ಖಯಾಲಿಗೆ ನನ್ನ ಎಲ್ಲವನ್ನು
ನಾನು ಒಪ್ಪಿಸಿದ್ದೇನೆ
ಖುಷಿಯಾಗುತ್ತದೆ,
ಎಲ್ಲವು ವರ್ಣಮಯ
ಸುಖಕರ ಕಾಣುತ್ತದೆ.
ವೇದನೆ, ಭಾವನೆ ಅದರಲ್ಲಿಯೆ
ಸರ್ವಕಾಲದ ಅಸ್ತಿಯಾಗಿದೆ.
ಅದು ಬದುಕಿನ ಜಂಜಡದಿಂದ
ದೂರವಿಡುವ
ಅಮಲಿನ ಮೈಮರೆಯಲ್ಲಿ
ಕರಗಿಸುವ ಸೆರೆಯಾಗಿದೆ.
ನೋವು-ನಲಿವು
ಮುಗಿಯದ ಪೇಚು
ಅದರಲ್ಲಿ ಸೇರಿಕೊಂಡು
ನನ್ನ ಬದುಕಿನ ಒಂದು
ಅಂಗವಾಗಿ ಬೆಸೆದು ಕೊಂಡಿದೆ.
ನನ್ನವಳು ಗೊಂಬೆಯಾಗಿ
ನೆರೆಯವಳು ರಂಬೆಯಾಗಿ
ಖಯಾಲಿನಲ್ಲಿ
ನನ್ನನ್ನು ರಂಜಿಸುತ್ತಾಳೆ.
ಖಯಾಲಿನ ಜೊತೆಗಿನ ನನ್ನ
ಸಂಬಂಧ ಅಥಾಹ ಆಳ
ಅರಿಯದ, ಕಾಣದ ನಿರಾಳ
ಇದರ ಕಡಿಯನ್ನು ಕಡಿಯದೆ
ನಿರಂತರತೆಯನ್ನು ಮುರಿಯದೆ
ನಿಶ್ಚಿಂತೆ ಇದ್ದ ಕಾಲವ ಕಳೆವ
ಬದುಕಿನ ವ್ಯಥೆಗಳನು ಮರೆವ
ಸಲುವಾಗಿ
ನನ್ನ ಎಲ್ಲವನು ಖಯಾಲಿನ
ವಶ ಒಪ್ಪಿಸಿದ್ದೇನೆ.
*****
Related Post
ಸಣ್ಣ ಕತೆ
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ತ್ರಿಪಾದ
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…