ಬೀಜ ಯಜ್ಞ

ಮರುಳ…
‘ಕುಡಿ’ಹಣ್ಣೆಂದು
ಮೆಟ್ಟಿದೆಯಾ?
ಹೆಂಗೂಸೆಂದು
ಅಟ್ಟಿದೆಯಾ?

ನಾನು ತಾಯಿಯಲ್ಲ
ನಾನು ಹೆಂಡತಿಯಲ್ಲ
ನಾನು ಮಗಳಲ್ಲ
ತೊಲಗಾಚೆ
ಇನ್ನು ನಾ ನಿನ್ನ
ಪೊರೆವವಳಲ್ಲ…

ನಾನು ಮಮತಯಲ್ಲ
ನಾನು ಸಹನೆಯಲ್ಲ
ನಾನು ಶಾಂತಿಯಲ್ಲ
ತೊಲಗಾಚೆ
ಇನ್ನು ನಾ ನಿನ್ನ
ನಂಬುವವಳಲ್ಲ…

ಈ ನೆಲ ಈ ನದಿ
ಈ ಹೂವು ಈ ಚಿಗುರು
ಈ ಚಿಕ್ಕೆ ಈ ಚಂದ್ರ
ನಿನ್ನಂತಹವನಿಗಲ್ಲ…

ಇನ್ನು ನಾನೆಂದರೆ
ದುಃಖ-ದುಃಸ್ವಪ್ನ

ಇನ್ನು ನಾನೆಂದರೆ
ಕೇಡು-ಕಾಠಿಣ್ಯ

ಇನ್ನು ನಾನೆಂದರೆ
ರೋಷ-ವಿಷ

ನನ್ನ ಘೋಷ
ನಿನ್ನ ನಾಶ

ನನ್ನ ಆಶೆ
ನಿನ್ನ ಬಲಿ

ನನ್ನ ವ್ಯಥೆ
ನಿನ್ನ ಚಿತೆ

‘ಚಂಡಿ ಚಾಮುಂಡಿ ನಾನ್’
ಗಂಡುಸೆ ಪಿಡಿದು ಚೆಂಡಾಡುವೆ ಕೇಳ್!

ನನ್ನ ಪ್ರಾರ್ಥನೆ:
ಓ… ಬ್ರಹ್ಮಾಂಡವೆ ಕಾದು
ಕೆನ್ನಾಲಗೆಯ ಚಾಚು
ಹರಿದು ಬರುವ ಸಮಸ್ತ ಬೀಜಗಳಿಗೆ
ಹುರಿವ ಬಾಣಲೆಯಾಗು

ಓ…ಕರುಳು ಬಳ್ಳಿಯೆ
ಗರಗಸವಳ್ಳಿಯಾಗು
ನಿಷ್ಕರುಣಿಯ ಕೊರಳಿಗೆ ಉರುಳಾಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೧೦
Next post ಭಾವಪೂರ್‍ಣ ಶ್ರದ್ಧಾಂಜಲಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…