Home / ಕವನ / ಕವಿತೆ / ಭೀಷ್ಮ ನಿರ್‍ಯಾಣ

ಭೀಷ್ಮ ನಿರ್‍ಯಾಣ

(ಮತ್ತೇಭವಿಕ್ರೀಡಿತ)

ಇಳಿದಂ ಪರ್ವತದಗ್ರದಿಂದೆ ದಿನವಂ, ಕೆಂಪೇರ್ದುದಾಕಾಶಮಂ-
ಡಳಮುಂ ಶೋಭಿಸಿದತ್ತು. ಪೂರ್ವದಿಶೆಯೊಳ್‌ ಕಾಲಿಟ್ಟುದೈ ಕತ್ತಲುಂ.
ಇಳಿದಸ್ತ೦ಗತನಾಗುತಿರ್ದನಧಿಕ ಶ್ರೇಯಃಪ್ರತಾಪಂಗಳಿಂ
ವಿಳಸದ್ಭಾರತದದ್ವಿತೀಯ ರವಿಯುಂ ಭೀಷ್ಮಂ ಕುರುಕ್ಷೇತ್ರದೊಳ್.

ಶಿರಮಂ ಬಾಗಿಸೆ ಚಿಂತೆಯಿಂ, ಗಳದ ಸಂದೊಳ್ ಸಿಲ್ಕಲಾ ನಿಟ್ಟುಸಿರ್,
ಸುರಿದುಂ ಕಂಬನಿ ಜಾರೆ ಗಲ್ಲತಟದೊಳ್‌, ಕುಂತೀಕುಮಾರರ್ ವಲಂ
ಮರಣಾಸನ್ನನ ತಲ್ಪಮಂ ಬಳಸಿ ನಿಂದರ್; ಭೀಷ್ಮನುಂ ಕಂಗಳಂ
ತೆರೆದುಂ ನೋಡಿದನೊಮ್ಮೆ ಕೃಷ್ಣಮುಖಮಂ ಮಂದಸ್ಮಿತಾಹ್ಲಾದದಿಂ

“ಆರೆರೇ! ಧರ್ಮಜ! ಮಾತೃಭೂಮಿಯ ಪರಾಧೀನತ್ವದಾಪಾಶಮಂ
ತರಿದುಂ, ಧರ್ಮಪತಾಕೆಯಂ ಭರತಕ್ಷೋಣೀ ವಕ್ಷದೊಳ್‌ ನೆಟ್ಟಿಹೈ!
ಶಿರದೊಳ್‌ ಪಾತಕಮಿಲ್ಲಮಿಲ್ಲಮಿನಿಸುಂ ದುರ್ಯೋಧನ ಧ್ವಂಸದಿಂ,
ಧರೆಯಂ ಪಾಲಿಸು ಮೆಚ್ಚುವೊಲ್ ಪ್ರಜೆಗಳುಂ! ಕರ್ತವ್ಯದೊಳ್‌ ಕಣ್ಣಿಡೈ!

ನುಡಿಯಿಂದುಜ್ವಲಕಾಂತಿ ಭೀಷ್ಮಮುಖದೊಳ್‌ ವಿಭ್ರಾಜಿಸಲ್‌, ಹಸ್ತದಿಂ-
ದೊಡನಾಶೀರ್ವದಿಸುತ್ತ ಧರ್ಮಸುತನಂ, ಶ್ರೀಕೃಷ್ಣನುತ್ಸಂಗದೊಳ್
ಮುಡಿಯಂ ನೀಡಿ, ಮಲಂಗಿದಂ ಸುಭಟಭೀಷ್ಮಂ ಯೋಧಶಾರ್ದೂಲಮಂ
ದೊಡಲಿಂ ನೀಡಿ, ಮಲಗಿದಂ ಸುಭಟಭೀಷ್ಮಂ ಯೋಧಶಾರ್ದೂಲಮಂ
ದೊಡಲಿಂ ನಂದುದು ಲೇಶಜೀವಕಳೆಯುಂ-ನಿರ್ಯಾಣದಾ ದೀಪದೋಲ್
*****
(ಸುವಾಸಿನಿಯಿಂದ ೧೯೦೨)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...