ಬಂದ ವಸಂತ ಬಂದ ಇದೋ

ಬಂದ ವಸಂತ ಬಂದ ಇದೋ
ಸೃಷ್ಟಿಗೆ ಪುಳಕವ ತಂದ ಇದೋ

ಮರಮರದಲು ಚಿಗುರಿನ ಗಣಿಯ
ಹಕ್ಕಿಯ ಉಲ್ಲಾಸದ ದನಿಯ
ತೆರೆಸಿದ, ಮಂದಾನಿಲನನು ಕರೆಸಿದ
ಹರಸಿದ ಹೊಲಗದ್ದೆಗೆ ತೆನೆಯ.

ತೆಳುಮುಗಿಲನು ನೀಲಿಯ ನಭಕೆ
ತಿಳಿಭಾವವ ಜನಮಾನಸಕೆ,
ಹೊಳೆಯುವ ಹಸಿರಿನ ಬಣ್ಣದ ಶಾಲನು
ಮರಳಿ ಹೊದೆಸಿ ಗಿಡಮರ ವನಕೆ.

ಹಸಿರು ಮರಗಳ ಮಾಡಿನಲಿ
ಬಣ್ಣದ ಎಲೆಗಳ ಗೂಡಿನಲಿ
ಮರಿಗಳ ಕೂಡಿ ನಲಿಯುವ ಹಕ್ಕಿಯ
ಸಂತಸ ಚಿಮ್ಮಿಸಿ ಹಾಡಿನಲಿ.

ಅರುಣನ ಬೆನ್ನಿಗೆ ಎಳ ಬಿಸಿಲ
ಬೆಳೆಯುವ ಗದ್ದೆಗೆ ಹೊಸ ಫಸಲ,
ತೂಗುವ ಗಾಳಿಗೆ ಆಡುವ ತೆನೆಯ
ಬಾಗಿ ತಬ್ಬಿ ಕೇಳುತ ಕುಶಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೬
Next post ಹಾಗಾದರೆ ಯಾರೂ ಮಾತಾಡಬಾರದೇ?

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys