ಬೀಜ ಯಜ್ಞ

ಮರುಳ…
‘ಕುಡಿ’ಹಣ್ಣೆಂದು
ಮೆಟ್ಟಿದೆಯಾ?
ಹೆಂಗೂಸೆಂದು
ಅಟ್ಟಿದೆಯಾ?

ನಾನು ತಾಯಿಯಲ್ಲ
ನಾನು ಹೆಂಡತಿಯಲ್ಲ
ನಾನು ಮಗಳಲ್ಲ
ತೊಲಗಾಚೆ
ಇನ್ನು ನಾ ನಿನ್ನ
ಪೊರೆವವಳಲ್ಲ…

ನಾನು ಮಮತಯಲ್ಲ
ನಾನು ಸಹನೆಯಲ್ಲ
ನಾನು ಶಾಂತಿಯಲ್ಲ
ತೊಲಗಾಚೆ
ಇನ್ನು ನಾ ನಿನ್ನ
ನಂಬುವವಳಲ್ಲ…

ಈ ನೆಲ ಈ ನದಿ
ಈ ಹೂವು ಈ ಚಿಗುರು
ಈ ಚಿಕ್ಕೆ ಈ ಚಂದ್ರ
ನಿನ್ನಂತಹವನಿಗಲ್ಲ…

ಇನ್ನು ನಾನೆಂದರೆ
ದುಃಖ-ದುಃಸ್ವಪ್ನ

ಇನ್ನು ನಾನೆಂದರೆ
ಕೇಡು-ಕಾಠಿಣ್ಯ

ಇನ್ನು ನಾನೆಂದರೆ
ರೋಷ-ವಿಷ

ನನ್ನ ಘೋಷ
ನಿನ್ನ ನಾಶ

ನನ್ನ ಆಶೆ
ನಿನ್ನ ಬಲಿ

ನನ್ನ ವ್ಯಥೆ
ನಿನ್ನ ಚಿತೆ

‘ಚಂಡಿ ಚಾಮುಂಡಿ ನಾನ್’
ಗಂಡುಸೆ ಪಿಡಿದು ಚೆಂಡಾಡುವೆ ಕೇಳ್!

ನನ್ನ ಪ್ರಾರ್ಥನೆ:
ಓ… ಬ್ರಹ್ಮಾಂಡವೆ ಕಾದು
ಕೆನ್ನಾಲಗೆಯ ಚಾಚು
ಹರಿದು ಬರುವ ಸಮಸ್ತ ಬೀಜಗಳಿಗೆ
ಹುರಿವ ಬಾಣಲೆಯಾಗು

ಓ…ಕರುಳು ಬಳ್ಳಿಯೆ
ಗರಗಸವಳ್ಳಿಯಾಗು
ನಿಷ್ಕರುಣಿಯ ಕೊರಳಿಗೆ ಉರುಳಾಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೧೦
Next post ಭಾವಪೂರ್‍ಣ ಶ್ರದ್ಧಾಂಜಲಿ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…