ಬೇಯುತಿದೆ ಮಾತಿಯೊಡಲು
ಸುಡುವ ಕಿಚ್ಚಿನೊಳಗೆ
ಮೌನ ಚಿಪ್ಪಿನಂತೆ
ಪ್ರತಿಭಟನೆಯ ಸೋಲಿಲ್ಲ
ಮರದಿಂದ ಮರಕ್ಕೆ ಹಾರುವ
ಮರ್ಕಟನ ತೆರೆದಿ
ಪಕ್ಷದಿಂದ ಪಕ್ಷಕ್ಕೆ
ಖಾದಿಗಳ ಹಾರಾಟ
ಸನ್ನಿವೇಶಕ್ಕೆ ತಕ್ಕಂತೆ
ಬದಲಾದ ಊರಸರವಳ್ಳಿಗಳ ವೇಷ
ಬಾಂಧವ್ಯ ಬೆಸೆಯುವಲ್ಲಿ
ಕಾಣುವುದು ಮೀನಮೇಷ
ಮಂಗನ ಕೈಯ ಮಾಣಿಕ್ಯದಂತೆ
ಮೌಲ್ಯ ರಹಿತವಿಂದು
ಸನಾತನ ಭಾರತ
ವೇದಾಂತ ಸಿರಿಯ ಹೊಂಬೆಳಕು
ಮಸುಕಾಗಿ ವಿಜ್ರಂಭಿಸಿದೆ
ನೀಲಿಚಿತ್ರಗಳ ಕರಿ ಬೆಳಕು
ಹಣಕ್ಕಾಗಿ ಉರುಳಿದ ಹೆಣ
ಧನದ ಮುಂದೆ ದೀನರಾದ ಜನ
ರಾಜಕೀಯ ಡೊಂಬರಾಟ
ಪಾಶವೀಕೃತ್ಯಗಳ ಕೂಟ
ಸನಾತನ ಧರ್ಮದ ಒಡಲು
ಇಂದು ದುರ್ನಾತ ಬೀರುವ ಕಡಲು
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.