Home / ಕವನ / ಕವಿತೆ / ಸ್ಥಿತ್ಯಂತರ

ಸ್ಥಿತ್ಯಂತರ

ಸದಾ ಕಿಚಿಪಿಚಿಗುಡುವ
ಗೊಂದಲದ ಗುಬ್ಬಿ ಗೂಡು
ಕೇಳುವುದಿಲ್ಲ ಒಂದಾದರೂ
ಸುಮಧುರ ಹಾಡು

ಬಿಡುವಿಲ್ಲದೇ ತುಯ್ಯುವ ಒಂದು ವೀಣೆ
ನಿರಂತರ ಕಾಡುವುದೇಕೋ ಕಾಣೆ!
ಮಧ್ಯಂತರದಲಿ ನಿಂತ
ನಾನು-ನನ್ನಂತವರು
ದವಡೆಯ ಕೊನೆಯ ಹಲ್ಲುಗಳನ್ನು
ಅರ್ಧವಷ್ಟೇ ಕಂಡವರು.

ಹಳತು ಸರಿಯೋ?
ಹೊಸದು ಸರಿಯೋ?
ಸದಾ ಮಂಥನದ ಚಿಂತನ
ಹಳವಂಡಗಳ ಸೃಷ್ಟಿಸಿ
ನವ ಸೃಷ್ಟಿಕರ್ತರ ಜನನ.
ಎಲ್ಲ ಕಾಲಕ್ಕೂ ಮಿಡಿಯುತ್ತಿದ್ದ ತಾಯಿಬೇರು
ಇತ್ತೀಚೆಗೆ ಒಮ್ಮೊಮ್ಮೆ ಮಾತ್ರ
ಎಲ್ಲೋ ಮಿಸುಕು
ಮುಂದಿನವರಿಗೆ ಅದೂ ಇಲ್ಲವೇನೋ?
ಸಧ್ಯ ನಮ್ಮಂತೆ
ದ್ವಂದ್ವದಲಿ ಸುಯ್ಯಬೇಕಿಲ್ಲ!

ಅದೂ ಬೇಕು, ಇದೂ ಬೇಕು
ಎಲ್ಲವೂ ಬೇಕು ಎನ್ನುವಂತಿಲ್ಲ
ಇಲ್ಲಿ ಆಯ್ಕೆಗಿರುವುದೊಂದೇ ಬದುಕು
ಎದೆಗೆ ಗುರಿಯಿಟ್ಟಿದೆ ಬಂದೂಕು!

ವರಗಳು ಶಾಪವಾಗಿ,
ಶಾಪಗಳೇ ವರವಾಗಿಬಿಡುವ
ಈ ಮನ್ವಂತರದ ಕಾಲದಲಿ
ಅತ್ತಬಾಗದೇ, ಇತ್ತ ಬೀಗದೇ
ಸ್ಥಿರನಿಂತ ಸೂರ್ಯನಂತೆ
ಗೆದ್ದೂ ಬೀಗದೆ, ಸೋತೂ ಬಾಗದೆ
ಎಲ್ಲ ಚಡಪಡಿಕೆ ಎದೆಯೊಳಗೆ ಮುಚ್ಚಿಟ್ಟು
ಸದಾ ಧಗಧಗ ಉರಿವ
ಕೆಂಪುಸೂರ್ಯನ ಬಗಲಲ್ಲೇ ಬಚ್ಚಿಟ್ಟು
ಮೇಲೆ ಆತ್ಮವಿಶ್ವಾಸದ ನಗೆಯ
ಮುಸುಕು ಹೊದ್ದರಾಯ್ತು
ಎಲ್ಲ ತನ್ನಂತೆ ತಾನೇ ಸರಿಹೋದೀತು!
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...