ಸತ್ಯನಾರಾಯಣ

ಸತ್ಯನಾರಾಯಣ ನಿತ್ಯಪಾರಾಯಣ
ಇತ್ತ ಬಾರೈ ಸ್ವಾಮಿ ನನ ಮನೆಗೆ
ಚಿತ್ತಯಿಸು ಎನ್ನ ಪ್ರಾರ್ಥನೆ ಎಲ್ಲವ
ವಿಸ್ತರಿಸುವೆ ನಿನ್ನ ಇದಿರೊಳಗೆ

ಶ್ರುತಿಯೊಳು ಯಾಮ ಯಾಮದಿ ನಿನ್ನ ಕಥೆಗಳ
ಕೇಳಿಹೆನುದ್ಭುತ ಚರಿತೆಗಳ
ವ್ರತವನ್ನು ಮಾಡುವೆ ಶಕ್ತ್ಯನುಸಾರದಿ
ಪರಿಹರಿಸೋ ಎನ್ನ ದುರಿತಗಳ

ನಾನಾವ ಬಗೆಯೊಳು ಪೂಜೆಯ ಮಾಡಲಿ
ಏನೇನ ಕಾಣಿಕೆಯರ್ಪಿಸಲಿ
ನೀನಿಲ್ಲದೊಸ್ತುವೆ ಕಾಣದು ಧರೆಯೊಳು
ತುಂಬಿರುವೇ ಅಣು ಘನಗಳೊಳು

ಧೂಪ ದೀಪ ಪುಷ್ಪ ನೈವೇದ್ಯದೊಳಗೆಲ್ಲ
ಅಪಾರ ಮಹಿಮನೆ ಅಡಗಿರುವೆ
ತಾಪಸೋತ್ತಮ ನಿನ್ ಪೂಜೆಯನರಿಯೆನು
ಶ್ರೀಪತಿ ನಿನಗೊಮ್ಮೆ ಕರಮುಗಿವೆ

ಸಾತ್ವಿಕ ಗುಣಗಳು ಚಲಿಸದ ಕಾಂತಿಯು
ನಿತ್ಯ ನಿರ್ಮಲ ಮನ ಶುದ್ಧಿಗಳು
ಭಕ್ತಿಯು ನಿನ್ನೊಳು ಸಮನತೆ ಜನರೊಳು
ಪುಟ್ಟಿಸು ಜನಕಜೆ ಹೃದಯದೊಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಬಳೆಯ ನಿಲ್ದಾಣ
Next post ಟೊಳ್ಳುಗಟ್ಟಿ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…