ಬೆನ್ನಹಿಂದೆ

ಕಿಲ್ಲೆ ಕಿಮ್ಮತ್ತುಗಳ ಹೊತ್ತ ಗೋರಿ-
ಗಳು ತೀಡಿ ತೀಡಿ ಕಿಚ್ಚು ಹುಚ್ಚೆದ್ದು ಹೋರಿ;
ದಕ್ಕಿಸಿಕೊಳ್ಳುವೆನೆಂದು ದಾಪುಗಾಲು
ಹಾಕುತ್ತಿದ್ದೇನೆ
ಹಾರುವ ಹದ್ದು ಸುತ್ತ ಸಂಕೀರ್ಣ ಸದ್ದು
ಮೂಳೆಗಳ ಕೂಳೆ ಮೇಲೆ ಕಾಲು
ಹಾಕಿ
ಆಟ ಆಡುತ್ತಿದ್ದೇನೆಂದು ಅನ್ನಿಸಿದರೂ
ನಿನ್ನ ಉಬ್ಬು ತಗ್ಗು ಹಳ್ಳಕೊಳ್ಳಗಳಲ್ಲಿ
ಕಾವೇರಿ
ಯಾಗಿ
ಹರಿದು ನನ್ನಲ್ಲಿ ನಿನ್ನ ಮುಳುಗು-
ಗೊಳಿಸಬೇಕೆಂಬ ನೆರೆ ಮೊಳಗು
ಬರುತ್ತಿದ್ದೇನೆ
ನಿನ್ನ ಹರಹು ಮೊರಹು ಅನಂತ ಸುಳಿಗೆ
ಸಿಕ್ಕಿ ಮುಳುಗಿ ತೊಳಗಿ ಮೇಲೇರುವ ತುಡಿತ ನನಗೆ
ಕಾಳಿಂಗ ಬದುಕ ಬಗ್ಗಿ ಒಗ್ಗಿಸುವ ಸುಗ್ಗಿ ಕನಸಿನ ಮಳಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುವೆಂಪು ಅವರ ಸ್ಫೋಟ ಪ್ರತಿಭೆ
Next post ನಾನು ನಿರಪರಾಧಿ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…