Home / ಕವನ / ಅನುವಾದ / ನಮ್ಮ ಕರ್ತವ್ಯ ನಾವು ಮಾಡಿದ್ದೇವೆ

ನಮ್ಮ ಕರ್ತವ್ಯ ನಾವು ಮಾಡಿದ್ದೇವೆ

ನಮ್ಮ ಕರ್ತವ್ಯ ನಾವು ಮಾಡಿದ್ದೇವೆ
ನಾವು ಮಕ್ಕಳಾಗಿದ್ದಾಗ ನೆಟ್ಟ ಅಣಬೆಗಳನ್ನು
ನಮ್ಮ ಮಕ್ಕಳೊಂದಿಗೆ
ಕಾಡಿಗೆ ಹೋಗಿ ಆಯ್ದಿದ್ದೇವೆ.
ವ್ಯರ್ಥ ಸುರಿದ ರಕ್ತದ ವಾಸನೆಯಂಥ
ವಾಸನೆ ಇದ್ದ ಕಾಡುಹೂಗಳ ಹೆಸರು ಕಲಿತಿದ್ದೇವೆ.
ಪುಟ್ಟಮೈಗಳ ಮೇಲೆ ದೊಡ್ಡಪ್ರ್‍ಈತಿ ಹೊರಿಸಿದ್ದೇವೆ.
ದುರ್ಬೀನು ಹಿಡಿದ ದಿವ್ಯ ಹುಚ್ಚನ ಕಣ್ಣಿಗೆ
ಹಿಗ್ಗಿಮತ್ತೆ ಕುಗ್ಗಿಕಂಡಿದ್ದೇವೆ.
ಬೆಳಕಿನ ಮಕ್ಕಳೊಡನೆ ಕತ್ತಲ ಮಕ್ಕಳು ಯುದ್ಧಮಾಡಿದಾಗ
ನೆಮ್ಮದಿಯ ಲೇಪಿಸುವ ಒಳ್ಳೆಯ ಕತ್ತಲನ್ನು ಪ್ರೀತಿಸಿ
ನೋವು ತರುವ ಬೆಳಕನ್ನು ದ್ವೇಷಿಸಿದ್ದೇವೆ.
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.

ನಮ್ಮ ಮಕ್ಕಳನ್ನು ನಮ್ಮ ದೇಶಕ್ಕಿಂತ ಹೆಚ್ಚು
ಪ್ರೀತಿಸಿದ್ದೇವೆ. ನೆಲದಲ್ಲಿ ಬಾವಿ ತೋಡಿದ್ದೇವೆ.
ಈಗ ಆಕಾಶದಲ್ಲಿ
ಕೊನೆ ಇಲ್ಲದ ಮೊದಲಿಲ್ಲದ
ಬಾವಿಗಳೆಷ್ಟೊಂದನ್ನೂ ತೋಡುತಿದ್ದೇವೆ.
ನಮ್ಮ ಕರ್‍ತವ್ಯ ನಾವು ಮಾಡಿದ್ದೇವೆ.

‘ನೀವು ನೆನಪಿಟ್ಟುಕೊಳ್ಳತಕ್ಕದ್ದು’
ಅನ್ನುವ ಮಾತು
‘ನೀವು ಮರೆಯುತ್ತೀರಿ’
ಎಂದು ಬದಲಾಗಿದೆ –
ರೂಟು ಬದಲಾದ ಬಸ್ಸಿನ
ಟೈಂಟೇಬಲ್ಲೂ ಬದಲಾಗುವ ಹಾಗೆ,
ಸಿನೊಗಾಗ್ನಲ್ಲಿ, ಋತು ಬದಲಾದಂತೆ
‘ಇಬ್ಬನಿ ಮತ್ತು ಮಳೆ’
ಎಂಬ ಫಲಕ
‘ಮಳೆಯನ್ನು ತರುವವನು’
ಎಂದು ಬದಲಾಗುವ ಹಾಗೆ
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.

ನಮ್ಮ ಬದುಕನ್ನು ಅಚ್ಚುಕಟ್ಟು ಮಾಡಿದ್ದೇವೆ…
ಹೂಹಾಸು, ಮೆತ್ತನೆ ಲಾನು, ಹಿತವಾದ ನೆರಳು.
ಹಸಿರು ತುಂಬಿದ ಕಾಲು ಹಾದಿ ಇವೆಲ್ಲ
ಹುಚ್ಚಾಸ್ಪತ್ರೆಯ ಮುಂದೆ ಇರುವ ಹಾಗೆ.
ಹತಾಶೆ ಜೆನ್ನಾಗಿ ಪಳಗಿ ನಮಗೆ ಶಾಂತಿ ತಂದಿದೆ.
ಆಶೆಗಳು ಮಾತ್ರ ಉಳಿದಿವೆ.
ರಾತ್ರಿಗಳನ್ನು ಛಿದ್ರಮಾಡಿ, ಹಗಲನ್ನು ಚಿಂದಿಮಾಡುವ ಅದಮ್ಯ ಆಶೆಗಳು.
ಸಿನಿಮಾ ಥಿಯೇಟರಿನೊಳಗೆ ಹೋಗುತ್ತಿರುವ ಜನ
ಮುಖ ಕೆಂಪಾಗಿ, ಕಣ್ಣು‌ಊದಿ, ಅಥವಾ ಬೇಸತು, ಅಥವಾ
ತುಟಿಯಲ್ಲಿ ಕಣ್ಣಲ್ಲಿ ನಗೆ ತುಂಬಿ ಹೊರಬರುತ್ತಿರುವ ಜನರನ್ನು
ನೋಡಿದರೂ ಗಮನಿಸದೆ, ಹಿಂದೆ ತಿರುಗದೆ,
ಕತಲು ಬೆಳಕು ಕತ್ತಲುಗಳಿಗೆ ಕಾಲಿಡುವ ಹಾಗೆ,
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.
*****
ಮೂಲ: ಯೆಹೂದಾ ಅಮಿಛಾಯ್

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...