ಗುಲಾಬಿ ಹೂ

ಪ್ರೀತಿಯ ಪಳಿಯುಳಿಕೆಯ ಮೇಲೆ
ಸಣ್ಣ ಜೋಪಡಿ ಕಟ್ಟಿ
ಸುತ್ತ ಗುಲಾಬಿ ಗಿಡ ನೆಟ್ಟಿದ್ದೇನೆ.
ಎದೆಗನ್ನಡಿ ದೇವದಾರು ಚೌಕಟ್ಟಿಗೆ
ಅವುಚಿಕೊಂಡಿದೆ..
ತಿಂಗಳ ಬೆಳಕಿಗೆ ಬರದಿರಲಿ
ಬೆಂಕಿಯುಗುಳುವ ಖಯಾಲಿ.

ಮಾತು ಕತೆ ಸತ್ತ ದಿನಗಳಲ್ಲೂ
ದೇಹವೇ ದಾಸ್ತಾನಿನ ಕೋಣೆಯಾಗಿ
ಇಂಚಿಂಚೂ ಕರಗಿದರೂ ಒಳಸರಕುಗಳು
ಕೊಂಚವೂ ಬೇಸರಿಸದೇ
ಅರಳಿಸುತ್ತಲೇ ಇದ್ದೇನೆ ಗುಲಾಬಿ ಹೂ..
ಮಟ್ಟಸಗೊಂಡ ನೆಲದಂಚಿಗೆ
ಬರಬಾರದು ಎಂದೂ ಇಳಿಜಾರಿನ ಭೀತಿ.

ನನಸಾಗದ ಕನಸುಗಳ ಕಟ್ಟಿಕೊಳ್ಳುತ್ತಲೇ
ನನ್ನೊಳಗಿನ ಬೆಂಕಿಗೆ
ಮುಖಾಮುಖಿಯಾಗುತ್ತಲೇ
ಹುಡುಕಾಡುತ್ತ ತಡಕಾಡುತ್ತ
ಹೋಗಬಲ್ಲೆ ಚಿಮ್ಮುವ ಬೆಳಕಿನ
ನಕ್ಷತ್ರಗಳ ಗೂಡಿಗೆ
ಹಿಡಿದು ತರಬಲ್ಲೆ ತಾರಕೆಗಳ ಗುಚ್ಛವನ್ನೆ

ಚೈತ್ರದ ಚಿಗುರೊಡೆದು ಬರುವ ದಿನಗಳಿವು
ಕೊನೆ ಬರಬಾರದು ಹಾಡು ಹಸೆಗೆ
ಕುಳಿತುಣ್ಣುವ ಹಬ್ಬ ಹೋಳಿಗೆಗೆ.
ಹಬ್ಬಕ್ಕೆಂದೆ ತಂದ ಗುಲಾಬಿ ಹೂಗಳಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೯
Next post ನವಿಲುಗರಿ – ೨

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys