಅಂಬರವನು ಸುಡಬಲ್ಲೆ
ಪ್ರಿಯೆಯ ಪ್ರೇಮ ಕತೆಗೆ
ನಾಂದಿಯಾಗಿಯೂ, ಮುಳುವಾಗಬಲ್ಲೆ
ಕಣ ಒಂದೆ ಸಾಕು
ಮನೆ ಸುಡಲು, ಮನ ಸುಡಲು

ಸುಂದರ ಕನಕತುಲ್ಯ
ಬೆಳಕಿನಿಂದ ನಾವೆಲ್ಲರ ಮನ
ಸೂರೆಗೊಂಡರೂ
ಭಯಂಕರ ಬೆಂಕಿಯ ಉಂಡೆ,
ಸುಡುವ ಕಾರ್ಯದ ನಾನು
ಯಾರಿಗೂ ದಾರಿದೀಪವಾಗಲಾರೆನು
ನಿಮ್ಮ ವಿಶ್ವಾಸಕ್ಕೆ ಪ್ರೇಮಕೆ
ಪಾತ್ರನಲ್ಲ……!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...