ಗೂಳಿ ಬಿದ್ದುದ ಕಂಡು ಗುಮ್ಮಗಾದೆ

ಏಳು ಕುದುರಿಯ ಗಾಡಿ ಭಾಳ ಹುರುಪಿಲೆ ಏರಿ
ಗಾಲಿ ಮುರಿದುದ ಕಂಡು ಗಾಬರ್‍ಯಾದೆ
ಬೀಳಲಾರದ ಜನ್ಮ ಆಳಕೊಳ್ಳಕ್ಕೆ ಬಿದ್ದು
ಗೂಳಿಬಿದ್ದುದ ಕಂಡು ಗುಮ್ಮಗಾದೆ

ಕತ್ತಲೆಯ ದರ್‍ಯಾಗ ಕೈಕಾಲು ಮುರಿದಾಗ
ಎತ್ತಯ್ಯ ಮೇಲೆತ್ತು ಪ್ರೀತಿ ತಂದೆ
ಕುಂಟೆತ್ತು ತುಂಟೆತ್ತು ಗುಳ್ಳಾಗಗೊಡದಂತೆ
ಸದೆಬಡೆದು ಸುದ್ದಾಗಿ ತಿದ್ದು ತಂದೆ

ಈ ನಾಯಿ ಆ ನಾಯಿ ಊರನಾಯಿಯು ಕೂಡಿ
ಕೂಗ್ಯಾವು ಹಾಡ್ಯಾವು ನಾಡಿನೊಳಗೆ
ತಂಗಾಳಿ ಅತ್ತಾವು ಸುಳಿಗಾಳಿ ಸತ್ತಾವು
ಬಿರುಗಾಳಿ ಧೂಳ್ಗಾಳಿ ದೆವ್ವಗಳಿಗೆ

ಪುಸ್ತಕದ ಈಜ್ಞಾನ ಮಸ್ತಕಕೆ ಏರಿತ್ತು
ಪುಸ್ತಕದ ಹುಳುವಾಗಿ ಹೋದೆನಯ್ಯ
ಶಿವನ ಸುಂದರ ಜ್ಞಾನ ವಿಪುಲ ಅಮೃತಪಾನ
ಕುನ್ನಿಯಲಿ ನನ್ನಿಯನು ಬಿತ್ತಿತಯ್ಯ

ಎದಿಯಾಗ ಶಿವತಂದಿ ಮನದಾಗ ಶಿವತಂದಿ
ಕಣಕಣದಿ ಶಿವತಂದಿ ತುಂಬಿಬರಲಿ
ಕುಂತಾಗ ನಿಂತಾಗ ನಡೆದಾಗ ನುಡಿದಾಗ
ಕಡೆತನಕ ಶಿವತಂದಿ ತೀಡಿಬರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು
Next post ಕದ ಬಾಗಿಲಲ್ಲಿಲ್ಲ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys