ಎಲ್ಲ ಮರೆತು ಹೋಗಲಿ

ಎಲ್ಲ ಮರೆತು ಹೋಗಲಿ
ನಿನ್ನ ಪ್ರೀತಿ ಪ್ರೇಮಾ ಪ್ರಣಯ|
ಮೋಸದಿಂದ ಹೊರ ಬಂದು
ತಿಳಿಯಾಗುತಿದೆ ನನ್ನಯಾ ಹೃದಯ|
ಶುದ್ಧಂತರಂಗದಿ ಪ್ರೀತಿಸಿ ನಿನ್ನ
ಭಗ್ನವಾಗಿದೆನ್ನ ಹೃದಯ||

ಸ್ನೇಹದಿಂದ ಪ್ರೀತಿ ಬೆರೆತು
ಅಂತರಿಕ್ಷಕೆ ಹಾರಿತು ಮನ|
ಗಾಳಿಪಟದಂತೆ ಮೇಲಕ್ಕೇರಿ
ಮುಗಿಲ ಮುದ್ದಿಸಿತಾದಿನ|
ಏಕೋ ಏನೋ ನನಗರಿಯೆ
ಸೂತ್ರ ಹರಿದು ನನ್ನ ಪ್ರೇಮಪಟ
ನೆಲಕ್ಕಪಳಿಸಿತೇ ಈ ದಿನ||

ಹಾಲುಜೇನಿನಂತೆ ಬೆರೆತು
ಪ್ರೀತಿ ಸವಿ ನೀಡಿತಾದಿನ|
ಸದಾ ಹೀಗೆ ಇರುವುದೆಂದು
ಭ್ರಮೆಯಲಿ ತೇಲಾಡಿತೀಮನ|
ಏಕೋ ಏನೋ ನನಗರಿಯೆ
ಹಾಲಾಹಲವಾಗೆನ್ನ ಪ್ರೀತಿಯ
ಮೃತ್ಯುಗೈದಿತು ಈ ದಿನ||
*****

One thought on “0

Leave a Reply to Suresh Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಡಿಕೆ ಸುಲಿಯುವ ಯಂತ್ರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೮

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys