ಬೆಳಕ ಹಾದಿ ತುಳಿಯಿರಿ

ವಿಶ್ವವು ಒಂದಾಗಲಿ… ಬಾಳಲಿ
ಏಳಿಗೆ ಕಹಳೆಯು ಮೊಳಗಲಿ ದಿಗ್ದೆಸೆಗಳಲಿ
ತಪ್ಪಾಗದೆ ಇರಲಿ ಎನ್ನುವ ಪ್ರೇಮದ ಕೂಗು,
ವ್ಯಾಪಕವಾಗಿ ತಬ್ಬುತಲಿರುವಾಗ
ಒಡೆಯುವ ಮಾತನು ಆಡದಿರಿ; ಸಣ್ಣವರಾಗದಿರಿ
ಕನ್ನಡಕ್ಕೆ ದ್ರೋಹವ ಬಗೆಯದಿರಿ
ಆದಿಕವಿ ಪಂಪನಿಗೆ ಇರಿಯದಿರಿ.

ಇಲ್ಲಿರುವವರು ಯಾರು ?
ಅಣ್ಣ, ತಮ್ಮ, ಬಂಧು ಮಿತ್ರರಲ್ಲದೆ
ಅನ್ಯರಿರುವರೇನು ?
ಒಬ್ಬೊಬ್ಬರು ಬೇರೆ ಬೇರೆಯಾಗಿ
ಕೊನೆಗೆ ಉಳಿಯುವುದೇನು ?

ಸಹನೆಯಿರಲಿ ಕೂತು, ಚರ್ಚಿಸಿ.
ಕೊಡುವ, ಪಡೆವ ಬಾಳುವ ಮಾತು, ಕೆಲಸ ಮಾಡಿರಿ.

ಒಡೆದು ಹೋಗಿ ನರಳಿ
ಬಹು ಪ್ರಯಾಸದಿಂದ ಒಂದುಗೂಡಿ
ಕೆಟ್ಟ ಮೇಲೂ ಬುದ್ದಿ ಕಲಿಯಲಿಲ್ಲವಿವರು
ಏನು ಜನ ?
ಕೊಂದರೆಮ್ಮನೆನ್ನರೆ ಆಲೂರು ವೆಂಕಟರಾಯರಾದಿ ಹಿರಿಯರು.

ಅಂದಿಗಿಂದಿಗೂ ಬೆಳಕ ದಾರಿ ತೋರಿದ ಕನ್ನಡಿಗರು ನಾವು
ನಾವೇ ಅಡ್ಡದಾರಿ ತುಳಿದರೆ
ಕಾಲದೂರದೇನು ?
ಚರಿತ್ರೆಯಲ್ಲಿ ಉಳಿವ
ಮಾತು, ಕೃತಿ, ಚಿಂತನೆ ಕಡೆ ಗಮನ ಕೊಡಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರಿನಿಂದ ಮರಣ
Next post ಸರ್ವರೊಳಿತಿರುವ ಹಳ್ಳಿಪರ ಹೋರಾಡುವನಿವಾರ್‍ಯತೆಗೇನೆನ್ನುವುದು?

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys