ಮರೀನಾದಲ್ಲಿ ಕವಿ

ಮಸಾಲೆ ಕಡಲೆ ಜಗಿಯುತ್ತ
ಸೌತೆ ಚೂರು ಮೆಲ್ಲುತ್ತ
ಕಾಲೆಳೆಯುತ್ತ ಉಸುಕಿನಲ್ಲಿ
ಮೂರು ಸಂಜೆಯ ಬೆಳಕಿನಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ಉಪ್ಪಿನ ಹವೆಗೆ ಒಪ್ಪಿಸಿಕೊಂಡು
ಭಿಕ್ಷುಕರಿಂದ ತಪ್ಪಿಸಿಕೊಂಡು
ಕಡಲಿನ ರಾಗವ ಹಿಡಿಯುತ್ತ
ಬಡವರಿಗಾಗಿ ಮರುಗುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ತೆರೆಗಳು ಎಂದೂ ನಿಲ್ಲವು ಎಂದು
ಲೋಕದ ದಂಧೆ ನೀಗದು ಎಂದು
ಸುಸ್ತಾದಾಗ ಒರಗುತ್ತ
ನಕ್ಷತ್ರಗಳ ಎಣಿಸುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ಕಳಚಿದ ಚಪ್ಪಲಿ ಸಿಕ್ಕಿಸಿಕೊಂಡು
ಹತ್ತಿದ ಮಳಲನು ಜಾಡಿಸಿಕೊಂಡು
ಯಾವ ಯಾವದೋ ಕನಸಿನಲ್ಲಿ
ಅದೆಷ್ಟೋ ಮಂದಿಯ ಹೆಜ್ಜೆಯಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ
Next post ಹೇಂಟೆಯ ಕವಿತೆ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…