ವ್ಯಾಕುಲತೆ

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ
ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ
ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ
ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ

ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ
ಅನವರತ ನಿನ್ನ ನೆನಹು ತುಂಬಲಿ
ಭಾನುವಿನಂತೆ ನಂಬಿಕೆ ದೃಢವಿರಲಿ
ನಿನ್ನ ರೂಪದ ಛಾಯೆವಿರಲಿ ಈ ನಯನ ಬಿಂಬಲಿ

ನಿನ್ನ ಕಂಗಳ ಭಾವದಲಿ ನಾ ತೇಲಲಿ
ನಿನ್ನ ಪಾದದಲಿ ಭಾವ ಪರಾಕಾಷ್ಠೆಗೇರಲಿ
ನಿನ್ನ ಕೃಪೆಯ ಸಾಗರ ನನ್ನ ಮನದಲಿ ಹರಿಯಲಿ
ನಿನ್ನ ಪಡೆಯುವ ಗುರಿ ನನ್ನ ನಿಷ್ಠೆಗೇರಲಿ

ಹರಿಯೆ ನೀನು ಪರಮಾತ್ಮ ನಾನಾತ್ಮ
ನಿನಗಲ್ಲದ ಸಹನೆ ನನ್ನಗೆಲ್ಲುಂಟು!
ನನ್ನ ನಡೆಸುವಂತೆ ನೋಡುವಾತನು ನೀನು
ಮಾಣಿಕ್ಯ ವಿಠಲನಿಗೆ ಏಕೆ ಕರ್ಮಗಂಟು!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಗು ಮಗುವೇ
Next post ಪತ್ರ – ೧೧

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…