Home / ಕವನ / ಕವಿತೆ / ಕೆಂಬಕ್ಕಿ

ಕೆಂಬಕ್ಕಿ

ಈ ಇವನು
ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು
ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ
ಬರೀ ಬೋಳುಮರ; ಕಾಂಡವೆಲ್ಲ ಪೊಟರೆ
ಮೇಲೊಂದು ಎರವಲು ವರ್ಣತೆರೆ.
ಆದರೇನಂತೆ-
ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು
ಸದಾ ಷೇಕ್ಸ್‍ಪಿಯರ್ ವರ್ಡ್ಸ್‌ವರ್ತ್ ಶೆಲ್ಲಿಯ ಸಿಳ್ಳೆಹಾಕಿ
ಸಮಯಕ್ಕೆ ಸರಕಿರಲೆಂದು ಕಷ್ಟಪಟ್ಟು ಕಲಿತ ಅವರಿವರ
ಅರ್ಧಂಬರ್ಧ ವಚನ
ಗತಿಬಿಟ್ಟು ಶ್ರುತಿಗೆಟ್ಟು ಹರಿದ ತಂತಿಯನ್ನೇ ಗಂಟುಹಾಕಿ
ಕೊರೆವ ವೀಣಾವಾದನ.
ಈ ನೆಲದ ವಾಸನೆಗೆ ಮೂಗು ತೆಗೆಯುತ್ತೇನೆಂದು
ಬಾಯಿ ತೆಗೆದು
ಗಡಿಯಾಚೆ ಗಡಂಗಿನಲ್ಲೇ ಕಿವಿಯಿಟ್ಟು ಹರುಕು-
ಮರುಕು ಮುಕ್ಕಿದ್ದಕ್ಕೆ ಧ್ವನಿವರ್ಧಕ ಸಾಧನ.
ದೇಶಭಾಷಾ ಸಾಹಿತ್ಯ ಕಲೆಗಳಿಗೆ ಮಾತ್ರ ಕೋಶಕೋಶವನ್ನೆಲ್ಲ
ಪಚಪಚನೆ ಅರೆಬರೆ ಅಗಿದು ಉಗುಳುವ ಈ ಇವನು
ಮಿಕಿಮಿಕಿ ನೋಡಿದ ಆಂಗ್ಲ-ಅಮೇರಿಕನ್ನರ ಚರ್ಮ ಹೊದೆದ ಮಿಕ.

ಒಟ್ಟಿನಲ್ಲಿ ಹೇಳಬೇಕೆ ?
ಇದೊಂದು ರೆಡಿಮೇಡ್ ರಬ್ಬರ್ ಹಕ್ಕಿ
ಕೆಂಬಕ್ಕಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...