ಬೆಳಕಿನ ಪ್ರಪಂಚ

ಎತ್ತಲಿಂದ ಬಂದೇವು ನಾವಿಲ್ಲಿ ತಿಳಿಯದೆ
ಬಿಚ್ಚಿಕೊಂಡು ಕರ್ಮದ ರಾಶಿ ಗಂಟಲ್ಲಿ
ಎತ್ತಲೊ ಸಾಗಬೇಕಿದೆ ದಾರಿ ತಿಳಿದಿಲ್ಲ
ಆದರೂ ಮಾಡಿದ್ದೇವೆ ಜಾತ್ರೆ ಇಲ್ಲಿ

ದೇಹಸಂಬಂಧಿ ನಮ್ಮವರೆಲ್ಲ ಸಾಗಿ
ಹಿಂಬಾಲಿಸಿಹರು ನನ್ನೊಂದಿಗೆ ಬಾಗಿ ಬಾಗಿ
ಯಾರ ಕರ್ಮದ ಗಂಟು ತಾವು ಬಿಡಿಸಿ
ಅರಿಯದೇ ಅನುಭವಹಿಸಿಹರು ಒಂದಾಗಿ

ಏಸೋ ವೇಳೆಯೋ ಹೀಗೆ ಜನ್ಮ ಕಳೆದು
ಮತ್ತೆ ಮತ್ತೆ ಇಲ್ಲೆ ಬುವಿಯ ವ್ಯವಹಾರ
ಭಾವಗಳಿಗೆ ಬಂಧನ ಗೆರೆ ಎಳೆಯದೆ
ಮತ್ತೆ ಮತ್ತೆ ಈ ವ್ಯರ್ಥ ಸಂಸಾರ

ಸಾಕಿನ್ನು ನಿದ್ದೆ ಎಚ್ಚರಗೊಳ್ಳಲಿ ನಾವು
ಅರೆಸಬೇಕು ಆ ಬೆಳಕ ಪ್ರಪಂಚ
ಮತ್ತೆ ಈ ಜನುಮ ಬೇಡದಂತೆ
ಮಾಣಿಕ್ಯ ವಿಠಲನೆಂಬ ತೂಗುಮಂಚ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗುವೇ ನಿನ್ನದೊಂದು
Next post ಪತ್ರ – ೧೨

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…