ಗ್ರಾಮರ್ ಟೀಚರಿಗೆ

ಬಿತ್ತುತ್ತಿದ್ದಾನೆ ಮುಳ್ಳನ್ನ ಕುಟ್ಟುತ್ತಿದ್ದಾನೆ ತೌಡನ್ನ
ಕಟ್ಟುತ್ತಿದ್ದಾನೆ ಒಂದೇ ಸಮನೆ ತಾನೇ ತನ್ನ ಚಟ್ಟವನ್ನ.
ಅಯ್ಯಾ ಬೆಳ್ಳಯ್ಯ! ನಿನ್ನ ಮೈಯ ಮರೆಸುವ
ಈ ಗ್ರಾಮರು ಡಾಮರು ಯಾಕೆ?
ಕೊಟ್ಟ ಕಾಫಿಗೆ ಥ್ಯಾಂಕ್ಸ್ ಹೇಳುವಾಗಲೂ
ಪಾಣಿನಿ ಪತಂಜಲಿ ಬೇಕೆ?

ನಿನ್ನ ಕಾಲ ಬಳಿ ಐವತ್ತು ಗ್ರೀಷ್ಮಋತು ಉದುರಿದೆ
ಬಿಳಿಗೂದಲಲ್ಲಿ ತಲೆ
ಸಾವಿನ ಬಲೆ ನೇಯುತ್ತಿದೆ
ಹಣೆ ನಿರಿಗೆಯಲ್ಲಿ ಬೇಡನ ಭಾರಿ ಕಣೆ
ಕ್ರಮಕ್ರಮೇಣ ಮೊನೆಗೊಂಡು ಬೆಳೆಯುತ್ತಿದೆ.

ಅಯ್ಯಾ, ನಿನ್ನೆ ನೈಕಟ್ಯ ಪ್ರಾಕಟ್ಯಗಳ ಹುಲಿಮುಖ ಕಳಚಿ
ಹೆಂಡತಿ ಜತೆ ಜಗಳವಾಡಿ ಸ್ವಲ್ಪ ಬೈಸಿಕೊ,
ಕತ್ತೆತ್ತರಕ್ಕೆ ನೀನೇ ಎತ್ತಿಹಿಡಿದು
ನಿನ್ನ ಮಗು ಕೈಯಲ್ಲಿ ಕೆನ್ನೆಗೆ ಬಿಗಿಸಿಕೊ.
ಕೊಟ್ಟ ಹಲಸನ್ನು ಮುಚ್ಚಿಟ್ಟು ಕೂತವನೆ
ಅದನ್ನಷ್ಟು ಹೆಚ್ಚು
ಎಣ್ಣೆ ಹಚ್ಚಿದ ಕೈಯನ್ನ ಅದರಲ್ಲಿ ಬಿಚ್ಚಿ
ಲೋಕದ ತೊಡೆಗೆ ಹಲ್ಲುಹಾಕಿ ಕಚ್ಚು;
ಹತ್ತಿದ ಸೊನೆಯನ್ನು ಒದರುತ್ತ
ಜೊಲ್ಲಿಳಿಸಿ ಸಿಹಿತೊಳೆ ಜಗಿಯುತ್ತ
ಒಂದು ದಿನವಾದರೂ ನಿಜವಾಗಿ ಬಾಳು;
ಅಲ್ಲಿಯವರೆಗೆ ಮಿದುಳ ಬಾಗಿಲು ತೆರೆದು
ನೀ ಕಾಪೀಚೆಟ್ಟು ಹೊಡೆದ ಬ್ಲೂಮ್‌ಫೀಲ್ಡನಿಗೆ
ಗೇಟಾಚೆ ನಿಂತಿರಲು ಹೇಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಂಚಾವತಾರ
Next post ಭೀಷ್ಮ ನಿರ್‍ಯಾಣ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys