ಕಾಲನು ಮುರಿಯದಿರಿ

ಕಾಲನು ಮುರಿಯದಿರಿ – ಕೋಳಿಯ
ಕಾಲನು ಮುರಿಯದಿರಿ ||ಪ||

ತನ್ನಯ ಪಾಡಿಗೆ ತಾನು ಎಲ್ಲೋ
ಆಯ್ಕೊಂಡ್ ತಿನ್ಕೊಂಡ್ ಇರುವಾಗ ||ಅ.ಪ||

ಅನ್ನವನ್ನು ಕೇಳುವುದೇ?
ಕುಡಿಯಲು ನೀರನು ಕೇಳುವುದೇ?
ಶಿಕ್ಷಣ ಕೊಡಿ ಎಂದು ಕೇಳುವುದೆ?
ಆರೋಗ್ಯವನ್ನು ಕೇಳುವುದೆ?
ಏನನು ಕೇಳದೆ ತನ್ನಯ ಪಾಡಿಗೆ
ಆಯ್ಕೊಂಡ್ ತಿನ್ಕೊಂಡ್ ಇರುವಾಗ . . . .
|| ಕಾಲನು ಮುರಿಯದಿರಿ ||

ಬಟ್ಟೆಯನ್ನು ಕೇಳುವುದೇ?
ತಟ್ಟೆಗೆ ಕೈಯನು ಹಾಕುವುದೆ?
ಸೊಟ್ಟಗೆ ಮೂತಿ ಮಾಡುವುದೆ?
ರಟ್ಟೆಯನ್ನು ತಟ್ಟುವುದೆ?
ಏನನು ಮಾಡದೆ ತನ್ನಯ ಪಾಡಿಗೆ
ಆಯ್ಕೊಂಡ್ ತಿನ್ಕೊಂಡ್ ಇರುವಾಗ . . . .
|| ಕಾಲನು ಮುರಿಯದಿರಿ ||

ಚಿನ್ನವನ್ನು ಕೇಳುವುದೇ?
ರನ್ನ ತಾವು ಎನ್ನುವುದೇ?
ಸಣ್ಣಗೆ ಮಾತನು ಆಡುವುದೆ?
ತಣ್ಣಗೆ ಚೂರಿಯ ಹಾಕುವುದೆ?
ಎಲ್ಲೊ ಏನೊ ತನ್ನಯ ಪಾಡಿಗೆ
ಆಯ್ಕೊಂಡ್ ತಿನ್ಕೊಂಡ್ ಇರುವಾಗ . . .
|| ಕಾಲನು ಮುರಿಯದಿರಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹನುಮಂತನ ಕಥೆ
Next post ಕಣ್ಣೀರು

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys