ವಠಾರ

ವಠಾರ ಮೊದಲಿಗೆ ಪ್ರಕಟವಾದದ್ದು ಕಾಸರಗೋಡಿನ ನವ್ಯ ಸಾಹಿತ್ಯ ಸಂಘದ ಮೂಲಕ ಏಪ್ರಿಲ್ ೧೯೬೯ ರಲ್ಲಿ. ಆಗ ಅಚ್ಚುಹಾಕಿಸಿದ್ದು ಕೆಲವೇ ಪ್ರತಿಗಳು. ಅದ್ದರಿಂದ ಅಕ್ಷರ ಪ್ರಕಾಶನದ ಮೂಲಕ ಈಗ ಮತ್ತೊಮ್ಮೆ ಪ್ರಕಟಣೆ.

ಈ ಸಂಕಲನದ ಹದಿನಾರು ಕವಿತೆಗಳು ೧೯೬೮-೧೯೬೯ರಲ್ಲಿ ಬರೆದವು. ಮತ್ತು ಇದು ನನ್ನ ಮೊದಲ ಕವನ ಸಂಕಲನವಾದ “ಮುಖವಾಡಗಳ” ಬೆನ್ನ ಹಿಂದೆಯೇ ಬಂತು. ಇದಕ್ಕೆ ಪ್ರೇರಣೆ “ಮುಖವಾಡಗಳು” ನನ್ನ ಪರಿಸರದಿಂದ ತಂದುಕೊಟ್ಟ ಕಿರುಕುಳ. ವಠಾರದಲ್ಲಿ ಕಂಡುಬರುವ ಹಲವು ಪ್ರತಿಮೆಗಳನ್ನು ಧ್ವನಿಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು.

‘ವಠಾರ’ ಅಥವಾ ‘ಪರಿಸರ’ ಎಂಬ ಪದ ಕಳೆದ ಕೆಲವು ವರ್ಷಗಳಿಂದ ಹೊಸ ಅರ್ಥ ಪಡೆದುಕೊಂಡದ್ದು ಕಂಡು ಬರುತ್ತದೆ. ವಾತಾವರಣ ಮಾಲಿನ್ಯದ ಕುರಿತು ಹೊಸ ಜಿಜ್ಞಾಸೆ ನಡೆದಿದೆ. ನಾಗರಿಕತೆಯ ಪರಿಣಾಮವಾಗಿ ಒಂದು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಬದುಕುವುದಕ್ಕೆ ಬಿಡಿ ಎಂದು ಮನುಷ್ಯ ಕೂಗುವಂತಾಗಿದೆ. ನಾನು ‘ವಠಾರ’ ಎಂಬ ಪದವನ್ನು ಈ ಪಾರಿಭಾಷಿಕ ಅರ್ಥದಲ್ಲಿ ಉಪಯೋಗಿಸಿದ್ದರೂ ಇದೊಂದೇ ಅರ್ಥದಲ್ಲಲ್ಲ. ಕೊಳೆಯುತ್ತಿರುವ ಪರಿಸರ ಸಮೂಹ ವ್ಯಕ್ತಿತ್ವದ ಮೇಲೆ ಯಾವ ಪರಿಣಾಮ ಉಂಟುಮಾಡುತ್ತಿದೆ? -ಎಂಬಿತ್ಯಾದಿ ಪ್ರಶ್ನೆಗಳು ಒಂದಲ್ಲ ಒಂದು ಹಂತದಲ್ಲಿ ಇಲ್ಲಿನ ಕವಿತೆಗಳಲ್ಲಿ ಕಾಣಿಸಬಹುದು. ಇವುಗಳನ್ನೋದಿದಾಗ ಒಂದು ರೀತಿಯ ರೊಚ್ಚು, ಸಿಡುಕು, ತಮಾಷೆ, ಅವಹೇಳನದ ಅಸಂಬದ್ಧ ಮೂಡು ಉಂಟಾದರೆ ಅದು ನಾನು ನನ್ನ ವಠಾರವನ್ನು ಅರ್ಥವಿಸುವ ಬಗೆ. ಮನುಷ್ಯ ಹುಚ್ಚನಾಗುವುದನ್ನು ತಪ್ಟಿಸುವುದು ಹೇಗೆ-ಎಂಬ ವಿಚಾರವನ್ನು ಓದುಗರಲ್ಲಿ ಎಬ್ಬಿಸುವುದಕ್ಕಾಗಿ ಈ ಹೊಸ ಮುಖವಾಡ. ಅಲ್ಲಲ್ಲಿ ಬರುವ ತೀರ ಹಗುರವಾದ ಟೋನ್ ಬೇಕೆಂದೇ ಉಪಯೋಗಿಸಿದ್ದು.

ಈ ಕವಿತೆಗಳಿಗೆ ವಿಚಾರದ. ಶೈಲಿಯ ಬೇರೆ ಬೇರೆ ಸ್ತರಗಳನ್ನು ಕೊಡುವುದಕ್ಕೆ ಪ್ರಯತ್ನಿಸಿದ್ದೇನೆ. ಇಲ್ಲಿಯ ರೊಚ್ಚಿನಲ್ಲೂ ಅನುಕಂಪವಿದೆ. ಸಾಧಾರಣವೆನಿಸುವ ಸಾಲುಗಳಲ್ಲಿಯೂ ಅಲ್ಲಲ್ಲಿ ಘಾತಗಳಿವೆ. ರೂಢಿ ಮಾತುಗಳಿಗೆ ಹೊಸ ತಿರುವನ್ನು ಕೊಡಲಾಗಿದೆ.

ಮುಖವಾಡಗಳು ಸ್ವಲ್ಪಮಟ್ಟಿಗೆ ಅನುಕರಣ ಶೀಲತೆಯನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಅದರಲ್ಲಿಯೂ ನನ್ನದೇ ಲಯಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೆ. ವಠಾರ ಅಂತಹ ಇನ್ನೊಂದು ಪ್ರಯತ್ನ. ಇದೊಂದು ಮಹತ್ವಾಕಾಂಕ್ಷೆಯ ಕೃತಿಯೇನೂ ಅಲ್ಲ. ವಠಾರ ನನ್ನ ಓದುಗರಲ್ಲಿ ಒಂದಿಷ್ಟು ನಗರ ಪ್ರಜ್ಞೆಯನ್ನೂ ಪರಿಸರ ಬೋಧವನ್ನೂ ಉಂಟುಮಾಡಿದರೆ ಅಲ್ಲಿಗೆ ಅದು ಅರ್ಥಪೂರ್ಣ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...