ಮಗುವಾಗಿ ಇರುವಾಗ
ನೀನು
ಎಲ್ಲರ ಮುಖದ ನಗುವಾಗಿದ್ದಿ
ಮನಸಿಗೆ ಹಿತ
ಬದುಕಿಗೆ ಮಿತವಾಗಿ
ದೇವರ ದಯೆಯಾಗಿ
ಮುದ್ದಾದ
ಬಾಲಭಾವದ ಚೆಲುವಿನ ಖಣಿಯಾಗಿ
ಸುಖ-ಶಾಂತಿಯ ಮಡುವಾಗಿದ್ದಿ
ಯವ್ವನ ಬರುತಿರಲು ನೀನು ನಿನ್ನ
ಮೈಯ ಮಾಟಕೆ ಕಣ್ಣ ನೋಟಕೆ
ಹಮ್ಮಿನಧಿಕಾರಿಯಾದಿ
ಮೀರುವೆದೆಯು ಮೀರಿಸಿತು
ನಿನ್ನ ಭಾವ-ಬುದ್ದಿಯನು
ದೇಹಬಲದಿಂದ
ಲೋಕಗೆಲ್ಲುವೆನೆಂಬ
ಆತ್ಮವಿಶ್ವಾಸದ ಮಡು ತುಂಬಿ ಹರಿಯಿತು
ನೀನು ನಿನ್ನ ಚೆಲುವಿಗೆ
ಒಣ ಅಭಿಮಾನಿಯಾದೆ.
ಈಗೇಕೆ ಮರುಗುವೆ ಮರುಳೆ
ಮುಪ್ಪಿನ ಯೋಚನೆಗೆ ಯೋಜನೆಗೆ
ಹೌಹಾರಿ, ಹೆದರಿ
ಕನ್ನಡಿಯೆದುರಿಗೆ ನಿಂತು
ನರೆಕೂದಲನು ಹೆಕ್ಕುತ್ತ
ಹಣೆಯ, ಕಣ್ಣ ಸುತ್ತ ಹಬ್ಬಿರುವ
ಸುಕ್ಕನು ಕಂಡು
ಅಳಿದ ಮೈಕಟ್ಟು
ಜೋಲು ರಟ್ಟೆಯನು ಮುಟ್ಟಿ ಮುಟ್ಟಿ
‘ಅಯ್ಯಾ ಮುಪ್ಪೇ’ ಎಂದು
ನಿಡಿದುಸಿರು ಬಿಡುವೆಯೇಕೆ?
ಎಂದೊ ಒಂದು ದಿನ
ಅಳಿಯುವ, ಮುಳಿಯುವ
ಈ ಸೊತ್ತಿನ ಮೋಹವೇತಕೆ!
*****
Related Post
ಸಣ್ಣ ಕತೆ
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಕನಸುಗಳಿಗೆ ದಡಗಳಿರುದಿಲ್ಲ
ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…
-
ಕರಿ ನಾಗರಗಳು
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…