ಮೌನ ರೋದನ

ಬೇಯುತಿದೆ ಮಾತಿಯೊಡಲು
ಸುಡುವ ಕಿಚ್ಚಿನೊಳಗೆ
ಮೌನ ಚಿಪ್ಪಿನಂತೆ
ಪ್ರತಿಭಟನೆಯ ಸೋಲಿಲ್ಲ

ಮರದಿಂದ ಮರಕ್ಕೆ ಹಾರುವ
ಮರ್ಕಟನ ತೆರೆದಿ
ಪಕ್ಷದಿಂದ ಪಕ್ಷಕ್ಕೆ
ಖಾದಿಗಳ ಹಾರಾಟ
ಸನ್ನಿವೇಶಕ್ಕೆ ತಕ್ಕಂತೆ
ಬದಲಾದ ಊರಸರವಳ್ಳಿಗಳ ವೇಷ
ಬಾಂಧವ್ಯ ಬೆಸೆಯುವಲ್ಲಿ
ಕಾಣುವುದು ಮೀನಮೇಷ

ಮಂಗನ ಕೈಯ ಮಾಣಿಕ್ಯದಂತೆ
ಮೌಲ್ಯ ರಹಿತವಿಂದು
ಸನಾತನ ಭಾರತ
ವೇದಾಂತ ಸಿರಿಯ ಹೊಂಬೆಳಕು
ಮಸುಕಾಗಿ ವಿಜ್ರಂಭಿಸಿದೆ
ನೀಲಿಚಿತ್ರಗಳ ಕರಿ ಬೆಳಕು

ಹಣಕ್ಕಾಗಿ ಉರುಳಿದ ಹೆಣ
ಧನದ ಮುಂದೆ ದೀನರಾದ ಜನ
ರಾಜಕೀಯ ಡೊಂಬರಾಟ
ಪಾಶವೀಕೃತ್ಯಗಳ ಕೂಟ
ಸನಾತನ ಧರ್ಮದ ಒಡಲು
ಇಂದು ದುರ್ನಾತ ಬೀರುವ ಕಡಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಕ್ಕಳಿಸಿ ಅಳದಿರಲಿ…. ಪ್ರೀತಿ
Next post ಕಪ್ಪು ಬಿಳುಪು

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…