ಗ್ರಾಮರ್ ಟೀಚರಿಗೆ

ಬಿತ್ತುತ್ತಿದ್ದಾನೆ ಮುಳ್ಳನ್ನ ಕುಟ್ಟುತ್ತಿದ್ದಾನೆ ತೌಡನ್ನ
ಕಟ್ಟುತ್ತಿದ್ದಾನೆ ಒಂದೇ ಸಮನೆ ತಾನೇ ತನ್ನ ಚಟ್ಟವನ್ನ.
ಅಯ್ಯಾ ಬೆಳ್ಳಯ್ಯ! ನಿನ್ನ ಮೈಯ ಮರೆಸುವ
ಈ ಗ್ರಾಮರು ಡಾಮರು ಯಾಕೆ?
ಕೊಟ್ಟ ಕಾಫಿಗೆ ಥ್ಯಾಂಕ್ಸ್ ಹೇಳುವಾಗಲೂ
ಪಾಣಿನಿ ಪತಂಜಲಿ ಬೇಕೆ?

ನಿನ್ನ ಕಾಲ ಬಳಿ ಐವತ್ತು ಗ್ರೀಷ್ಮಋತು ಉದುರಿದೆ
ಬಿಳಿಗೂದಲಲ್ಲಿ ತಲೆ
ಸಾವಿನ ಬಲೆ ನೇಯುತ್ತಿದೆ
ಹಣೆ ನಿರಿಗೆಯಲ್ಲಿ ಬೇಡನ ಭಾರಿ ಕಣೆ
ಕ್ರಮಕ್ರಮೇಣ ಮೊನೆಗೊಂಡು ಬೆಳೆಯುತ್ತಿದೆ.

ಅಯ್ಯಾ, ನಿನ್ನೆ ನೈಕಟ್ಯ ಪ್ರಾಕಟ್ಯಗಳ ಹುಲಿಮುಖ ಕಳಚಿ
ಹೆಂಡತಿ ಜತೆ ಜಗಳವಾಡಿ ಸ್ವಲ್ಪ ಬೈಸಿಕೊ,
ಕತ್ತೆತ್ತರಕ್ಕೆ ನೀನೇ ಎತ್ತಿಹಿಡಿದು
ನಿನ್ನ ಮಗು ಕೈಯಲ್ಲಿ ಕೆನ್ನೆಗೆ ಬಿಗಿಸಿಕೊ.
ಕೊಟ್ಟ ಹಲಸನ್ನು ಮುಚ್ಚಿಟ್ಟು ಕೂತವನೆ
ಅದನ್ನಷ್ಟು ಹೆಚ್ಚು
ಎಣ್ಣೆ ಹಚ್ಚಿದ ಕೈಯನ್ನ ಅದರಲ್ಲಿ ಬಿಚ್ಚಿ
ಲೋಕದ ತೊಡೆಗೆ ಹಲ್ಲುಹಾಕಿ ಕಚ್ಚು;
ಹತ್ತಿದ ಸೊನೆಯನ್ನು ಒದರುತ್ತ
ಜೊಲ್ಲಿಳಿಸಿ ಸಿಹಿತೊಳೆ ಜಗಿಯುತ್ತ
ಒಂದು ದಿನವಾದರೂ ನಿಜವಾಗಿ ಬಾಳು;
ಅಲ್ಲಿಯವರೆಗೆ ಮಿದುಳ ಬಾಗಿಲು ತೆರೆದು
ನೀ ಕಾಪೀಚೆಟ್ಟು ಹೊಡೆದ ಬ್ಲೂಮ್‌ಫೀಲ್ಡನಿಗೆ
ಗೇಟಾಚೆ ನಿಂತಿರಲು ಹೇಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಂಚಾವತಾರ
Next post ಭೀಷ್ಮ ನಿರ್‍ಯಾಣ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…