ಕುಂಬಳೆಯ ನಿಲ್ದಾಣ

ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ದದೇನಲ್ಲ
ಮದರಾಸು ಮೈಲು ಜಯಂತಿ ಜನತಾ ಅಲ್ಲಿ ನಿಲ್ಲುವು-
ದಿಲ್ಲ. ಇತರ ಗಾಡಿಗಳು ತುಸು ಹೊತ್ತು ತಂಗುವುವು
ಜನ ಇಳಿಯುವರು ಹತ್ತುವರು ಎಲ್ಲಿಂದೆಲ್ಲಿಗೊ
ಹೋಗುವರು ಕಣ್ಣು ತೆರೆಯುವುದರೊಳಗೆ

ಐನೂರು ವರ್ಷದ ಆಲದ ಮರಗಳಿವೆ ಅಲ್ಲಿ
ಬಿಳಲುಗಳು ಬೆಳೆದು ಬೇರುಗಳಾಗಿವೆ ಅವುಗಳ
ನೆರಳಲ್ಲಿ ದನಗಳು ಮಲಗಿ ಮೆಲಕುಹಾಕುತ್ತವೆ
ಪ್ರಯಾಣಿಕರು ಕುಳಿತು ಗಾಡಿಗೆ ಕಾಯುತ್ತಾರೆ
ಮೇಲೆ ಹಕ್ಕಿಗಳು ಹಣ್ಣುಗಳನ್ನು ಹೆಕ್ಕುತ್ತವೆ-ಆಚೆ
ಅರಬೀಸಮುದ್ರ ಬಿದ್ದು ಹೊರಳುತ್ತದೆ

ಊರಿಗೆ ಹೊಸಬನಂತಿರುವ ಯಾತ್ರಿಕನೆ!
ಎಲ್ಲಿಂದ ಬಂದಿಳಿದೆ ನೀನು ಇಂಥ ಹೊತ್ತಿನಲ್ಲಿ
ಎತ್ತ ಹೋಗುವವ ಯಾರಲ್ಲಿ ಕೆಲಸ? ಅಹಾ!
ಅಲ್ಲಿ ಬಚ್ಚಂಗಾಯಿ ಕೊರೆದಿಟ್ಟು ಗಿರಾಕಿಗಳ
ಕಾಯುವ ಮುದುಕನ ಬಳಿ ಸಾಗು!
ಅವನಿಗೆಲ್ಲವೂ ಗೊತ್ತು ಐನೂರು ವರ್ಷಗಳಿಂದ
ಹೀಗೆ ಕಾಯುತ್ತ ಕುಳಿತಿದ್ದಾನೆ! ಅವನ ಕಣ್ಣುಗಳಲ್ಲಿ
ಕಣ್ಣಿಟ್ಟು ನೋಡಿದರೆ ಎಲ್ಲ ಕಾಣಿಸುವುದು!
ಊರು ಮನೆ ಮಠ ಬಿಸಿಲು ಮಳೆಗಾಳಿ
ಮಾಗಿಯ ಚಳಿ ಊರದೇವರ ತೇರು ಯಾರಿಗೂ
ಹೇಳದೆ ಓಡಿಹೋದ ಜೋಡಿ ಕಾರಣವಿರದೆ
ಮಾಡಿದ ಆತ್ಮಹತ್ಯೆ ಎಷ್ಟು ಗಾಲಿಗಳು ಉರುಳಿ
ಹೋದುವು ಎಷ್ಟೊಂದು ಸರ್ತಿ ಎಷ್ಟು ಬೆಂಕಿಯ
ಕಣಗಳು ಸಿಡಿದುವು ಇವನ ಕಣ್ಣುಗಳಲ್ಲಿ!

ಅದೊ ಅದೋ ಸಮೀಪಿಸುವ ಅದೆಂಥ ಸದ್ದು ?
ಇನ್ನೊಂದು ಲೋಕದಿಂದೆದ್ದು ಬಂದಂತಿದೆ!
ಭೀತನಾಗದಿರು! ಅದು ಇನ್ನೊಂದು ಗಾಡಿ
ತುಸು ಹೊತ್ತು, ನಿಂತು ಹೋಗುವುದು, ಆಮೇಲೆ
ಎಲ್ಲ ಮೊದಲಿನಂತಾಗುವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನ್ನೆಗಳ ಗಂಟು
Next post ಸತ್ಯನಾರಾಯಣ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys