Home / ಕವನ / ಕವಿತೆ / ಕಾಣೆಯಾದವರು

ಕಾಣೆಯಾದವರು

ಪ್ರತಿ ಮುಂಜಾನೆ…
ಪತ್ರಿಕೆಗಳಲ್ಲಿ ಸುದ್ದಿ… ಜಾಹೀರಾತು,
ಪ್ರತಿ ದಿನ… ಆಕಾಶವಾಣಿಯಲ್ಲಿ
ಪ್ರತಿ ಸಂಜೆ… ದೂರದರ್ಶನದಲ್ಲಿ
ತಪ್ಪದೆ ಬಿತ್ತರಿಸುವ ಕಾರ್ಯಕ್ರಮ –
ಕಾಣೆಯಾದವರು!

ಬರಿಯ ನಮ್ಮೂರಿನಲ್ಲಿಯೇ
ದಿನಕ್ಕೆ ನಾಲೈದು ಜನ.
ಬೇರೆ ಬೇರೆ ಕೇಂದ್ರಗಳಲ್ಲಿ
ನೂರಾರು ಜನ ಪ್ರತಿ ದಿನ.
ತಿಂಗಳಿಗೆ-ವರ್ಷಕ್ಕೆ?
ಕಾಣೆಯಾಗುವರೆ
ಸಾವಿರ ಸಾವಿರ ಜನ?
ಆಬಾಲ ವೃದ್ಧರವರೆಗೆ
ಗಂಡು-ಹೆಣ್ಣು
ಸುಂದರ-ಕುರೂಪ
ನಿರಾಸೆ-ನಿರ್ಲಿಪ್ತ
ಬಗೆ ಬಗೆಯ ಮುಖಗಳು
ನೀಳ ಮೂಗು- ಕೋಲು ಮುಖ
ಗೋಧಿ ಬಣ್ಣ, ಎಣ್ಣೆಗೆಂಪು ಬಣ್ಣ
ತೇಜೋರಹಿತ, ಕಳಾಹೀನ ಕಣ್ಣ
ನಿತ್ರಾಣ, ನಿರಾಧಾರ ಮನುಜರು
ಮಾನಸಿಕ ಅಸ್ವಸ್ಥರು
ಪರೀಕ್ಷೆಗಳಲ್ಲಿ ಫೇಲಾದವರು
ಸಾಲ ತೀರಿಸಲಾಗದೆ ತಲೆಮರೆಸಿಕೊಂಡವರು
ಭಗ್ನ ಪ್ರೇಮಿಗಳು, ಹೇಡಿಗಳು
ಗೃಹ ಕಲಹದಗ್ನಿಯಲ್ಲಿ ದಹಿಸಿದವರು
ಶೀತಲ ಯುದ್ಧದಲ್ಲಿ ಸೋತು ನೋಂದವರು
ಓಡಿಹೋದವರು, ಕಳುವಾದವರು
ಎಷ್ಟೆಲ್ಲ ಜನ… ಕಾಣೆಯಾದವರು!

ಸಾಕಾಯಿತೆ ಸಂಸಾರ ಸಾಗರ
ಸಾವು ನೋವಿನ ಘೋರ ಸಮರ
ಹರಿಯಿತೆ ಆತ್ಮೀಯತೆಯ ಮೋಹ
ಕಡಿದೇ ಹೋಯಿತೇ ಬಾಳ ಬಂಧನ?
ಇಲ್ಲಿನದಕ್ಕಿಂತ ಅಲ್ಲಿನದು
ಅಲ್ಲಿನದಕ್ಕಿಂತ ಮತ್ತೊಂದು
ಸೊಗಸೆಂಬ ಭ್ರಮೆಯೆ?
ತನ್ನ ದೆಲ್ಲವ ತೊರೆದು
ಇಟ್ಟ ಹೆಸರನೂ ಬಿಟ್ಟು
ದೂರ ಹೋಗುವ ಸಮಯ –
ಪ್ರಾಣ ಪ್ರಯಾಣ ಸಮಯ
ಬರುವ ನಿರೀಕ್ಷೆಯ ಕೋಶಾವಸ್ಥೆಯೇ?
ಸ್ಥಿತ ಪ್ರಜ್ಞನ ಸಮಾಧಿ ಸ್ಥಿತಿಯೇ?
ಜನಸಾಗರದಲ್ಲಿ ಕೊಚ್ಚಿ ಹೋದ
ಜೀವಚ್ಛವವೇ?
*****
೨೯-೦೮-೧೯೯೩

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...