ತಾಯಿ

ದೇಹದೊಳಗೊಂದು ದೇಹ
ಬೆಳೆಸಿದಳು ಇನ್ನೊಂದು ಜೀವ
ಹೊರುವಳು ಗರ್ಭದಿ ನವಮಾಸ
ಹೆರುವಳು ನವ ರಂಧ್ರದ ಕಾಯ.

ಭುವಿಗೆ ತರುವ ತವಕದಿ ತಾನು
ತಿಂದು ಸಹಿಸಿ ಸಾವಿರ ನೋವು
ಆ ನೋವಿಗೆ ಸರಿ ಸಾಟಿ ಯಾರಿಹರು?
ಹೆತ್ತಿರುವ ಮಗುವಲ್ಲದೇ ಮತ್ತಾರು.

ಜನ್ಮವಿತ್ತಾಕ್ಷಣ ನೋವೆಲ್ಲಾ ಮಾಯ
ಲಾಲಿ ಹಾಡುತಾ ಕೈಗೆತ್ತಿ ನಲಿಯುತ
ಮನತುಂಬಿ ಮುತ್ತಿಕ್ಕಿ ಸಂತೈಸುತ
ಹಾಡಿ ಹೊಗಳಿ ಬೆಳಸುವಳು ಮಗುವ.

ಹೇಗಿದ್ದರೇನಂತೆ ನನಗೆ ನೀನು
ಜೀವವೇ ನೀನು ಜೀವನವೇ ನೀನು
ನಿನ್ನಂತೆ ಯಾರುಂಟು ಈ ಜಗದಲಿ?
ಎನ್ನುವುದು ತಾಯಿಯಲ್ಲದೆ ಮತ್ತಾರು?

ಅದಷ್ಟೋ ಜನ್ಮ ನಾವು ತಳೆದರೇನು
ತಾಯಿಯ ಋಣ ತೀರುವುದೇನು?
ತಾಯಿಯೇ ನಿನ್ನ ಹೊಗಳ ಬೇಕೆಂದರೂ
ಪದಗಳಿಗೆ ನಿಲುಕದ ದೇವತೆಯು ಅವಳು.

ದೇವತೆಯು ನೀನೆಂದು ತಿಳಿದು
ನಾನು ನಿನ್ನ ಪೂಜಿಸಿದರೆ ಫಲವೇನು?
ನನ್ನ ಜೀವ ಇರುವವರೆಗೆ ನಿನ್ನನ್ನು
ಪೋಷಿಸಿದರೆ ಪಾವನ ಈ ನನ್ನ ಜನ್ಮವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸುಗಾರರು
Next post ಅಕ್ಷಯ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys