ವ್ಯಾಕುಲತೆ

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ
ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ
ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ
ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ

ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ
ಅನವರತ ನಿನ್ನ ನೆನಹು ತುಂಬಲಿ
ಭಾನುವಿನಂತೆ ನಂಬಿಕೆ ದೃಢವಿರಲಿ
ನಿನ್ನ ರೂಪದ ಛಾಯೆವಿರಲಿ ಈ ನಯನ ಬಿಂಬಲಿ

ನಿನ್ನ ಕಂಗಳ ಭಾವದಲಿ ನಾ ತೇಲಲಿ
ನಿನ್ನ ಪಾದದಲಿ ಭಾವ ಪರಾಕಾಷ್ಠೆಗೇರಲಿ
ನಿನ್ನ ಕೃಪೆಯ ಸಾಗರ ನನ್ನ ಮನದಲಿ ಹರಿಯಲಿ
ನಿನ್ನ ಪಡೆಯುವ ಗುರಿ ನನ್ನ ನಿಷ್ಠೆಗೇರಲಿ

ಹರಿಯೆ ನೀನು ಪರಮಾತ್ಮ ನಾನಾತ್ಮ
ನಿನಗಲ್ಲದ ಸಹನೆ ನನ್ನಗೆಲ್ಲುಂಟು!
ನನ್ನ ನಡೆಸುವಂತೆ ನೋಡುವಾತನು ನೀನು
ಮಾಣಿಕ್ಯ ವಿಠಲನಿಗೆ ಏಕೆ ಕರ್ಮಗಂಟು!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಗು ಮಗುವೇ
Next post ಪತ್ರ – ೧೧

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…