ಧ್ಯಾನ ಮಂದಿರ

ಮಾಘದ ಚಳಿಯಲ್ಲಿ ತನು ನಡು ನಡುಗುತ್ತಿರೆ
ದೀಪನೆ ಬೆಚ್ಚನೆಯ ಉಸಿರು ನೀಡುವಂತೆ
ಕಷ್ಟ ಕಷ್ಟಗಳ ಹೋರಾಟದಲ್ಲಿ ಸೋಲುತಿದೆ
ಹರಿ ನಿನ್ನ ಕೃಪೆಯೊಂದೆ ಗೆಲುವು ತರುವಂತೆ

ಹೆಜ್ಜೆ ಹೆಜ್ಜೆಗೂ ಬಾಳಿನಲ್ಲಿ ಅಪಾಯ
ಆ ಅಪಾಯಗಳಿಗೆ ನೀನೆ ಉಪಾಯ
ನಿನ್ನೊಂದು ಒಲವು ನನ್ನ ಮೇಲಿದ್ದರೆ
ಅದೇ ಎನಗೆ ಸುಖ ನೀಡುವ ರೂಪಾಯ

ನೀ ನಿರದ ಭುವಿ ಬಂಜರಾಗಿರುವಂತೆ
ನೀ ನಿರದ ತಾಣ ಅಂಧಕಾರಮಯ
ನೀ ನಿರದ ಮನವು ಬಚ್ಚಲಾಗಿರುವಂತೆ
ನೀ ನಿರದ ಬದುಕು ಬರೀ ಘೋರಮಯ

ನಿನ್ನ ನೆನಪ ಎನ್ನ ಎದೆಗಾನವಾಗಿರಲಿ
ನಿನ್ನ ರೂಪವೆ ಎನಗೆ ಕಾಪಾಡಿರಲಿ
ನಿನ್ನ ಸನಿಹ ಎನಗೆ ಆನಂದ ಪರಾಕಾಷ್ಠೆ
ನಿನ್ನ ನೆರಳಿನಲಿ ಮಾಣಿಕ್ಯ ವಿಠಲನಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿದ್ದೆ ಒಂದು ಪುಟ್ಟಸಾವು
Next post ಪೂರ್ವಗ್ರಹ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys