ಅಪಘಾತ

ಸ್ವಾಮಿ, ಇದೆ ಕಡೆಗೀಟು;
ತಲೆತಲಾಂತರದಿಂದ
ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ
ಎಂಥ ಘನ ಬಾದರಾಯಣ ದೈತ್ಯಬಂಧವೂ
ದಾಟಬಾರದ ಕಟ್ಟಕಡೆಗಟ್ಟು ಇದರೀಚೆ
ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ
ಬದುಕು ನನ್ನದೆ ನಾಚು. ಹಾ! ನಿಲ್ಲಿ ನುಗ್ಗದಿರಿ;
ಭಂಡತನದಲಿ ಹಾಗೆ ದಬ್ಬಿದಿರೊ, ಸಿಹಿಮೊಲ್ಲೆ
ಮಾತು ಮೊಸರನ್ನದಲಿ ಕಲ್ಲಾಗಿ ಹವೆ ತುಂಬ
ಸಿಡಿಯುವುದು ಮದ್ದು ಲಾಟೀಪೆಟ್ಬು ಕಲ್ಲೇಟು.
ಸುತ್ತ ನಡೆಸಿರಿ
ಹಂಡೆ ಕಳ್ಳು ಹೇರಿದ ನಿಮ್ಮ ದೆವ್ವಲಾರಿಯ
ಇದ್ದರದಕೆ ತೆಗೆದೇ ಬ್ರೇಕ,
ಧಮ್ಮಸ್ಸಿನಲಿ ಕುಟ್ಟಿ ಜಡಿದ ಸೆಟೆಗಲ್ಲುಗಳು
ಕಿತ್ತೆದ್ದು ಸಿಡಿದು ಮುಖಕೇ ಬೀಸಿ ಬಡಿವನಕ,

ಸರ್ಕಲ್ಲ ಸುತ್ತ ಬಿದ್ದಿದೆ ಹರಿದಮೈ-ರಸ್ತೆ;
ನಡುವೆ ಇಷ್ಟಗಲ ಹಾಯಾಗಿ ಸಿರಿಮೈಯೆತ್ತಿ
ತೂಗುತಿದೆ ಹಸಿರು. ಸ್ವಾಮೀ ನಿಮ್ಮ ಮೋಟಾರು
ಹತ್ತದಿರಲಷ್ಟೆ ಸರ್ಕಲ್ಲಿನಂಚ! ಹತ್ತಿತೋ
ಹುಲ್ಲೆ ಸತ್ತೀತು, ಇಲ್ಲವೆ ಕಲ್ಲ ತಡೆ ಬಡಿದು
ಲಾರಿ ಉರುಳೀತು, ಮದ್ಯದ ಡೊಳ್ಳು ಪಾಲಾಗಿ
ಕೆಟ್ಟ ಜನ ಹುಯ್ಲ ಎಬ್ಬಿಸಿ ಕೇಕೆ ಹಾಕುತ್ತ
ರಕ್ತದಂಥಾ ಮದ್ಯ ಮಣ್ಣಿನಲಿ ಇಂಗೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂದೇವಿ
Next post ಲಾಲಿಽಽಽ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys