ಬೆಳಕಿನ ಪ್ರಪಂಚ

ಎತ್ತಲಿಂದ ಬಂದೇವು ನಾವಿಲ್ಲಿ ತಿಳಿಯದೆ
ಬಿಚ್ಚಿಕೊಂಡು ಕರ್ಮದ ರಾಶಿ ಗಂಟಲ್ಲಿ
ಎತ್ತಲೊ ಸಾಗಬೇಕಿದೆ ದಾರಿ ತಿಳಿದಿಲ್ಲ
ಆದರೂ ಮಾಡಿದ್ದೇವೆ ಜಾತ್ರೆ ಇಲ್ಲಿ

ದೇಹಸಂಬಂಧಿ ನಮ್ಮವರೆಲ್ಲ ಸಾಗಿ
ಹಿಂಬಾಲಿಸಿಹರು ನನ್ನೊಂದಿಗೆ ಬಾಗಿ ಬಾಗಿ
ಯಾರ ಕರ್ಮದ ಗಂಟು ತಾವು ಬಿಡಿಸಿ
ಅರಿಯದೇ ಅನುಭವಹಿಸಿಹರು ಒಂದಾಗಿ

ಏಸೋ ವೇಳೆಯೋ ಹೀಗೆ ಜನ್ಮ ಕಳೆದು
ಮತ್ತೆ ಮತ್ತೆ ಇಲ್ಲೆ ಬುವಿಯ ವ್ಯವಹಾರ
ಭಾವಗಳಿಗೆ ಬಂಧನ ಗೆರೆ ಎಳೆಯದೆ
ಮತ್ತೆ ಮತ್ತೆ ಈ ವ್ಯರ್ಥ ಸಂಸಾರ

ಸಾಕಿನ್ನು ನಿದ್ದೆ ಎಚ್ಚರಗೊಳ್ಳಲಿ ನಾವು
ಅರೆಸಬೇಕು ಆ ಬೆಳಕ ಪ್ರಪಂಚ
ಮತ್ತೆ ಈ ಜನುಮ ಬೇಡದಂತೆ
ಮಾಣಿಕ್ಯ ವಿಠಲನೆಂಬ ತೂಗುಮಂಚ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗುವೇ ನಿನ್ನದೊಂದು
Next post ಪತ್ರ – ೧೨

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…