ಮಗುವಾಗಿ ಇರುವಾಗ
ನೀನು
ಎಲ್ಲರ ಮುಖದ ನಗುವಾಗಿದ್ದಿ
ಮನಸಿಗೆ ಹಿತ
ಬದುಕಿಗೆ ಮಿತವಾಗಿ
ದೇವರ ದಯೆಯಾಗಿ
ಮುದ್ದಾದ
ಬಾಲಭಾವದ ಚೆಲುವಿನ ಖಣಿಯಾಗಿ
ಸುಖ-ಶಾಂತಿಯ ಮಡುವಾಗಿದ್ದಿ
ಯವ್ವನ ಬರುತಿರಲು ನೀನು ನಿನ್ನ
ಮೈಯ ಮಾಟಕೆ ಕಣ್ಣ ನೋಟಕೆ
ಹಮ್ಮಿನಧಿಕಾರಿಯಾದಿ
ಮೀರುವೆದೆಯು ಮೀರಿಸಿತು
ನಿನ್ನ ಭಾವ-ಬುದ್ದಿಯನು
ದೇಹಬಲದಿಂದ
ಲೋಕಗೆಲ್ಲುವೆನೆಂಬ
ಆತ್ಮವಿಶ್ವಾಸದ ಮಡು ತುಂಬಿ ಹರಿಯಿತು
ನೀನು ನಿನ್ನ ಚೆಲುವಿಗೆ
ಒಣ ಅಭಿಮಾನಿಯಾದೆ.
ಈಗೇಕೆ ಮರುಗುವೆ ಮರುಳೆ
ಮುಪ್ಪಿನ ಯೋಚನೆಗೆ ಯೋಜನೆಗೆ
ಹೌಹಾರಿ, ಹೆದರಿ
ಕನ್ನಡಿಯೆದುರಿಗೆ ನಿಂತು
ನರೆಕೂದಲನು ಹೆಕ್ಕುತ್ತ
ಹಣೆಯ, ಕಣ್ಣ ಸುತ್ತ ಹಬ್ಬಿರುವ
ಸುಕ್ಕನು ಕಂಡು
ಅಳಿದ ಮೈಕಟ್ಟು
ಜೋಲು ರಟ್ಟೆಯನು ಮುಟ್ಟಿ ಮುಟ್ಟಿ
‘ಅಯ್ಯಾ ಮುಪ್ಪೇ’ ಎಂದು
ನಿಡಿದುಸಿರು ಬಿಡುವೆಯೇಕೆ?
ಎಂದೊ ಒಂದು ದಿನ
ಅಳಿಯುವ, ಮುಳಿಯುವ
ಈ ಸೊತ್ತಿನ ಮೋಹವೇತಕೆ!
*****
Related Post
ಸಣ್ಣ ಕತೆ
-
ಎರಡು…. ದೃಷ್ಟಿ!
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
-
ಗ್ರಹಕಥಾ
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…