ಮರ್ಮ

ಅದೊಂದು ಮರ ಬೃಹದಾಕಾರ
ರೆಂಬೆ-ಕೊಂಬೆಗಳಿಂದ
ಸೊಂಪಾಗಿ,
ಬೇರುಗಳ ಜೊತೆ ಬೀಳಲುಗಳು
ನೆಲ ತಬ್ಬಿ,
ಎಲೆ ಕಾಯಿ ಹಣ್ಣು
ಸಮೃದ್ಧ ತುಳುಕಾಡಿ
ಆತಿಥ್ಯಕ್ಕೆ ಎತ್ತಿದ ಕೈ
ಆಶ್ರಯಿಸಿ ಬಂದರೆ
ಬುಡಕೆ ಆಧರಿಸಿ
ನೆರಳು ನೀಡುವುದು ಮುದದಿಂದ.
ಅದಕ್ಕೆ ಮರದ ಕೊಂಬೆಗಳಲ್ಲಿ
ಪೊಟರೆಗಳಲ್ಲಿ
ಚಿಲಿಪಿಲಿ, ಕಚಪಿಚ ಸರ್ವಕಾಲಕ್ಕೂ
ಆದರೆ,
ಮರದ ಬುಡದಿ ಬೆಳೆಯ ಹೊರಟರೆ
ಚಿಗುರು ಗಿಡವಾಗಿ
ಸಹಿಸಲಾಗದು ಅದಕ್ಕೆ
ಮಣ್ಣ ಸತ್ವವನ್ನೆಲ್ಲಾ
ತನ್ನ ಕಬಂಧ ಬಾಹುಗಳಲಿ
ಹೀರಿ ಬಿಟ್ಟುಬಿಡದೆ
ಪೀಚಲಾಗಿಸುವುದು
ಮರಿಗಿಡವ-ಮದದಿಂದ
ಅರಿಯಬೇಕಿದೆ ಈ ಒಳ ಮರ್ಮ
ದೊಡ್ಡ ದೊಡ್ಡ ಮರಗಳ ಧರ್ಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಸ್ತೆ ಹೋಗುವುದೆಲ್ಲಿಗೆ?
Next post ಕುಂಬಳೆ ಕೋಟೆ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys