Home / ಕವನ / ಅನುವಾದ / ನಮ್ಮ ಕರ್ತವ್ಯ ನಾವು ಮಾಡಿದ್ದೇವೆ

ನಮ್ಮ ಕರ್ತವ್ಯ ನಾವು ಮಾಡಿದ್ದೇವೆ

ನಮ್ಮ ಕರ್ತವ್ಯ ನಾವು ಮಾಡಿದ್ದೇವೆ
ನಾವು ಮಕ್ಕಳಾಗಿದ್ದಾಗ ನೆಟ್ಟ ಅಣಬೆಗಳನ್ನು
ನಮ್ಮ ಮಕ್ಕಳೊಂದಿಗೆ
ಕಾಡಿಗೆ ಹೋಗಿ ಆಯ್ದಿದ್ದೇವೆ.
ವ್ಯರ್ಥ ಸುರಿದ ರಕ್ತದ ವಾಸನೆಯಂಥ
ವಾಸನೆ ಇದ್ದ ಕಾಡುಹೂಗಳ ಹೆಸರು ಕಲಿತಿದ್ದೇವೆ.
ಪುಟ್ಟಮೈಗಳ ಮೇಲೆ ದೊಡ್ಡಪ್ರ್‍ಈತಿ ಹೊರಿಸಿದ್ದೇವೆ.
ದುರ್ಬೀನು ಹಿಡಿದ ದಿವ್ಯ ಹುಚ್ಚನ ಕಣ್ಣಿಗೆ
ಹಿಗ್ಗಿಮತ್ತೆ ಕುಗ್ಗಿಕಂಡಿದ್ದೇವೆ.
ಬೆಳಕಿನ ಮಕ್ಕಳೊಡನೆ ಕತ್ತಲ ಮಕ್ಕಳು ಯುದ್ಧಮಾಡಿದಾಗ
ನೆಮ್ಮದಿಯ ಲೇಪಿಸುವ ಒಳ್ಳೆಯ ಕತ್ತಲನ್ನು ಪ್ರೀತಿಸಿ
ನೋವು ತರುವ ಬೆಳಕನ್ನು ದ್ವೇಷಿಸಿದ್ದೇವೆ.
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.

ನಮ್ಮ ಮಕ್ಕಳನ್ನು ನಮ್ಮ ದೇಶಕ್ಕಿಂತ ಹೆಚ್ಚು
ಪ್ರೀತಿಸಿದ್ದೇವೆ. ನೆಲದಲ್ಲಿ ಬಾವಿ ತೋಡಿದ್ದೇವೆ.
ಈಗ ಆಕಾಶದಲ್ಲಿ
ಕೊನೆ ಇಲ್ಲದ ಮೊದಲಿಲ್ಲದ
ಬಾವಿಗಳೆಷ್ಟೊಂದನ್ನೂ ತೋಡುತಿದ್ದೇವೆ.
ನಮ್ಮ ಕರ್‍ತವ್ಯ ನಾವು ಮಾಡಿದ್ದೇವೆ.

‘ನೀವು ನೆನಪಿಟ್ಟುಕೊಳ್ಳತಕ್ಕದ್ದು’
ಅನ್ನುವ ಮಾತು
‘ನೀವು ಮರೆಯುತ್ತೀರಿ’
ಎಂದು ಬದಲಾಗಿದೆ –
ರೂಟು ಬದಲಾದ ಬಸ್ಸಿನ
ಟೈಂಟೇಬಲ್ಲೂ ಬದಲಾಗುವ ಹಾಗೆ,
ಸಿನೊಗಾಗ್ನಲ್ಲಿ, ಋತು ಬದಲಾದಂತೆ
‘ಇಬ್ಬನಿ ಮತ್ತು ಮಳೆ’
ಎಂಬ ಫಲಕ
‘ಮಳೆಯನ್ನು ತರುವವನು’
ಎಂದು ಬದಲಾಗುವ ಹಾಗೆ
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.

ನಮ್ಮ ಬದುಕನ್ನು ಅಚ್ಚುಕಟ್ಟು ಮಾಡಿದ್ದೇವೆ…
ಹೂಹಾಸು, ಮೆತ್ತನೆ ಲಾನು, ಹಿತವಾದ ನೆರಳು.
ಹಸಿರು ತುಂಬಿದ ಕಾಲು ಹಾದಿ ಇವೆಲ್ಲ
ಹುಚ್ಚಾಸ್ಪತ್ರೆಯ ಮುಂದೆ ಇರುವ ಹಾಗೆ.
ಹತಾಶೆ ಜೆನ್ನಾಗಿ ಪಳಗಿ ನಮಗೆ ಶಾಂತಿ ತಂದಿದೆ.
ಆಶೆಗಳು ಮಾತ್ರ ಉಳಿದಿವೆ.
ರಾತ್ರಿಗಳನ್ನು ಛಿದ್ರಮಾಡಿ, ಹಗಲನ್ನು ಚಿಂದಿಮಾಡುವ ಅದಮ್ಯ ಆಶೆಗಳು.
ಸಿನಿಮಾ ಥಿಯೇಟರಿನೊಳಗೆ ಹೋಗುತ್ತಿರುವ ಜನ
ಮುಖ ಕೆಂಪಾಗಿ, ಕಣ್ಣು‌ಊದಿ, ಅಥವಾ ಬೇಸತು, ಅಥವಾ
ತುಟಿಯಲ್ಲಿ ಕಣ್ಣಲ್ಲಿ ನಗೆ ತುಂಬಿ ಹೊರಬರುತ್ತಿರುವ ಜನರನ್ನು
ನೋಡಿದರೂ ಗಮನಿಸದೆ, ಹಿಂದೆ ತಿರುಗದೆ,
ಕತಲು ಬೆಳಕು ಕತ್ತಲುಗಳಿಗೆ ಕಾಲಿಡುವ ಹಾಗೆ,
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.
*****
ಮೂಲ: ಯೆಹೂದಾ ಅಮಿಛಾಯ್

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...