ನಿದ್ದೆ ಒಂದು ಪುಟ್ಟಸಾವು

ನಿದ್ದೆ ಒಂದು ಪುಟ್ಟಸಾವು
ದಣಿದ ಜೀವಕದುವೆ ಚಿಕ್ಕ ಬಿಡುವು|
ದಿನದ ಎಲ್ಲಾ ಭಾರವ ಇಳಿಸಿ
ತನು ತೂಗುಯ್ಯಾಲೆಯದೆಯಲಿ ತೇಲಿ
ಮನಕೆ ನೀಡುತಿದೆ ನಲಿವು||

ಎಷ್ಟು ಕಠಿಣ ದಿನದ ಬದುಕು|
ತುಂಬಲು ತುತ್ತಿನ ಚೀಲವ
ದಿನಾ ಹೊಸತ ಹುಡುಕು|
ಸೂರ್ಯನುದಸಿದ ಕ್ಷಣದಿಂದ
ಚಂದ್ರತಾರೆ ಬೆಳಗುವರೆಗೂ
ಗಾಣದ ಎತ್ತಿನಂತೆ ದುಡಿದು
ಹಣ್ಣಾಗಿಹ ದೇಹಕೆ ಕೊಂಚ ವಿಶ್ರಾಂತಿ||

ಮಕ್ಕಳು ದಿನವೆಲ್ಲಾ ಪಾಠ ಆಟೋಟದಿ
ಕುಣಿದು ಕುಪ್ಪಳಿಸಿ ದಣಿದು,
ನಾಳೆ ಬಯಸದೆ ನಿನ್ನೆ ನೆನಸದೆ
ಮುದುಡಿ ಮಲಗಿ ನಿದ್ದೆಯಲಿ ವಿಶ್ರಾಂತ||

ಹಕ್ಕಿ ಪಕ್ಷಿಗಳು ಆಹಾರಕ್ಕಾಗಿ
ಗೂಡಿಂದ ಹೊರಹಾರಿ ದೂರ|
ಅಲೆದು ದಣಿದು ಆಯ್ದು ತಂದು ಮರಿಗಳಿಗುಣಿಸಿ
ಪ್ರೀತಿಯಿಂದ ಮಾತಕಲಿಸಿ ವಿಶ್ರಮಿಸಿ|
ಏನನೂ ನಾಳೆಗೆ ಕೂಡಿಡದೆ ಬಾಳಿಬದುಕಿ
ಎಲ್ಲವನು ಎಲ್ಲರಿಗುಳಿಸಿ ನಿದ್ರೆಗಿಳಿಯೆ ಶಾಂತ||

ಯಜಮಾನನಿಗಾಗಿ ದುಡಿದು
ಸೋತ ಸಾಕುಪ್ರಾಣಿಗಳು|
ಅರ್ಧ ಅಗಿದು ನುಂಗಿದ ಆಹಾರ
ಹೊರತೆಗೆದು ರಾತ್ರಿಯಲಿ
ಕಣ್ಮುಚ್ಚಿ ಮೆಲುಕುಹಾಕಿ ಜೀರ್ಣಿಸಿ
ಆಳ ಉಸಿರ ಬಿಟ್ಟು ಮಲಗದುವೇ ಸುಖಾಂತ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿರಹಿ
Next post ಧ್ಯಾನ ಮಂದಿರ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…