Home / ಕವನ / ಕವಿತೆ / ಭೂಮಿ ಗುಂಡಾಗಿದೆ ನಿಜತಾನೆ?

ಭೂಮಿ ಗುಂಡಾಗಿದೆ ನಿಜತಾನೆ?

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ!
ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ;
ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ
ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ.

ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ
ಮಣ್ಣು ಹಡೆದದ್ದರಿತೆ ಪ್ರೀತಿ ನೀತಿ ;
ಮುಟ್ಟಿದರೆ ಮೈಲಿಗೆ, ಗೆದ್ದವರ ಸಾಲಿಗೆ
ತೆಪ್ಪ ತೇಲಿತು ಬನ್ನಿ ತೆರೆಮೇಲಕೆ.

ಬಣ್ಣಬಣ್ಣದ ಗುಳ್ಳೆ ಬಾಳಂತೆ, ಇರಬಹುದು
ನೀರು ಒಡೆಯುವುದಿಲ್ಲ ಚಿಂತೆ ಏಕೆ?
ಆಟವಾಡಿದ ಜನರು ಹೇಳಿದುದ ಕೇಳಿದಿರ?
ಔಟು ಜೂಟುಗಳೆಲ್ಲ ಕುಣಿವ ನೆಪಕೆ.

ಹರಿದು ಹೋಯಿತು ನನ್ನ ಹಳೆಯ ಪುಸ್ತಕ, ಎಸೆದು
ಆನಂದ ಹೊಸ ‘ಕಾಪಿ’ ಕೊಂಡು ತಂದ;
ಹಳೆ ತಪ್ಪ ತಿದ್ದಿ ಹೊಸ ಹಾಳೆಯಲಿ ಮುದ್ರಿಸಿದೆ
ನೀವೇನೆ ಹೇಳಿ ಇದು ಅದಕು ಚಂದ.

ನೆರೆಯವರು ಯಾರೆಂದೆ ಇನ್ನು ಗೊತ್ತಿಲ್ಲ,
ವರುಷಗಳೆ ಉರುಳಿದುವು ಇಲ್ಲಿ ಬಂದು!
ಮತ್ತೆ ಹೊಕ್ಕುಳ ಸುತ್ತ ದೃಷ್ಟಿ ಸುತ್ತುತ್ತ ಇದೆ
ಹಳೆಯ ಕಥೆ ಕನಸುಗಳ ನೆನಪ ಕೊಂದು.

ಹೆರಳ ಮರೆಯಲಿ ನಿಂತು ಮಲ್ಲಿಗೆಯ ಮೂಸಿದೆವು
ಪರಿಮಳಕೆ ಅರಳಿದುವು ನೂರು ಕನಸು;
ಕತ್ತಲಿನ ಬಟ್ಟಲಲಿ ಬೆಳುದಿಂಗಳನು ತುಂಬಿ
ಮುಖ ಆಚೆ ಬದಿಗಿಹುದು, ಹಡೆದ ನನಸು.

ತೂಬು ತೆರೆಯಲು ನಿನಗೆ ಹಿಂಜರಿಕೆ ಬೇಕಿಲ್ಲ
ಇದೆ ಮೋಡ ಕಡಲು ಕೆರೆಯೊಡಲು ಬಿಸಿಲು;
ನೀರು ತುಂಬಲಿ ನಾಳೆ, ಸರಿಸು ಓದಿದ ಹಾಳೆ
(ಆಟವಾಡಿದ ಜನರ ಮಾತು ಮೇಲೆ).

ಹತ್ತು ವರುಷದ ಹಿಂದೆ ಮತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನಾವೇನೆ!
ಹತ್ತು ವರುಷದ ಮೇಲೆ ಮತ್ತೆ ಬರುವೆವು ಬಿಡಿ
ಭೂಮಿ ಗುಂಡಾಗಿದೆ ನಿಜತಾನೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...