ಮುಕ್ತ

ಉಗಿಯುತ್ತಿದೆ ಊರು ಓಡಿ
ಮೋರಿಯಲ್ಲಿ ಮಲಗು
ಅರಸುತ್ತಿದೆ ಕಲ್ಲು ದೊಣ್ಣೆ
ಬಿಲಗಳಲ್ಲಿ ಅಡಗು
ನಿಂತ ನೆಲವೆ ನುಂಗುತ್ತಿದೆ
ಬೆಂತರ ಬೆನ್ನಟ್ಟುತ್ತಿದೆ
ನಿರ್ಜನ ರಾತ್ರಿಗಳಲ್ಲಿ ಒಂಟಿ ಕೂತು ಕೊರಗು.

ಮುಕ್ತ ಇವನು ಮಾನದಿಂದ
ಸರಿತಪ್ಪಿನ ಜ್ಞಾನದಿಂದ
ಉಂಡ ಮನೆಗೆ ಎರಡು ಬಗೆಯಬಾರದೆಂಬ ನೀತಿಗೆ
ಬೆನ್ನೊಳಿರಿದ ಪ್ರೀತಿಗೆ,
ಭಾರ ಇವನು ಕೂಳಿಗೆ
ಭಾರ ನಾಡ ಬಾಳಿಗೆ
ತನ್ನ ತಪ್ಪ ತಿಳಿದಲ್ಲದೆ ಬೆಳಗಲಿರುವ ನಾಳೆಗೆ.

ಮರುಳ ಚೀಲರಿವನ ನೆಲಕೆ
ಹಾಕಿ ಒತ್ತಿ ತುಳಿದರು
ರಸ ತುಂಬಿದ ಹಣ್ಣ ಹಿಸುಕಿ ಧೂಳಿನಲ್ಲಿ ಒಗೆದರು
ದೇವ ಇವರ ಕ್ಷಮಿಸು
ಜ್ಞಾನವಿತ್ತು ಹರಸು
ನಮ್ಮ ಪುಣ್ಯದಿಂದ ಇವರ ಪಾಪಗಳನು ಹರಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್‍ಯನವಯವವಲ್ಲವೇ? ಹಸುರೆಲ್ಲ
Next post ಬೊಗಳೆ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys