ಗ್ರಾಮರ್ ಟೀಚರಿಗೆ

ಬಿತ್ತುತ್ತಿದ್ದಾನೆ ಮುಳ್ಳನ್ನ ಕುಟ್ಟುತ್ತಿದ್ದಾನೆ ತೌಡನ್ನ
ಕಟ್ಟುತ್ತಿದ್ದಾನೆ ಒಂದೇ ಸಮನೆ ತಾನೇ ತನ್ನ ಚಟ್ಟವನ್ನ.
ಅಯ್ಯಾ ಬೆಳ್ಳಯ್ಯ! ನಿನ್ನ ಮೈಯ ಮರೆಸುವ
ಈ ಗ್ರಾಮರು ಡಾಮರು ಯಾಕೆ?
ಕೊಟ್ಟ ಕಾಫಿಗೆ ಥ್ಯಾಂಕ್ಸ್ ಹೇಳುವಾಗಲೂ
ಪಾಣಿನಿ ಪತಂಜಲಿ ಬೇಕೆ?

ನಿನ್ನ ಕಾಲ ಬಳಿ ಐವತ್ತು ಗ್ರೀಷ್ಮಋತು ಉದುರಿದೆ
ಬಿಳಿಗೂದಲಲ್ಲಿ ತಲೆ
ಸಾವಿನ ಬಲೆ ನೇಯುತ್ತಿದೆ
ಹಣೆ ನಿರಿಗೆಯಲ್ಲಿ ಬೇಡನ ಭಾರಿ ಕಣೆ
ಕ್ರಮಕ್ರಮೇಣ ಮೊನೆಗೊಂಡು ಬೆಳೆಯುತ್ತಿದೆ.

ಅಯ್ಯಾ, ನಿನ್ನೆ ನೈಕಟ್ಯ ಪ್ರಾಕಟ್ಯಗಳ ಹುಲಿಮುಖ ಕಳಚಿ
ಹೆಂಡತಿ ಜತೆ ಜಗಳವಾಡಿ ಸ್ವಲ್ಪ ಬೈಸಿಕೊ,
ಕತ್ತೆತ್ತರಕ್ಕೆ ನೀನೇ ಎತ್ತಿಹಿಡಿದು
ನಿನ್ನ ಮಗು ಕೈಯಲ್ಲಿ ಕೆನ್ನೆಗೆ ಬಿಗಿಸಿಕೊ.
ಕೊಟ್ಟ ಹಲಸನ್ನು ಮುಚ್ಚಿಟ್ಟು ಕೂತವನೆ
ಅದನ್ನಷ್ಟು ಹೆಚ್ಚು
ಎಣ್ಣೆ ಹಚ್ಚಿದ ಕೈಯನ್ನ ಅದರಲ್ಲಿ ಬಿಚ್ಚಿ
ಲೋಕದ ತೊಡೆಗೆ ಹಲ್ಲುಹಾಕಿ ಕಚ್ಚು;
ಹತ್ತಿದ ಸೊನೆಯನ್ನು ಒದರುತ್ತ
ಜೊಲ್ಲಿಳಿಸಿ ಸಿಹಿತೊಳೆ ಜಗಿಯುತ್ತ
ಒಂದು ದಿನವಾದರೂ ನಿಜವಾಗಿ ಬಾಳು;
ಅಲ್ಲಿಯವರೆಗೆ ಮಿದುಳ ಬಾಗಿಲು ತೆರೆದು
ನೀ ಕಾಪೀಚೆಟ್ಟು ಹೊಡೆದ ಬ್ಲೂಮ್‌ಫೀಲ್ಡನಿಗೆ
ಗೇಟಾಚೆ ನಿಂತಿರಲು ಹೇಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಂಚಾವತಾರ
Next post ಭೀಷ್ಮ ನಿರ್‍ಯಾಣ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…