ಬೀಜ ಯಜ್ಞ

ಮರುಳ…
‘ಕುಡಿ’ಹಣ್ಣೆಂದು
ಮೆಟ್ಟಿದೆಯಾ?
ಹೆಂಗೂಸೆಂದು
ಅಟ್ಟಿದೆಯಾ?

ನಾನು ತಾಯಿಯಲ್ಲ
ನಾನು ಹೆಂಡತಿಯಲ್ಲ
ನಾನು ಮಗಳಲ್ಲ
ತೊಲಗಾಚೆ
ಇನ್ನು ನಾ ನಿನ್ನ
ಪೊರೆವವಳಲ್ಲ…

ನಾನು ಮಮತಯಲ್ಲ
ನಾನು ಸಹನೆಯಲ್ಲ
ನಾನು ಶಾಂತಿಯಲ್ಲ
ತೊಲಗಾಚೆ
ಇನ್ನು ನಾ ನಿನ್ನ
ನಂಬುವವಳಲ್ಲ…

ಈ ನೆಲ ಈ ನದಿ
ಈ ಹೂವು ಈ ಚಿಗುರು
ಈ ಚಿಕ್ಕೆ ಈ ಚಂದ್ರ
ನಿನ್ನಂತಹವನಿಗಲ್ಲ…

ಇನ್ನು ನಾನೆಂದರೆ
ದುಃಖ-ದುಃಸ್ವಪ್ನ

ಇನ್ನು ನಾನೆಂದರೆ
ಕೇಡು-ಕಾಠಿಣ್ಯ

ಇನ್ನು ನಾನೆಂದರೆ
ರೋಷ-ವಿಷ

ನನ್ನ ಘೋಷ
ನಿನ್ನ ನಾಶ

ನನ್ನ ಆಶೆ
ನಿನ್ನ ಬಲಿ

ನನ್ನ ವ್ಯಥೆ
ನಿನ್ನ ಚಿತೆ

‘ಚಂಡಿ ಚಾಮುಂಡಿ ನಾನ್’
ಗಂಡುಸೆ ಪಿಡಿದು ಚೆಂಡಾಡುವೆ ಕೇಳ್!

ನನ್ನ ಪ್ರಾರ್ಥನೆ:
ಓ… ಬ್ರಹ್ಮಾಂಡವೆ ಕಾದು
ಕೆನ್ನಾಲಗೆಯ ಚಾಚು
ಹರಿದು ಬರುವ ಸಮಸ್ತ ಬೀಜಗಳಿಗೆ
ಹುರಿವ ಬಾಣಲೆಯಾಗು

ಓ…ಕರುಳು ಬಳ್ಳಿಯೆ
ಗರಗಸವಳ್ಳಿಯಾಗು
ನಿಷ್ಕರುಣಿಯ ಕೊರಳಿಗೆ ಉರುಳಾಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೧೦
Next post ಭಾವಪೂರ್‍ಣ ಶ್ರದ್ಧಾಂಜಲಿ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys