ಮೌನ

ಇಲ್ಲಿಯ ತನಕಾ ಬಂದಿಹೆನು
ಸುಳಿವೇ ಕಾಣದೆ ನಿಂದಿಹೆನು
ತೋರದೆ ಮೌನವ ಧರಿಸಿಹೆನು
ಮೀರಿತು ಸಹನದ ಗುಣವಿನ್ನು

ನಿನ್ನನು ಕಲೆಯಲು ಕಾದಿಹೆನು
ಒಳ ಒಳಗಿದ್ದೂ ಮರೆ ಏನು
ಆರಿಸು ಬರುತಿಹ ತೆರೆಗಳನು
ಸೇರಿಸು ಗಮ್ಯಸ್ಥಾನವನು

ಮತಗಳ ಬೀಜವ ನಾಟಿರುವೆ
ಭಿನ್ನವ ಭೇದವ ಸೃಜಿಸಿರುವೆ
ತ್ರಿಗುಣಾತೀತನು ಎನಿಸಿರುವೆ
ನೀನೇ ನಾನು ಎನುತಿರುವೆ

ನೀನು ಎನ್ನುವ ಪದವೇಕೆ?
ಸರ್ವಾವಸ್ಥೆಯ ಸ್ಥಿತಿ ಏಕೆ?
ಸಿಹಿಯೊಳು ಕಹಿಯನು ತರಲೇಕೆ?
ಏತಕೊ ಅರಿಯನು ಈ ಬಯಕೆ!

ಸಗುಣ ನಿರ್ಗುಣ ಭೇದಗಳು
ನಿಲುಕದ ಗಹನದ ಭಾವಗಳು
ಮಥನಕೆ ಮೀರಿದ ವಿಷಯಗಳು
ಏನಿವು ಅದ್ಭುತ ಮಹಿಮೆಗಳು?

ತುಂಬಿಹೆ ನನ್ನಯ ಒಳ ಹೊರಗೆ
ಕಂಡೂ ಕಾಣದೆ ಇಹುದೆನಗೆ
ಶೋಭಿಸು ಥಟ್ಟನೆ ಕಂಗಳಿಗೆ
ತೋರಿಸು ನಿಜವನು ಜನಕಜೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿಯ ತಣ್ಣನೆ ತೋಳಿನಲಿ
Next post ಎಲ್ಲಿರುವಿಯೋ !

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys