Home / ಕವನ / ಕವಿತೆ / ಸ್ಥಿತ್ಯಂತರ

ಸ್ಥಿತ್ಯಂತರ

ಸದಾ ಕಿಚಿಪಿಚಿಗುಡುವ
ಗೊಂದಲದ ಗುಬ್ಬಿ ಗೂಡು
ಕೇಳುವುದಿಲ್ಲ ಒಂದಾದರೂ
ಸುಮಧುರ ಹಾಡು

ಬಿಡುವಿಲ್ಲದೇ ತುಯ್ಯುವ ಒಂದು ವೀಣೆ
ನಿರಂತರ ಕಾಡುವುದೇಕೋ ಕಾಣೆ!
ಮಧ್ಯಂತರದಲಿ ನಿಂತ
ನಾನು-ನನ್ನಂತವರು
ದವಡೆಯ ಕೊನೆಯ ಹಲ್ಲುಗಳನ್ನು
ಅರ್ಧವಷ್ಟೇ ಕಂಡವರು.

ಹಳತು ಸರಿಯೋ?
ಹೊಸದು ಸರಿಯೋ?
ಸದಾ ಮಂಥನದ ಚಿಂತನ
ಹಳವಂಡಗಳ ಸೃಷ್ಟಿಸಿ
ನವ ಸೃಷ್ಟಿಕರ್ತರ ಜನನ.
ಎಲ್ಲ ಕಾಲಕ್ಕೂ ಮಿಡಿಯುತ್ತಿದ್ದ ತಾಯಿಬೇರು
ಇತ್ತೀಚೆಗೆ ಒಮ್ಮೊಮ್ಮೆ ಮಾತ್ರ
ಎಲ್ಲೋ ಮಿಸುಕು
ಮುಂದಿನವರಿಗೆ ಅದೂ ಇಲ್ಲವೇನೋ?
ಸಧ್ಯ ನಮ್ಮಂತೆ
ದ್ವಂದ್ವದಲಿ ಸುಯ್ಯಬೇಕಿಲ್ಲ!

ಅದೂ ಬೇಕು, ಇದೂ ಬೇಕು
ಎಲ್ಲವೂ ಬೇಕು ಎನ್ನುವಂತಿಲ್ಲ
ಇಲ್ಲಿ ಆಯ್ಕೆಗಿರುವುದೊಂದೇ ಬದುಕು
ಎದೆಗೆ ಗುರಿಯಿಟ್ಟಿದೆ ಬಂದೂಕು!

ವರಗಳು ಶಾಪವಾಗಿ,
ಶಾಪಗಳೇ ವರವಾಗಿಬಿಡುವ
ಈ ಮನ್ವಂತರದ ಕಾಲದಲಿ
ಅತ್ತಬಾಗದೇ, ಇತ್ತ ಬೀಗದೇ
ಸ್ಥಿರನಿಂತ ಸೂರ್ಯನಂತೆ
ಗೆದ್ದೂ ಬೀಗದೆ, ಸೋತೂ ಬಾಗದೆ
ಎಲ್ಲ ಚಡಪಡಿಕೆ ಎದೆಯೊಳಗೆ ಮುಚ್ಚಿಟ್ಟು
ಸದಾ ಧಗಧಗ ಉರಿವ
ಕೆಂಪುಸೂರ್ಯನ ಬಗಲಲ್ಲೇ ಬಚ್ಚಿಟ್ಟು
ಮೇಲೆ ಆತ್ಮವಿಶ್ವಾಸದ ನಗೆಯ
ಮುಸುಕು ಹೊದ್ದರಾಯ್ತು
ಎಲ್ಲ ತನ್ನಂತೆ ತಾನೇ ಸರಿಹೋದೀತು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...