ಜಿಜ್ಞಾಸೆ

ನಿನ್ನನ್ನು
ಯಾರು ಯಾರೋ
ಹೇಗ್ಹೇಗೋ.. ಇರುವೆ ಎನ್ನುವರು.

ನೋಡಿದರೆ
ಕಲ್ಲು, ಮಣ್ಣು, ಗಗನ, ಗಾಳಿ, ನೀರು, ಬೆಳಕು
ಪಶು ಪಕ್ಷಿ ಕ್ರಿಮಿ, ಕೀಟ
ನಾನಾ ತರದ ಜನ
ಬೇರೆ ಎಲ್ಲಾ ಕಾಣುತ್ತದೆ
ನೀನು ಕಾಣುತ್ತಿಲ್ಲ !

ಎಲ್ಲದರಲ್ಲಿ. ಎಲ್ಲರಲ್ಲಿ ನೀನಿದ್ದೀಯಾ
ಅಂತಾದರೆ ನನ್ನಲ್ಲೂ ನೀನಿರಬೇಕಲ್ಲ!
ಇದ್ದರೆ ಏಕೆ ಗೋಚರವಾಗುತ್ತಿಲ್ಲ

ನನ್ನ ಅನುಮಾನ
ನಿಜವಾಗಲೂ ನೀನಿದ್ದೀಯಾ ?
ಇದ್ದರೆ ಎಲ್ಲಿರುವೆ ? ಹೇಗಿರುವೆ ?
ನಾನು ನೋಡ್ಬೋಕಲ್ಲ !
ನೋಡೋ ಪಕ್ಕಾ ಮಾರ್ಗವಿದ್ದರೆ..
ಅದು ಯಾವುದು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಲ್ಪಾ
Next post ದಾರಿ ಮರೆಯದಿರಲಾ ದಾರಿ ತೋರುವುದೊಂದು ಪರಿಯಲ್ಲವೇ?

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…