Home / ಕವನ / ಕವಿತೆ / ಕಾಣೆಯಾದವರು

ಕಾಣೆಯಾದವರು

ಪ್ರತಿ ಮುಂಜಾನೆ…
ಪತ್ರಿಕೆಗಳಲ್ಲಿ ಸುದ್ದಿ… ಜಾಹೀರಾತು,
ಪ್ರತಿ ದಿನ… ಆಕಾಶವಾಣಿಯಲ್ಲಿ
ಪ್ರತಿ ಸಂಜೆ… ದೂರದರ್ಶನದಲ್ಲಿ
ತಪ್ಪದೆ ಬಿತ್ತರಿಸುವ ಕಾರ್ಯಕ್ರಮ –
ಕಾಣೆಯಾದವರು!

ಬರಿಯ ನಮ್ಮೂರಿನಲ್ಲಿಯೇ
ದಿನಕ್ಕೆ ನಾಲೈದು ಜನ.
ಬೇರೆ ಬೇರೆ ಕೇಂದ್ರಗಳಲ್ಲಿ
ನೂರಾರು ಜನ ಪ್ರತಿ ದಿನ.
ತಿಂಗಳಿಗೆ-ವರ್ಷಕ್ಕೆ?
ಕಾಣೆಯಾಗುವರೆ
ಸಾವಿರ ಸಾವಿರ ಜನ?
ಆಬಾಲ ವೃದ್ಧರವರೆಗೆ
ಗಂಡು-ಹೆಣ್ಣು
ಸುಂದರ-ಕುರೂಪ
ನಿರಾಸೆ-ನಿರ್ಲಿಪ್ತ
ಬಗೆ ಬಗೆಯ ಮುಖಗಳು
ನೀಳ ಮೂಗು- ಕೋಲು ಮುಖ
ಗೋಧಿ ಬಣ್ಣ, ಎಣ್ಣೆಗೆಂಪು ಬಣ್ಣ
ತೇಜೋರಹಿತ, ಕಳಾಹೀನ ಕಣ್ಣ
ನಿತ್ರಾಣ, ನಿರಾಧಾರ ಮನುಜರು
ಮಾನಸಿಕ ಅಸ್ವಸ್ಥರು
ಪರೀಕ್ಷೆಗಳಲ್ಲಿ ಫೇಲಾದವರು
ಸಾಲ ತೀರಿಸಲಾಗದೆ ತಲೆಮರೆಸಿಕೊಂಡವರು
ಭಗ್ನ ಪ್ರೇಮಿಗಳು, ಹೇಡಿಗಳು
ಗೃಹ ಕಲಹದಗ್ನಿಯಲ್ಲಿ ದಹಿಸಿದವರು
ಶೀತಲ ಯುದ್ಧದಲ್ಲಿ ಸೋತು ನೋಂದವರು
ಓಡಿಹೋದವರು, ಕಳುವಾದವರು
ಎಷ್ಟೆಲ್ಲ ಜನ… ಕಾಣೆಯಾದವರು!

ಸಾಕಾಯಿತೆ ಸಂಸಾರ ಸಾಗರ
ಸಾವು ನೋವಿನ ಘೋರ ಸಮರ
ಹರಿಯಿತೆ ಆತ್ಮೀಯತೆಯ ಮೋಹ
ಕಡಿದೇ ಹೋಯಿತೇ ಬಾಳ ಬಂಧನ?
ಇಲ್ಲಿನದಕ್ಕಿಂತ ಅಲ್ಲಿನದು
ಅಲ್ಲಿನದಕ್ಕಿಂತ ಮತ್ತೊಂದು
ಸೊಗಸೆಂಬ ಭ್ರಮೆಯೆ?
ತನ್ನ ದೆಲ್ಲವ ತೊರೆದು
ಇಟ್ಟ ಹೆಸರನೂ ಬಿಟ್ಟು
ದೂರ ಹೋಗುವ ಸಮಯ –
ಪ್ರಾಣ ಪ್ರಯಾಣ ಸಮಯ
ಬರುವ ನಿರೀಕ್ಷೆಯ ಕೋಶಾವಸ್ಥೆಯೇ?
ಸ್ಥಿತ ಪ್ರಜ್ಞನ ಸಮಾಧಿ ಸ್ಥಿತಿಯೇ?
ಜನಸಾಗರದಲ್ಲಿ ಕೊಚ್ಚಿ ಹೋದ
ಜೀವಚ್ಛವವೇ?
*****
೨೯-೦೮-೧೯೯೩

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ