ವ್ಯಾಕುಲತೆ

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ
ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ
ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ
ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ

ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ
ಅನವರತ ನಿನ್ನ ನೆನಹು ತುಂಬಲಿ
ಭಾನುವಿನಂತೆ ನಂಬಿಕೆ ದೃಢವಿರಲಿ
ನಿನ್ನ ರೂಪದ ಛಾಯೆವಿರಲಿ ಈ ನಯನ ಬಿಂಬಲಿ

ನಿನ್ನ ಕಂಗಳ ಭಾವದಲಿ ನಾ ತೇಲಲಿ
ನಿನ್ನ ಪಾದದಲಿ ಭಾವ ಪರಾಕಾಷ್ಠೆಗೇರಲಿ
ನಿನ್ನ ಕೃಪೆಯ ಸಾಗರ ನನ್ನ ಮನದಲಿ ಹರಿಯಲಿ
ನಿನ್ನ ಪಡೆಯುವ ಗುರಿ ನನ್ನ ನಿಷ್ಠೆಗೇರಲಿ

ಹರಿಯೆ ನೀನು ಪರಮಾತ್ಮ ನಾನಾತ್ಮ
ನಿನಗಲ್ಲದ ಸಹನೆ ನನ್ನಗೆಲ್ಲುಂಟು!
ನನ್ನ ನಡೆಸುವಂತೆ ನೋಡುವಾತನು ನೀನು
ಮಾಣಿಕ್ಯ ವಿಠಲನಿಗೆ ಏಕೆ ಕರ್ಮಗಂಟು!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಗು ಮಗುವೇ
Next post ಪತ್ರ – ೧೧

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys