ಮರೀನಾದಲ್ಲಿ ಕವಿ

ಮಸಾಲೆ ಕಡಲೆ ಜಗಿಯುತ್ತ
ಸೌತೆ ಚೂರು ಮೆಲ್ಲುತ್ತ
ಕಾಲೆಳೆಯುತ್ತ ಉಸುಕಿನಲ್ಲಿ
ಮೂರು ಸಂಜೆಯ ಬೆಳಕಿನಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ಉಪ್ಪಿನ ಹವೆಗೆ ಒಪ್ಪಿಸಿಕೊಂಡು
ಭಿಕ್ಷುಕರಿಂದ ತಪ್ಪಿಸಿಕೊಂಡು
ಕಡಲಿನ ರಾಗವ ಹಿಡಿಯುತ್ತ
ಬಡವರಿಗಾಗಿ ಮರುಗುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ತೆರೆಗಳು ಎಂದೂ ನಿಲ್ಲವು ಎಂದು
ಲೋಕದ ದಂಧೆ ನೀಗದು ಎಂದು
ಸುಸ್ತಾದಾಗ ಒರಗುತ್ತ
ನಕ್ಷತ್ರಗಳ ಎಣಿಸುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ

ಕಳಚಿದ ಚಪ್ಪಲಿ ಸಿಕ್ಕಿಸಿಕೊಂಡು
ಹತ್ತಿದ ಮಳಲನು ಜಾಡಿಸಿಕೊಂಡು
ಯಾವ ಯಾವದೋ ಕನಸಿನಲ್ಲಿ
ಅದೆಷ್ಟೋ ಮಂದಿಯ ಹೆಜ್ಜೆಯಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ
Next post ಹೇಂಟೆಯ ಕವಿತೆ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…