ರಾತ್ರಿಯ ತಣ್ಣನೆ ತೋಳಿನಲಿ

ರಾತ್ರಿಯ ತಣ್ಣನೆ ತೋಳಿನಲಿ
ಮಲಗಿರೆ ಲೋಕವೆ ಮೌನದಲಿ
ಯಾರೋ ಬಂದು, ಹೊಸಿಲಲಿ ನಿಂದು
ಸಣ್ಣಗೆ ಕೊಳಲಿನ ದನಿಯಲ್ಲಿ
ಕರೆದರಂತಲ್ಲೆ ಹೆಸರನ್ನು
ಕರೆದವರಾರೇ ನನ್ನನ್ನು?

ಬೇಗೆಗಳೆಲ್ಲಾ ಆರಿರಲು
ಗಾಳಿಯು ಒಯ್ಯನೆ ಸಾಗಿರಲು
ಒಳಗೂ ಹೊರಗೂ ಹುಣ್ಣಿಮೆ ಚಂದಿರ
ತಣ್ಣನೆ ಹಾಲನು ತುಳುಕಿರಲು
ಕರೆದರಂತಲ್ಲೆ ಹೆಸರನ್ನು
ಕರೆದವರಾರೇ ನನ್ನನ್ನು?

ಮರಗಳ ಎಲೆಗಳ ಗೂಡಿನಲಿ
ಮೆಚ್ಚಿನ ಬೆಚ್ಚನೆ ಮಾಡಿನಲಿ
ರೆಕ್ಕೆಯ ಹೊಚ್ಚಿ, ಮರಿಗಳ ಮುಚ್ಚಿ
ಮಲಗಿರೆ ಹಕ್ಕಿ ಪ್ರೀತಿಯಲಿ
ಕರೆದರಂತಲ್ಲೆ ಹೆಸರನ್ನು
ಕರೆದವರಾರೇ ನನ್ನನ್ನು?

ಹೇಗೆ ಇದ್ದರೇ, ಎಲ್ಲಿ ಹೋದರೇ?
ಕಂಡರೆ ಹೇಳಿ ಗುರುತನ್ನು
ನಿದ್ದೆಯ ತೊರೆದು ಕಾಯುತ್ತಿರುವೆ
ಎಂಥ ಹೊತ್ತಿನಲು ಅವರನ್ನು
ಕರೆದವರಾರೇ ನನ್ನನ್ನು?
ಕರೆದರೆ ನಿಲ್ಲೆನು ನಾ ಇನ್ನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೧೯
Next post ಮೌನ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…