ವಠಾರ

ವಠಾರ ಮೊದಲಿಗೆ ಪ್ರಕಟವಾದದ್ದು ಕಾಸರಗೋಡಿನ ನವ್ಯ ಸಾಹಿತ್ಯ ಸಂಘದ ಮೂಲಕ ಏಪ್ರಿಲ್ ೧೯೬೯ ರಲ್ಲಿ. ಆಗ ಅಚ್ಚುಹಾಕಿಸಿದ್ದು ಕೆಲವೇ ಪ್ರತಿಗಳು. ಅದ್ದರಿಂದ ಅಕ್ಷರ ಪ್ರಕಾಶನದ ಮೂಲಕ ಈಗ ಮತ್ತೊಮ್ಮೆ ಪ್ರಕಟಣೆ.

ಈ ಸಂಕಲನದ ಹದಿನಾರು ಕವಿತೆಗಳು ೧೯೬೮-೧೯೬೯ರಲ್ಲಿ ಬರೆದವು. ಮತ್ತು ಇದು ನನ್ನ ಮೊದಲ ಕವನ ಸಂಕಲನವಾದ “ಮುಖವಾಡಗಳ” ಬೆನ್ನ ಹಿಂದೆಯೇ ಬಂತು. ಇದಕ್ಕೆ ಪ್ರೇರಣೆ “ಮುಖವಾಡಗಳು” ನನ್ನ ಪರಿಸರದಿಂದ ತಂದುಕೊಟ್ಟ ಕಿರುಕುಳ. ವಠಾರದಲ್ಲಿ ಕಂಡುಬರುವ ಹಲವು ಪ್ರತಿಮೆಗಳನ್ನು ಧ್ವನಿಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು.

‘ವಠಾರ’ ಅಥವಾ ‘ಪರಿಸರ’ ಎಂಬ ಪದ ಕಳೆದ ಕೆಲವು ವರ್ಷಗಳಿಂದ ಹೊಸ ಅರ್ಥ ಪಡೆದುಕೊಂಡದ್ದು ಕಂಡು ಬರುತ್ತದೆ. ವಾತಾವರಣ ಮಾಲಿನ್ಯದ ಕುರಿತು ಹೊಸ ಜಿಜ್ಞಾಸೆ ನಡೆದಿದೆ. ನಾಗರಿಕತೆಯ ಪರಿಣಾಮವಾಗಿ ಒಂದು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಬದುಕುವುದಕ್ಕೆ ಬಿಡಿ ಎಂದು ಮನುಷ್ಯ ಕೂಗುವಂತಾಗಿದೆ. ನಾನು ‘ವಠಾರ’ ಎಂಬ ಪದವನ್ನು ಈ ಪಾರಿಭಾಷಿಕ ಅರ್ಥದಲ್ಲಿ ಉಪಯೋಗಿಸಿದ್ದರೂ ಇದೊಂದೇ ಅರ್ಥದಲ್ಲಲ್ಲ. ಕೊಳೆಯುತ್ತಿರುವ ಪರಿಸರ ಸಮೂಹ ವ್ಯಕ್ತಿತ್ವದ ಮೇಲೆ ಯಾವ ಪರಿಣಾಮ ಉಂಟುಮಾಡುತ್ತಿದೆ? -ಎಂಬಿತ್ಯಾದಿ ಪ್ರಶ್ನೆಗಳು ಒಂದಲ್ಲ ಒಂದು ಹಂತದಲ್ಲಿ ಇಲ್ಲಿನ ಕವಿತೆಗಳಲ್ಲಿ ಕಾಣಿಸಬಹುದು. ಇವುಗಳನ್ನೋದಿದಾಗ ಒಂದು ರೀತಿಯ ರೊಚ್ಚು, ಸಿಡುಕು, ತಮಾಷೆ, ಅವಹೇಳನದ ಅಸಂಬದ್ಧ ಮೂಡು ಉಂಟಾದರೆ ಅದು ನಾನು ನನ್ನ ವಠಾರವನ್ನು ಅರ್ಥವಿಸುವ ಬಗೆ. ಮನುಷ್ಯ ಹುಚ್ಚನಾಗುವುದನ್ನು ತಪ್ಟಿಸುವುದು ಹೇಗೆ-ಎಂಬ ವಿಚಾರವನ್ನು ಓದುಗರಲ್ಲಿ ಎಬ್ಬಿಸುವುದಕ್ಕಾಗಿ ಈ ಹೊಸ ಮುಖವಾಡ. ಅಲ್ಲಲ್ಲಿ ಬರುವ ತೀರ ಹಗುರವಾದ ಟೋನ್ ಬೇಕೆಂದೇ ಉಪಯೋಗಿಸಿದ್ದು.

ಈ ಕವಿತೆಗಳಿಗೆ ವಿಚಾರದ. ಶೈಲಿಯ ಬೇರೆ ಬೇರೆ ಸ್ತರಗಳನ್ನು ಕೊಡುವುದಕ್ಕೆ ಪ್ರಯತ್ನಿಸಿದ್ದೇನೆ. ಇಲ್ಲಿಯ ರೊಚ್ಚಿನಲ್ಲೂ ಅನುಕಂಪವಿದೆ. ಸಾಧಾರಣವೆನಿಸುವ ಸಾಲುಗಳಲ್ಲಿಯೂ ಅಲ್ಲಲ್ಲಿ ಘಾತಗಳಿವೆ. ರೂಢಿ ಮಾತುಗಳಿಗೆ ಹೊಸ ತಿರುವನ್ನು ಕೊಡಲಾಗಿದೆ.

ಮುಖವಾಡಗಳು ಸ್ವಲ್ಪಮಟ್ಟಿಗೆ ಅನುಕರಣ ಶೀಲತೆಯನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಅದರಲ್ಲಿಯೂ ನನ್ನದೇ ಲಯಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೆ. ವಠಾರ ಅಂತಹ ಇನ್ನೊಂದು ಪ್ರಯತ್ನ. ಇದೊಂದು ಮಹತ್ವಾಕಾಂಕ್ಷೆಯ ಕೃತಿಯೇನೂ ಅಲ್ಲ. ವಠಾರ ನನ್ನ ಓದುಗರಲ್ಲಿ ಒಂದಿಷ್ಟು ನಗರ ಪ್ರಜ್ಞೆಯನ್ನೂ ಪರಿಸರ ಬೋಧವನ್ನೂ ಉಂಟುಮಾಡಿದರೆ ಅಲ್ಲಿಗೆ ಅದು ಅರ್ಥಪೂರ್ಣ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...