ತಾಯಿ

ದೇಹದೊಳಗೊಂದು ದೇಹ
ಬೆಳೆಸಿದಳು ಇನ್ನೊಂದು ಜೀವ
ಹೊರುವಳು ಗರ್ಭದಿ ನವಮಾಸ
ಹೆರುವಳು ನವ ರಂಧ್ರದ ಕಾಯ.

ಭುವಿಗೆ ತರುವ ತವಕದಿ ತಾನು
ತಿಂದು ಸಹಿಸಿ ಸಾವಿರ ನೋವು
ಆ ನೋವಿಗೆ ಸರಿ ಸಾಟಿ ಯಾರಿಹರು?
ಹೆತ್ತಿರುವ ಮಗುವಲ್ಲದೇ ಮತ್ತಾರು.

ಜನ್ಮವಿತ್ತಾಕ್ಷಣ ನೋವೆಲ್ಲಾ ಮಾಯ
ಲಾಲಿ ಹಾಡುತಾ ಕೈಗೆತ್ತಿ ನಲಿಯುತ
ಮನತುಂಬಿ ಮುತ್ತಿಕ್ಕಿ ಸಂತೈಸುತ
ಹಾಡಿ ಹೊಗಳಿ ಬೆಳಸುವಳು ಮಗುವ.

ಹೇಗಿದ್ದರೇನಂತೆ ನನಗೆ ನೀನು
ಜೀವವೇ ನೀನು ಜೀವನವೇ ನೀನು
ನಿನ್ನಂತೆ ಯಾರುಂಟು ಈ ಜಗದಲಿ?
ಎನ್ನುವುದು ತಾಯಿಯಲ್ಲದೆ ಮತ್ತಾರು?

ಅದಷ್ಟೋ ಜನ್ಮ ನಾವು ತಳೆದರೇನು
ತಾಯಿಯ ಋಣ ತೀರುವುದೇನು?
ತಾಯಿಯೇ ನಿನ್ನ ಹೊಗಳ ಬೇಕೆಂದರೂ
ಪದಗಳಿಗೆ ನಿಲುಕದ ದೇವತೆಯು ಅವಳು.

ದೇವತೆಯು ನೀನೆಂದು ತಿಳಿದು
ನಾನು ನಿನ್ನ ಪೂಜಿಸಿದರೆ ಫಲವೇನು?
ನನ್ನ ಜೀವ ಇರುವವರೆಗೆ ನಿನ್ನನ್ನು
ಪೋಷಿಸಿದರೆ ಪಾವನ ಈ ನನ್ನ ಜನ್ಮವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸುಗಾರರು
Next post ಅಕ್ಷಯ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…