Home / ಕವನ / ಅನುವಾದ / ಪತ್ರ

ಪತ್ರ

ಜೆರುಸಲೆಮ್ಮಿನ ಹೋಟೆಲಿನ ವೆರಾಂಡದಲ್ಲಿ ಕುಳಿತು
ಹೀಗೆ ಬರೆಯುವುದೇ ‘ಮರುಭೂಮಿಯಿಂದ ಸಾಗರದತ್ತ
ಸುಂದರ ದಿನಗಳು ಸಾಗಿ ಬರುತಿವೆ’? ಅಥವ ಹೀಗೆ
‘ಇಲ್ಲಿ ಈ ಜಾಗದಲ್ಲಿ ಕಾಣುತ್ತಿರುವ ಗುರುತು
ನನ್ನ ಕಂಬನಿ ಬಿದ್ದು ಇಂಕು ಕಲಸಿ ಹೋದದ್ದರ ಗುರುತು’?
ನೂರು ವರ್ಷದ ಹಿಂದೆ ಹೀಗೆ ಬರೆದು ‘ಅದರ ಸುತ್ತ
ಗುಂಡಗೆ ಗೆರೆ ಎಳೆದಿದ್ದೇನೆ’ ಅನ್ನುವ ಮಾತು ಸೇರಿಸುತ್ತಿದ್ದರು.
ಕಾಲ ಕಳೆಯುತ್ತಿದೆ… ಫೋನಿನಲ್ಲಿ ದೂರದವರು
ಅಳುತಲೋ ನಗುತಲೋ ಇರುವಂತೆ:
ಕೇಳಿಸುವುದು ಕಾಣಿಸುತ್ತಿಲ್ಲ,
ಕಾಣಿಸುತಿರುವುದೇನೂ ಕೇಳಿಸುತ್ತಿಲ್ಲ,
‘ಮುಂದಿನ ವರ್ಷ’ ಅಂದಾಗ, ‘ಹೋದ ತಿಂಗಳು’ ಅಂದಾಗ
ಮೈ ಮೇಲೆ ಎಚ್ಚೆರ ಇರುವುದಿಲ್ಲ.
ಒಡೆದ ಗಾಜಿನ ಚೂರುಗಳು ಈ ಮಾತುಗಳು
ಗಾಯ ಮಾಡಿ ರಕ್ತ ಹರಿಸುತ್ತವೆ.
ನೀನು ಸುಂದರಿ, ಪ್ರಾಚೀನ ಗ್ರಂಥದ ವ್ಯಾಖ್ಯಾನದಂತೆ.
ನಿಮ್ಮ ದೇಶದಲ್ಲಿ ಹೆಂಗಸರ ಸಂಖ್ಯೆ ಹೆಚ್ಚೆಂದು
ಇಲ್ಲಿಗೆ ಬಂದು ನನಗೆ ಸಿಕ್ಕಿದೆ.
ಈಗ ಬೇರೆ ಸ್ಟಾಟಿಸ್ಟಿಕ್ಸು ನಮ್ಮನ್ನು ದೂರ ಮಾಡಿದೆ.
ಬದುಕುವುದೆಂದರೆ ಹಡಗನ್ನೂ
ಬಂದರನ್ನೂ ಒಟ್ಟಿಗೆ ಕಟ್ಟುವ ಕೆಲಸ.
ಹಡಗು ಮುಳುಗಿಹೋದ ಮೇಲೂ
ಬಂದರನ್ನು ಪೂರ್‍ಣವಾಗಿಸುವ ಜವಾಬ್ದಾರಿ.
ಕೊನೆಯದಾಗಿ, ನನಗೆ ನೆನಪಿರುವುದು ಇಷ್ಟೆ :
ಮಂಜು ಕವಿದಿತ್ತು.
ಕೇವಲ ಕವಿದ ಮಂಜನ್ನಷ್ಟೆ
ನೆನಪಿಟ್ಟುಕೊಂಡಿರುವವರು….
ಏನನ್ನು ತಾನೇ ಜ್ಞಾಪಕ ಇಟ್ಟುಕೊಂಡಿರಲು ಸಾಧ್ಯ, ಹೇಳು?
*****
ಮೂಲ: ಯೆಹೂದಾ ಅಮಿಛಾಯ್

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...