ಮೌನ ರೋದನ

ಬೇಯುತಿದೆ ಮಾತಿಯೊಡಲು
ಸುಡುವ ಕಿಚ್ಚಿನೊಳಗೆ
ಮೌನ ಚಿಪ್ಪಿನಂತೆ
ಪ್ರತಿಭಟನೆಯ ಸೋಲಿಲ್ಲ

ಮರದಿಂದ ಮರಕ್ಕೆ ಹಾರುವ
ಮರ್ಕಟನ ತೆರೆದಿ
ಪಕ್ಷದಿಂದ ಪಕ್ಷಕ್ಕೆ
ಖಾದಿಗಳ ಹಾರಾಟ
ಸನ್ನಿವೇಶಕ್ಕೆ ತಕ್ಕಂತೆ
ಬದಲಾದ ಊರಸರವಳ್ಳಿಗಳ ವೇಷ
ಬಾಂಧವ್ಯ ಬೆಸೆಯುವಲ್ಲಿ
ಕಾಣುವುದು ಮೀನಮೇಷ

ಮಂಗನ ಕೈಯ ಮಾಣಿಕ್ಯದಂತೆ
ಮೌಲ್ಯ ರಹಿತವಿಂದು
ಸನಾತನ ಭಾರತ
ವೇದಾಂತ ಸಿರಿಯ ಹೊಂಬೆಳಕು
ಮಸುಕಾಗಿ ವಿಜ್ರಂಭಿಸಿದೆ
ನೀಲಿಚಿತ್ರಗಳ ಕರಿ ಬೆಳಕು

ಹಣಕ್ಕಾಗಿ ಉರುಳಿದ ಹೆಣ
ಧನದ ಮುಂದೆ ದೀನರಾದ ಜನ
ರಾಜಕೀಯ ಡೊಂಬರಾಟ
ಪಾಶವೀಕೃತ್ಯಗಳ ಕೂಟ
ಸನಾತನ ಧರ್ಮದ ಒಡಲು
ಇಂದು ದುರ್ನಾತ ಬೀರುವ ಕಡಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಕ್ಕಳಿಸಿ ಅಳದಿರಲಿ…. ಪ್ರೀತಿ
Next post ಕಪ್ಪು ಬಿಳುಪು

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys