Home / ಕವನ / ಕವಿತೆ / ಎಲ್ಲಿರುವಿಯೋ !

ಎಲ್ಲಿರುವಿಯೋ !

ರಾಮ ರಹಿಮ ಕ್ರಿಸ್ತ ಬುದ್ಧರನು ಹುಟ್ಟಿಸಿ
ಚದುರಂಗ ಪಟದ ನಾಲ್ಕೂ ದಿಕ್ಕಿಗೆ ಇಟ್ಟು
ಧರ್ಮಗಳ ದಾಳ ಎಸೆಯುತ್ತಾ
ದಾಳಿ ಪ್ರತಿದಾಳಿ ಕೊಲೆ ಸುಲಿಗೆ
ಜನ ಸಾಮಾನ್ಯರ, ಸೈನಿಕರ, ದುರಂತನೋಡುತಿರುವ
ದೇವದೇವಾ ಸೃಷ್ಟಿಕರ್ತಾ ಎಲ್ಲಿರುವಿಯೋ!

ಗುಜರಾತ್ ತಾಲಿಬಾನ್ ಇಸ್ರೇಲ್ ಪ್ಯಾಲಸ್ಟೇನ್‌ಗಳಲಿ
ನೋವು ದುಃಖ ದುಮ್ಮಾನಗಳ ಸಾಲು-
ಹಾಡೇ ಹಗಲಿಗೆ ಹೆದರಿ
ಹೆಣ್ಣುಗಳು ಗುಬ್ಬಚ್ಚಿಯಾಗುವದು
ಕ್ರೂರಿಗಳು ಅರ್ಭಟಿಸಿ ಮನೆ ದೇಶಗಳಿಗೆ
ಕೊಳ್ಳಿ ಇಡುವದನು ನೋಡುತ
ಕಲ್ಲಿನಂತೆ ಕುಳಿತ ಸೃಷ್ಟಿಕರ್ತ ಎಲ್ಲಿರುವಿಯೋ!

ಆದರೂ ನಿನಗಾಗಿ ಮಂದಿರಕಟ್ಟಲು
ಮಸೀದಿ ಕಟ್ಟಲು ಚರ್ಚುಕಟ್ಟಲು
ನೆತ್ತರುಹರಿಸಿ ಸಜ್ಜಾಗುವ ಭಕ್ತರೂ ಇರುವ
ಹುಚ್ಚರೂ ಪ್ರಾರ್ಥಿಸಿ ಉಪಾಸಿಸಿ
ಮೂರ್ಛೆ ಬೀಳುವ ಉಸಿರುಗಳನು ಕೇಳಿಸಿಕೊಳ್ಳುತ
ಕಿವುಡು ಮೂಕ ಕುರುಡರಂತಿರುವ
ಅಜ್ಞಾತವಾಸಿ ಸೃಷ್ಟಿಕರ್ತಾ ಎಲ್ಲಿರುವಿಯೋ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...