ವಠಾರ

ವಠಾರ

ವಠಾರ ಮೊದಲಿಗೆ ಪ್ರಕಟವಾದದ್ದು ಕಾಸರಗೋಡಿನ ನವ್ಯ ಸಾಹಿತ್ಯ ಸಂಘದ ಮೂಲಕ ಏಪ್ರಿಲ್ ೧೯೬೯ ರಲ್ಲಿ. ಆಗ ಅಚ್ಚುಹಾಕಿಸಿದ್ದು ಕೆಲವೇ ಪ್ರತಿಗಳು. ಅದ್ದರಿಂದ ಅಕ್ಷರ ಪ್ರಕಾಶನದ ಮೂಲಕ ಈಗ ಮತ್ತೊಮ್ಮೆ ಪ್ರಕಟಣೆ.

ಈ ಸಂಕಲನದ ಹದಿನಾರು ಕವಿತೆಗಳು ೧೯೬೮-೧೯೬೯ರಲ್ಲಿ ಬರೆದವು. ಮತ್ತು ಇದು ನನ್ನ ಮೊದಲ ಕವನ ಸಂಕಲನವಾದ “ಮುಖವಾಡಗಳ” ಬೆನ್ನ ಹಿಂದೆಯೇ ಬಂತು. ಇದಕ್ಕೆ ಪ್ರೇರಣೆ “ಮುಖವಾಡಗಳು” ನನ್ನ ಪರಿಸರದಿಂದ ತಂದುಕೊಟ್ಟ ಕಿರುಕುಳ. ವಠಾರದಲ್ಲಿ ಕಂಡುಬರುವ ಹಲವು ಪ್ರತಿಮೆಗಳನ್ನು ಧ್ವನಿಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು.

‘ವಠಾರ’ ಅಥವಾ ‘ಪರಿಸರ’ ಎಂಬ ಪದ ಕಳೆದ ಕೆಲವು ವರ್ಷಗಳಿಂದ ಹೊಸ ಅರ್ಥ ಪಡೆದುಕೊಂಡದ್ದು ಕಂಡು ಬರುತ್ತದೆ. ವಾತಾವರಣ ಮಾಲಿನ್ಯದ ಕುರಿತು ಹೊಸ ಜಿಜ್ಞಾಸೆ ನಡೆದಿದೆ. ನಾಗರಿಕತೆಯ ಪರಿಣಾಮವಾಗಿ ಒಂದು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಬದುಕುವುದಕ್ಕೆ ಬಿಡಿ ಎಂದು ಮನುಷ್ಯ ಕೂಗುವಂತಾಗಿದೆ. ನಾನು ‘ವಠಾರ’ ಎಂಬ ಪದವನ್ನು ಈ ಪಾರಿಭಾಷಿಕ ಅರ್ಥದಲ್ಲಿ ಉಪಯೋಗಿಸಿದ್ದರೂ ಇದೊಂದೇ ಅರ್ಥದಲ್ಲಲ್ಲ. ಕೊಳೆಯುತ್ತಿರುವ ಪರಿಸರ ಸಮೂಹ ವ್ಯಕ್ತಿತ್ವದ ಮೇಲೆ ಯಾವ ಪರಿಣಾಮ ಉಂಟುಮಾಡುತ್ತಿದೆ? -ಎಂಬಿತ್ಯಾದಿ ಪ್ರಶ್ನೆಗಳು ಒಂದಲ್ಲ ಒಂದು ಹಂತದಲ್ಲಿ ಇಲ್ಲಿನ ಕವಿತೆಗಳಲ್ಲಿ ಕಾಣಿಸಬಹುದು. ಇವುಗಳನ್ನೋದಿದಾಗ ಒಂದು ರೀತಿಯ ರೊಚ್ಚು, ಸಿಡುಕು, ತಮಾಷೆ, ಅವಹೇಳನದ ಅಸಂಬದ್ಧ ಮೂಡು ಉಂಟಾದರೆ ಅದು ನಾನು ನನ್ನ ವಠಾರವನ್ನು ಅರ್ಥವಿಸುವ ಬಗೆ. ಮನುಷ್ಯ ಹುಚ್ಚನಾಗುವುದನ್ನು ತಪ್ಟಿಸುವುದು ಹೇಗೆ-ಎಂಬ ವಿಚಾರವನ್ನು ಓದುಗರಲ್ಲಿ ಎಬ್ಬಿಸುವುದಕ್ಕಾಗಿ ಈ ಹೊಸ ಮುಖವಾಡ. ಅಲ್ಲಲ್ಲಿ ಬರುವ ತೀರ ಹಗುರವಾದ ಟೋನ್ ಬೇಕೆಂದೇ ಉಪಯೋಗಿಸಿದ್ದು.

ಈ ಕವಿತೆಗಳಿಗೆ ವಿಚಾರದ. ಶೈಲಿಯ ಬೇರೆ ಬೇರೆ ಸ್ತರಗಳನ್ನು ಕೊಡುವುದಕ್ಕೆ ಪ್ರಯತ್ನಿಸಿದ್ದೇನೆ. ಇಲ್ಲಿಯ ರೊಚ್ಚಿನಲ್ಲೂ ಅನುಕಂಪವಿದೆ. ಸಾಧಾರಣವೆನಿಸುವ ಸಾಲುಗಳಲ್ಲಿಯೂ ಅಲ್ಲಲ್ಲಿ ಘಾತಗಳಿವೆ. ರೂಢಿ ಮಾತುಗಳಿಗೆ ಹೊಸ ತಿರುವನ್ನು ಕೊಡಲಾಗಿದೆ.

ಮುಖವಾಡಗಳು ಸ್ವಲ್ಪಮಟ್ಟಿಗೆ ಅನುಕರಣ ಶೀಲತೆಯನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಅದರಲ್ಲಿಯೂ ನನ್ನದೇ ಲಯಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೆ. ವಠಾರ ಅಂತಹ ಇನ್ನೊಂದು ಪ್ರಯತ್ನ. ಇದೊಂದು ಮಹತ್ವಾಕಾಂಕ್ಷೆಯ ಕೃತಿಯೇನೂ ಅಲ್ಲ. ವಠಾರ ನನ್ನ ಓದುಗರಲ್ಲಿ ಒಂದಿಷ್ಟು ನಗರ ಪ್ರಜ್ಞೆಯನ್ನೂ ಪರಿಸರ ಬೋಧವನ್ನೂ ಉಂಟುಮಾಡಿದರೆ ಅಲ್ಲಿಗೆ ಅದು ಅರ್ಥಪೂರ್ಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೯
Next post ಕಾಣೆಯಾದವರು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys