ಮರೀನಾದಲ್ಲಿ ಕವಿ

ಮಸಾಲೆ ಕಡಲೆ ಜಗಿಯುತ್ತ
ಸೌತೆ ಚೂರು ಮೆಲ್ಲುತ್ತ
ಕಾಲೆಳೆಯುತ್ತ ಉಸುಕಿನಲ್ಲಿ
ಮೂರು ಸಂಜೆಯ ಬೆಳಕಿನಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ಉಪ್ಪಿನ ಹವೆಗೆ ಒಪ್ಪಿಸಿಕೊಂಡು
ಭಿಕ್ಷುಕರಿಂದ ತಪ್ಪಿಸಿಕೊಂಡು
ಕಡಲಿನ ರಾಗವ ಹಿಡಿಯುತ್ತ
ಬಡವರಿಗಾಗಿ ಮರುಗುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ತೆರೆಗಳು ಎಂದೂ ನಿಲ್ಲವು ಎಂದು
ಲೋಕದ ದಂಧೆ ನೀಗದು ಎಂದು
ಸುಸ್ತಾದಾಗ ಒರಗುತ್ತ
ನಕ್ಷತ್ರಗಳ ಎಣಿಸುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ಕಳಚಿದ ಚಪ್ಪಲಿ ಸಿಕ್ಕಿಸಿಕೊಂಡು
ಹತ್ತಿದ ಮಳಲನು ಜಾಡಿಸಿಕೊಂಡು
ಯಾವ ಯಾವದೋ ಕನಸಿನಲ್ಲಿ
ಅದೆಷ್ಟೋ ಮಂದಿಯ ಹೆಜ್ಜೆಯಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ
Next post ಹೇಂಟೆಯ ಕವಿತೆ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…