ಬೆಳಕಿನ ಪ್ರಪಂಚ

ಎತ್ತಲಿಂದ ಬಂದೇವು ನಾವಿಲ್ಲಿ ತಿಳಿಯದೆ
ಬಿಚ್ಚಿಕೊಂಡು ಕರ್ಮದ ರಾಶಿ ಗಂಟಲ್ಲಿ
ಎತ್ತಲೊ ಸಾಗಬೇಕಿದೆ ದಾರಿ ತಿಳಿದಿಲ್ಲ
ಆದರೂ ಮಾಡಿದ್ದೇವೆ ಜಾತ್ರೆ ಇಲ್ಲಿ

ದೇಹಸಂಬಂಧಿ ನಮ್ಮವರೆಲ್ಲ ಸಾಗಿ
ಹಿಂಬಾಲಿಸಿಹರು ನನ್ನೊಂದಿಗೆ ಬಾಗಿ ಬಾಗಿ
ಯಾರ ಕರ್ಮದ ಗಂಟು ತಾವು ಬಿಡಿಸಿ
ಅರಿಯದೇ ಅನುಭವಹಿಸಿಹರು ಒಂದಾಗಿ

ಏಸೋ ವೇಳೆಯೋ ಹೀಗೆ ಜನ್ಮ ಕಳೆದು
ಮತ್ತೆ ಮತ್ತೆ ಇಲ್ಲೆ ಬುವಿಯ ವ್ಯವಹಾರ
ಭಾವಗಳಿಗೆ ಬಂಧನ ಗೆರೆ ಎಳೆಯದೆ
ಮತ್ತೆ ಮತ್ತೆ ಈ ವ್ಯರ್ಥ ಸಂಸಾರ

ಸಾಕಿನ್ನು ನಿದ್ದೆ ಎಚ್ಚರಗೊಳ್ಳಲಿ ನಾವು
ಅರೆಸಬೇಕು ಆ ಬೆಳಕ ಪ್ರಪಂಚ
ಮತ್ತೆ ಈ ಜನುಮ ಬೇಡದಂತೆ
ಮಾಣಿಕ್ಯ ವಿಠಲನೆಂಬ ತೂಗುಮಂಚ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗುವೇ ನಿನ್ನದೊಂದು
Next post ಪತ್ರ – ೧೨

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…