ಸತ್ಯನಾರಾಯಣ

ಸತ್ಯನಾರಾಯಣ ನಿತ್ಯಪಾರಾಯಣ
ಇತ್ತ ಬಾರೈ ಸ್ವಾಮಿ ನನ ಮನೆಗೆ
ಚಿತ್ತಯಿಸು ಎನ್ನ ಪ್ರಾರ್ಥನೆ ಎಲ್ಲವ
ವಿಸ್ತರಿಸುವೆ ನಿನ್ನ ಇದಿರೊಳಗೆ

ಶ್ರುತಿಯೊಳು ಯಾಮ ಯಾಮದಿ ನಿನ್ನ ಕಥೆಗಳ
ಕೇಳಿಹೆನುದ್ಭುತ ಚರಿತೆಗಳ
ವ್ರತವನ್ನು ಮಾಡುವೆ ಶಕ್ತ್ಯನುಸಾರದಿ
ಪರಿಹರಿಸೋ ಎನ್ನ ದುರಿತಗಳ

ನಾನಾವ ಬಗೆಯೊಳು ಪೂಜೆಯ ಮಾಡಲಿ
ಏನೇನ ಕಾಣಿಕೆಯರ್ಪಿಸಲಿ
ನೀನಿಲ್ಲದೊಸ್ತುವೆ ಕಾಣದು ಧರೆಯೊಳು
ತುಂಬಿರುವೇ ಅಣು ಘನಗಳೊಳು

ಧೂಪ ದೀಪ ಪುಷ್ಪ ನೈವೇದ್ಯದೊಳಗೆಲ್ಲ
ಅಪಾರ ಮಹಿಮನೆ ಅಡಗಿರುವೆ
ತಾಪಸೋತ್ತಮ ನಿನ್ ಪೂಜೆಯನರಿಯೆನು
ಶ್ರೀಪತಿ ನಿನಗೊಮ್ಮೆ ಕರಮುಗಿವೆ

ಸಾತ್ವಿಕ ಗುಣಗಳು ಚಲಿಸದ ಕಾಂತಿಯು
ನಿತ್ಯ ನಿರ್ಮಲ ಮನ ಶುದ್ಧಿಗಳು
ಭಕ್ತಿಯು ನಿನ್ನೊಳು ಸಮನತೆ ಜನರೊಳು
ಪುಟ್ಟಿಸು ಜನಕಜೆ ಹೃದಯದೊಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಬಳೆಯ ನಿಲ್ದಾಣ
Next post ಟೊಳ್ಳುಗಟ್ಟಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…