ಹರಿಯೆ ನನ್ನ ಅರಿಯೆ

ಓ ಎನ್ನ ಎದೆಯಾಳದ ಹರಿಯೆ
ನೀನು ನನ್ನ ಭಾವಗಳ ಅರಿಯೆ
ನಾನು ಹೇಗಿದ್ದರೂ ಅದು ಸರಿಯೆ
ನಿನ್ನ ನೆನಪಲ್ಲೆ ಎಲ್ಲವೂ ಮರೆವೆ

ಯಾವುದು ಇಲ್ಲಿ ಸಾರ್ಥಕವಿಲ್ಲ
ಎಲ್ಲ ಕಾಲ ಗರ್ಭನಲ್ಲಿ ಕಳೆಯುತ್ತದೆ
ಕ್ಷಣ ಕ್ಷಣಕ್ಕೂ ತನ್ನನ್ನೆ ಕಳೆದುಕೊಂಡು
ಸಾವಿನ ಮಡಿಲಲ್ಲಿ ಸೇರಿ ಅಳಿಯುತ್ತದೆ

ಭವದ ಭೂಮಿಯಲ್ಲಿ ಆಸೆ ಮನೆ ಮಾಡಿ
ಆ ಆಸೆಗೆ ನೂರೆಂಟು ಬಿಟ್ಟಿವೆ ಬೇರು
ಯಾವ ಚರಣದಲ್ಲೂ ನಿರಾಶೆ ನೀಡಿ
ಸರಿಯುತ್ತವೆ ಆಗ ತಬ್ಬಲಿಮನ ಆಖೇರು

ಇನ್ನೂ ವಿಳಂಬವೇಕೆ ಏ ಮಾನವ
ಈಗಲೇ ರೂಪಿಸು ನಿನ್ನ ಈ ಬದುಕು
ಮೋಜು ಗೋಜುಗಳಲಿ ಕಳೆಯದಿರು ಜೋಕೆ
ಮಾಣಿಕ್ಯ ವಿಠಲನಾಗಿ ಬೇಡು ಬೆಳಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಯು ಬಂದು
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೩ನೆಯ ಖಂಡ – ರೂಢಿಯ ಪರಿತ್ಯಾಗ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…