Home / ಕವನ / ಕವಿತೆ / ಕುಂಬಳೆಯ ನಿಲ್ದಾಣ

ಕುಂಬಳೆಯ ನಿಲ್ದಾಣ

ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ದದೇನಲ್ಲ
ಮದರಾಸು ಮೈಲು ಜಯಂತಿ ಜನತಾ ಅಲ್ಲಿ ನಿಲ್ಲುವು-
ದಿಲ್ಲ. ಇತರ ಗಾಡಿಗಳು ತುಸು ಹೊತ್ತು ತಂಗುವುವು
ಜನ ಇಳಿಯುವರು ಹತ್ತುವರು ಎಲ್ಲಿಂದೆಲ್ಲಿಗೊ
ಹೋಗುವರು ಕಣ್ಣು ತೆರೆಯುವುದರೊಳಗೆ

ಐನೂರು ವರ್ಷದ ಆಲದ ಮರಗಳಿವೆ ಅಲ್ಲಿ
ಬಿಳಲುಗಳು ಬೆಳೆದು ಬೇರುಗಳಾಗಿವೆ ಅವುಗಳ
ನೆರಳಲ್ಲಿ ದನಗಳು ಮಲಗಿ ಮೆಲಕುಹಾಕುತ್ತವೆ
ಪ್ರಯಾಣಿಕರು ಕುಳಿತು ಗಾಡಿಗೆ ಕಾಯುತ್ತಾರೆ
ಮೇಲೆ ಹಕ್ಕಿಗಳು ಹಣ್ಣುಗಳನ್ನು ಹೆಕ್ಕುತ್ತವೆ-ಆಚೆ
ಅರಬೀಸಮುದ್ರ ಬಿದ್ದು ಹೊರಳುತ್ತದೆ

ಊರಿಗೆ ಹೊಸಬನಂತಿರುವ ಯಾತ್ರಿಕನೆ!
ಎಲ್ಲಿಂದ ಬಂದಿಳಿದೆ ನೀನು ಇಂಥ ಹೊತ್ತಿನಲ್ಲಿ
ಎತ್ತ ಹೋಗುವವ ಯಾರಲ್ಲಿ ಕೆಲಸ? ಅಹಾ!
ಅಲ್ಲಿ ಬಚ್ಚಂಗಾಯಿ ಕೊರೆದಿಟ್ಟು ಗಿರಾಕಿಗಳ
ಕಾಯುವ ಮುದುಕನ ಬಳಿ ಸಾಗು!
ಅವನಿಗೆಲ್ಲವೂ ಗೊತ್ತು ಐನೂರು ವರ್ಷಗಳಿಂದ
ಹೀಗೆ ಕಾಯುತ್ತ ಕುಳಿತಿದ್ದಾನೆ! ಅವನ ಕಣ್ಣುಗಳಲ್ಲಿ
ಕಣ್ಣಿಟ್ಟು ನೋಡಿದರೆ ಎಲ್ಲ ಕಾಣಿಸುವುದು!
ಊರು ಮನೆ ಮಠ ಬಿಸಿಲು ಮಳೆಗಾಳಿ
ಮಾಗಿಯ ಚಳಿ ಊರದೇವರ ತೇರು ಯಾರಿಗೂ
ಹೇಳದೆ ಓಡಿಹೋದ ಜೋಡಿ ಕಾರಣವಿರದೆ
ಮಾಡಿದ ಆತ್ಮಹತ್ಯೆ ಎಷ್ಟು ಗಾಲಿಗಳು ಉರುಳಿ
ಹೋದುವು ಎಷ್ಟೊಂದು ಸರ್ತಿ ಎಷ್ಟು ಬೆಂಕಿಯ
ಕಣಗಳು ಸಿಡಿದುವು ಇವನ ಕಣ್ಣುಗಳಲ್ಲಿ!

ಅದೊ ಅದೋ ಸಮೀಪಿಸುವ ಅದೆಂಥ ಸದ್ದು ?
ಇನ್ನೊಂದು ಲೋಕದಿಂದೆದ್ದು ಬಂದಂತಿದೆ!
ಭೀತನಾಗದಿರು! ಅದು ಇನ್ನೊಂದು ಗಾಡಿ
ತುಸು ಹೊತ್ತು, ನಿಂತು ಹೋಗುವುದು, ಆಮೇಲೆ
ಎಲ್ಲ ಮೊದಲಿನಂತಾಗುವುದು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...