Home / ಕವನ / ಕವಿತೆ / ಕಾಣೆಯಾದವರು

ಕಾಣೆಯಾದವರು

ಪ್ರತಿ ಮುಂಜಾನೆ…
ಪತ್ರಿಕೆಗಳಲ್ಲಿ ಸುದ್ದಿ… ಜಾಹೀರಾತು,
ಪ್ರತಿ ದಿನ… ಆಕಾಶವಾಣಿಯಲ್ಲಿ
ಪ್ರತಿ ಸಂಜೆ… ದೂರದರ್ಶನದಲ್ಲಿ
ತಪ್ಪದೆ ಬಿತ್ತರಿಸುವ ಕಾರ್ಯಕ್ರಮ –
ಕಾಣೆಯಾದವರು!

ಬರಿಯ ನಮ್ಮೂರಿನಲ್ಲಿಯೇ
ದಿನಕ್ಕೆ ನಾಲೈದು ಜನ.
ಬೇರೆ ಬೇರೆ ಕೇಂದ್ರಗಳಲ್ಲಿ
ನೂರಾರು ಜನ ಪ್ರತಿ ದಿನ.
ತಿಂಗಳಿಗೆ-ವರ್ಷಕ್ಕೆ?
ಕಾಣೆಯಾಗುವರೆ
ಸಾವಿರ ಸಾವಿರ ಜನ?
ಆಬಾಲ ವೃದ್ಧರವರೆಗೆ
ಗಂಡು-ಹೆಣ್ಣು
ಸುಂದರ-ಕುರೂಪ
ನಿರಾಸೆ-ನಿರ್ಲಿಪ್ತ
ಬಗೆ ಬಗೆಯ ಮುಖಗಳು
ನೀಳ ಮೂಗು- ಕೋಲು ಮುಖ
ಗೋಧಿ ಬಣ್ಣ, ಎಣ್ಣೆಗೆಂಪು ಬಣ್ಣ
ತೇಜೋರಹಿತ, ಕಳಾಹೀನ ಕಣ್ಣ
ನಿತ್ರಾಣ, ನಿರಾಧಾರ ಮನುಜರು
ಮಾನಸಿಕ ಅಸ್ವಸ್ಥರು
ಪರೀಕ್ಷೆಗಳಲ್ಲಿ ಫೇಲಾದವರು
ಸಾಲ ತೀರಿಸಲಾಗದೆ ತಲೆಮರೆಸಿಕೊಂಡವರು
ಭಗ್ನ ಪ್ರೇಮಿಗಳು, ಹೇಡಿಗಳು
ಗೃಹ ಕಲಹದಗ್ನಿಯಲ್ಲಿ ದಹಿಸಿದವರು
ಶೀತಲ ಯುದ್ಧದಲ್ಲಿ ಸೋತು ನೋಂದವರು
ಓಡಿಹೋದವರು, ಕಳುವಾದವರು
ಎಷ್ಟೆಲ್ಲ ಜನ… ಕಾಣೆಯಾದವರು!

ಸಾಕಾಯಿತೆ ಸಂಸಾರ ಸಾಗರ
ಸಾವು ನೋವಿನ ಘೋರ ಸಮರ
ಹರಿಯಿತೆ ಆತ್ಮೀಯತೆಯ ಮೋಹ
ಕಡಿದೇ ಹೋಯಿತೇ ಬಾಳ ಬಂಧನ?
ಇಲ್ಲಿನದಕ್ಕಿಂತ ಅಲ್ಲಿನದು
ಅಲ್ಲಿನದಕ್ಕಿಂತ ಮತ್ತೊಂದು
ಸೊಗಸೆಂಬ ಭ್ರಮೆಯೆ?
ತನ್ನ ದೆಲ್ಲವ ತೊರೆದು
ಇಟ್ಟ ಹೆಸರನೂ ಬಿಟ್ಟು
ದೂರ ಹೋಗುವ ಸಮಯ –
ಪ್ರಾಣ ಪ್ರಯಾಣ ಸಮಯ
ಬರುವ ನಿರೀಕ್ಷೆಯ ಕೋಶಾವಸ್ಥೆಯೇ?
ಸ್ಥಿತ ಪ್ರಜ್ಞನ ಸಮಾಧಿ ಸ್ಥಿತಿಯೇ?
ಜನಸಾಗರದಲ್ಲಿ ಕೊಚ್ಚಿ ಹೋದ
ಜೀವಚ್ಛವವೇ?
*****
೨೯-೦೮-೧೯೯೩

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...