ಸಂಬಂಧಗಳು

ಬಡತನ ಬಂದಾಗ
ಸಂಬಂಧ ಸುಟ್ಟಿತು
ನಮ್ಮ ಕರುಳೇ ನಮಗೆ
ಕೈಕೊಟ್ಟು ನಕ್ಕಿತು.

ಬಿರುಕು ಬಿಟ್ಟ ಗೋಡೆ
ಮುರುಕು ಮಾಳಿಗೆ ಮನೆ
ಮಳೆಯು ಸುಂಟರಗಾಳಿ
ಮನಸಾಗಿ ಮೂಡಿತು.

ಸುಟ್ಟ ಬೂದಿಯ ಮ್ಯಾಲೆ
ಸತ್ತ ಸಂಬಂಧಗಳು
ಕೊಂಡಿ ಕಳಚಿ ಬಿದ್ದ
ಕೈ ಕಾಲು ಮೂಳೆಗಳು.

ಅಕ್ಕ ತಂಗೇರೆಲ್ಲ
ಬಿರಿದ ಬೇಳೆಕಾಳು
ಅಣ್ಣ ತಮ್ಮದಿರೆಲ್ಲ
ಉರಿವ ಹುರುಳಿಕಾಳು.

ಹೆಂಡತಿ ಮಕ್ಕಳಿಗೆ
ಏನ ಹೇಳಲಿ ನಾನು?
ತಟ್ಟೆ ತಂಗಳು ತುಂಬಿ
ತೊನ್ನು ಹತ್ತಿದ ಬಾನು.
*****

One thought on “0

  1. ತುಂಬಾ ಸ್ವಾರಸ್ಯಕರ ವಾಗಿದೆ ಕವಿತೆ
    ಧನ್ಯವಾದಗಳು ಸರ್

Leave a Reply to ಡಾ.ಆನಂದ ಎ.ಟಿ(ಜಾನಕಿತನಯಾನಂದ) Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post William Blake ಕಾವ್ಯಸಿದ್ಧಿಯ ಕಲಾಕಾರ
Next post ಟೂ ಬಿಡಲು ಕಾರಣ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys