Home / ಕವನ / ಕವಿತೆ / ಅಪಘಾತ

ಅಪಘಾತ

ಸ್ವಾಮಿ, ಇದೆ ಕಡೆಗೀಟು;
ತಲೆತಲಾಂತರದಿಂದ
ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ
ಎಂಥ ಘನ ಬಾದರಾಯಣ ದೈತ್ಯಬಂಧವೂ
ದಾಟಬಾರದ ಕಟ್ಟಕಡೆಗಟ್ಟು ಇದರೀಚೆ
ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ
ಬದುಕು ನನ್ನದೆ ನಾಚು. ಹಾ! ನಿಲ್ಲಿ ನುಗ್ಗದಿರಿ;
ಭಂಡತನದಲಿ ಹಾಗೆ ದಬ್ಬಿದಿರೊ, ಸಿಹಿಮೊಲ್ಲೆ
ಮಾತು ಮೊಸರನ್ನದಲಿ ಕಲ್ಲಾಗಿ ಹವೆ ತುಂಬ
ಸಿಡಿಯುವುದು ಮದ್ದು ಲಾಟೀಪೆಟ್ಬು ಕಲ್ಲೇಟು.
ಸುತ್ತ ನಡೆಸಿರಿ
ಹಂಡೆ ಕಳ್ಳು ಹೇರಿದ ನಿಮ್ಮ ದೆವ್ವಲಾರಿಯ
ಇದ್ದರದಕೆ ತೆಗೆದೇ ಬ್ರೇಕ,
ಧಮ್ಮಸ್ಸಿನಲಿ ಕುಟ್ಟಿ ಜಡಿದ ಸೆಟೆಗಲ್ಲುಗಳು
ಕಿತ್ತೆದ್ದು ಸಿಡಿದು ಮುಖಕೇ ಬೀಸಿ ಬಡಿವನಕ,

ಸರ್ಕಲ್ಲ ಸುತ್ತ ಬಿದ್ದಿದೆ ಹರಿದಮೈ-ರಸ್ತೆ;
ನಡುವೆ ಇಷ್ಟಗಲ ಹಾಯಾಗಿ ಸಿರಿಮೈಯೆತ್ತಿ
ತೂಗುತಿದೆ ಹಸಿರು. ಸ್ವಾಮೀ ನಿಮ್ಮ ಮೋಟಾರು
ಹತ್ತದಿರಲಷ್ಟೆ ಸರ್ಕಲ್ಲಿನಂಚ! ಹತ್ತಿತೋ
ಹುಲ್ಲೆ ಸತ್ತೀತು, ಇಲ್ಲವೆ ಕಲ್ಲ ತಡೆ ಬಡಿದು
ಲಾರಿ ಉರುಳೀತು, ಮದ್ಯದ ಡೊಳ್ಳು ಪಾಲಾಗಿ
ಕೆಟ್ಟ ಜನ ಹುಯ್ಲ ಎಬ್ಬಿಸಿ ಕೇಕೆ ಹಾಕುತ್ತ
ರಕ್ತದಂಥಾ ಮದ್ಯ ಮಣ್ಣಿನಲಿ ಇಂಗೀತು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...