ಧ್ಯಾನ ಮಂದಿರ

ಮಾಘದ ಚಳಿಯಲ್ಲಿ ತನು ನಡು ನಡುಗುತ್ತಿರೆ
ದೀಪನೆ ಬೆಚ್ಚನೆಯ ಉಸಿರು ನೀಡುವಂತೆ
ಕಷ್ಟ ಕಷ್ಟಗಳ ಹೋರಾಟದಲ್ಲಿ ಸೋಲುತಿದೆ
ಹರಿ ನಿನ್ನ ಕೃಪೆಯೊಂದೆ ಗೆಲುವು ತರುವಂತೆ

ಹೆಜ್ಜೆ ಹೆಜ್ಜೆಗೂ ಬಾಳಿನಲ್ಲಿ ಅಪಾಯ
ಆ ಅಪಾಯಗಳಿಗೆ ನೀನೆ ಉಪಾಯ
ನಿನ್ನೊಂದು ಒಲವು ನನ್ನ ಮೇಲಿದ್ದರೆ
ಅದೇ ಎನಗೆ ಸುಖ ನೀಡುವ ರೂಪಾಯ

ನೀ ನಿರದ ಭುವಿ ಬಂಜರಾಗಿರುವಂತೆ
ನೀ ನಿರದ ತಾಣ ಅಂಧಕಾರಮಯ
ನೀ ನಿರದ ಮನವು ಬಚ್ಚಲಾಗಿರುವಂತೆ
ನೀ ನಿರದ ಬದುಕು ಬರೀ ಘೋರಮಯ

ನಿನ್ನ ನೆನಪ ಎನ್ನ ಎದೆಗಾನವಾಗಿರಲಿ
ನಿನ್ನ ರೂಪವೆ ಎನಗೆ ಕಾಪಾಡಿರಲಿ
ನಿನ್ನ ಸನಿಹ ಎನಗೆ ಆನಂದ ಪರಾಕಾಷ್ಠೆ
ನಿನ್ನ ನೆರಳಿನಲಿ ಮಾಣಿಕ್ಯ ವಿಠಲನಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿದ್ದೆ ಒಂದು ಪುಟ್ಟಸಾವು
Next post ಪೂರ್ವಗ್ರಹ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…