Home / ಕವನ / ಅನುವಾದ / ಪತ್ರ

ಪತ್ರ

ಜೆರುಸಲೆಮ್ಮಿನ ಹೋಟೆಲಿನ ವೆರಾಂಡದಲ್ಲಿ ಕುಳಿತು
ಹೀಗೆ ಬರೆಯುವುದೇ ‘ಮರುಭೂಮಿಯಿಂದ ಸಾಗರದತ್ತ
ಸುಂದರ ದಿನಗಳು ಸಾಗಿ ಬರುತಿವೆ’? ಅಥವ ಹೀಗೆ
‘ಇಲ್ಲಿ ಈ ಜಾಗದಲ್ಲಿ ಕಾಣುತ್ತಿರುವ ಗುರುತು
ನನ್ನ ಕಂಬನಿ ಬಿದ್ದು ಇಂಕು ಕಲಸಿ ಹೋದದ್ದರ ಗುರುತು’?
ನೂರು ವರ್ಷದ ಹಿಂದೆ ಹೀಗೆ ಬರೆದು ‘ಅದರ ಸುತ್ತ
ಗುಂಡಗೆ ಗೆರೆ ಎಳೆದಿದ್ದೇನೆ’ ಅನ್ನುವ ಮಾತು ಸೇರಿಸುತ್ತಿದ್ದರು.
ಕಾಲ ಕಳೆಯುತ್ತಿದೆ… ಫೋನಿನಲ್ಲಿ ದೂರದವರು
ಅಳುತಲೋ ನಗುತಲೋ ಇರುವಂತೆ:
ಕೇಳಿಸುವುದು ಕಾಣಿಸುತ್ತಿಲ್ಲ,
ಕಾಣಿಸುತಿರುವುದೇನೂ ಕೇಳಿಸುತ್ತಿಲ್ಲ,
‘ಮುಂದಿನ ವರ್ಷ’ ಅಂದಾಗ, ‘ಹೋದ ತಿಂಗಳು’ ಅಂದಾಗ
ಮೈ ಮೇಲೆ ಎಚ್ಚೆರ ಇರುವುದಿಲ್ಲ.
ಒಡೆದ ಗಾಜಿನ ಚೂರುಗಳು ಈ ಮಾತುಗಳು
ಗಾಯ ಮಾಡಿ ರಕ್ತ ಹರಿಸುತ್ತವೆ.
ನೀನು ಸುಂದರಿ, ಪ್ರಾಚೀನ ಗ್ರಂಥದ ವ್ಯಾಖ್ಯಾನದಂತೆ.
ನಿಮ್ಮ ದೇಶದಲ್ಲಿ ಹೆಂಗಸರ ಸಂಖ್ಯೆ ಹೆಚ್ಚೆಂದು
ಇಲ್ಲಿಗೆ ಬಂದು ನನಗೆ ಸಿಕ್ಕಿದೆ.
ಈಗ ಬೇರೆ ಸ್ಟಾಟಿಸ್ಟಿಕ್ಸು ನಮ್ಮನ್ನು ದೂರ ಮಾಡಿದೆ.
ಬದುಕುವುದೆಂದರೆ ಹಡಗನ್ನೂ
ಬಂದರನ್ನೂ ಒಟ್ಟಿಗೆ ಕಟ್ಟುವ ಕೆಲಸ.
ಹಡಗು ಮುಳುಗಿಹೋದ ಮೇಲೂ
ಬಂದರನ್ನು ಪೂರ್‍ಣವಾಗಿಸುವ ಜವಾಬ್ದಾರಿ.
ಕೊನೆಯದಾಗಿ, ನನಗೆ ನೆನಪಿರುವುದು ಇಷ್ಟೆ :
ಮಂಜು ಕವಿದಿತ್ತು.
ಕೇವಲ ಕವಿದ ಮಂಜನ್ನಷ್ಟೆ
ನೆನಪಿಟ್ಟುಕೊಂಡಿರುವವರು….
ಏನನ್ನು ತಾನೇ ಜ್ಞಾಪಕ ಇಟ್ಟುಕೊಂಡಿರಲು ಸಾಧ್ಯ, ಹೇಳು?
*****
ಮೂಲ: ಯೆಹೂದಾ ಅಮಿಛಾಯ್

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...