ಸ್ಥಿತ್ಯಂತರ

ಸದಾ ಕಿಚಿಪಿಚಿಗುಡುವ
ಗೊಂದಲದ ಗುಬ್ಬಿ ಗೂಡು
ಕೇಳುವುದಿಲ್ಲ ಒಂದಾದರೂ
ಸುಮಧುರ ಹಾಡು

ಬಿಡುವಿಲ್ಲದೇ ತುಯ್ಯುವ ಒಂದು ವೀಣೆ
ನಿರಂತರ ಕಾಡುವುದೇಕೋ ಕಾಣೆ!
ಮಧ್ಯಂತರದಲಿ ನಿಂತ
ನಾನು-ನನ್ನಂತವರು
ದವಡೆಯ ಕೊನೆಯ ಹಲ್ಲುಗಳನ್ನು
ಅರ್ಧವಷ್ಟೇ ಕಂಡವರು.

ಹಳತು ಸರಿಯೋ?
ಹೊಸದು ಸರಿಯೋ?
ಸದಾ ಮಂಥನದ ಚಿಂತನ
ಹಳವಂಡಗಳ ಸೃಷ್ಟಿಸಿ
ನವ ಸೃಷ್ಟಿಕರ್ತರ ಜನನ.
ಎಲ್ಲ ಕಾಲಕ್ಕೂ ಮಿಡಿಯುತ್ತಿದ್ದ ತಾಯಿಬೇರು
ಇತ್ತೀಚೆಗೆ ಒಮ್ಮೊಮ್ಮೆ ಮಾತ್ರ
ಎಲ್ಲೋ ಮಿಸುಕು
ಮುಂದಿನವರಿಗೆ ಅದೂ ಇಲ್ಲವೇನೋ?
ಸಧ್ಯ ನಮ್ಮಂತೆ
ದ್ವಂದ್ವದಲಿ ಸುಯ್ಯಬೇಕಿಲ್ಲ!

ಅದೂ ಬೇಕು, ಇದೂ ಬೇಕು
ಎಲ್ಲವೂ ಬೇಕು ಎನ್ನುವಂತಿಲ್ಲ
ಇಲ್ಲಿ ಆಯ್ಕೆಗಿರುವುದೊಂದೇ ಬದುಕು
ಎದೆಗೆ ಗುರಿಯಿಟ್ಟಿದೆ ಬಂದೂಕು!

ವರಗಳು ಶಾಪವಾಗಿ,
ಶಾಪಗಳೇ ವರವಾಗಿಬಿಡುವ
ಈ ಮನ್ವಂತರದ ಕಾಲದಲಿ
ಅತ್ತಬಾಗದೇ, ಇತ್ತ ಬೀಗದೇ
ಸ್ಥಿರನಿಂತ ಸೂರ್ಯನಂತೆ
ಗೆದ್ದೂ ಬೀಗದೆ, ಸೋತೂ ಬಾಗದೆ
ಎಲ್ಲ ಚಡಪಡಿಕೆ ಎದೆಯೊಳಗೆ ಮುಚ್ಚಿಟ್ಟು
ಸದಾ ಧಗಧಗ ಉರಿವ
ಕೆಂಪುಸೂರ್ಯನ ಬಗಲಲ್ಲೇ ಬಚ್ಚಿಟ್ಟು
ಮೇಲೆ ಆತ್ಮವಿಶ್ವಾಸದ ನಗೆಯ
ಮುಸುಕು ಹೊದ್ದರಾಯ್ತು
ಎಲ್ಲ ತನ್ನಂತೆ ತಾನೇ ಸರಿಹೋದೀತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನುಭವಿಸಬೇಕು
Next post ಕನವರಿಕೆ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…