ಬಂದ ವಸಂತ ಬಂದ ಇದೋ

ಬಂದ ವಸಂತ ಬಂದ ಇದೋ
ಸೃಷ್ಟಿಗೆ ಪುಳಕವ ತಂದ ಇದೋ

ಮರಮರದಲು ಚಿಗುರಿನ ಗಣಿಯ
ಹಕ್ಕಿಯ ಉಲ್ಲಾಸದ ದನಿಯ
ತೆರೆಸಿದ, ಮಂದಾನಿಲನನು ಕರೆಸಿದ
ಹರಸಿದ ಹೊಲಗದ್ದೆಗೆ ತೆನೆಯ.

ತೆಳುಮುಗಿಲನು ನೀಲಿಯ ನಭಕೆ
ತಿಳಿಭಾವವ ಜನಮಾನಸಕೆ,
ಹೊಳೆಯುವ ಹಸಿರಿನ ಬಣ್ಣದ ಶಾಲನು
ಮರಳಿ ಹೊದೆಸಿ ಗಿಡಮರ ವನಕೆ.

ಹಸಿರು ಮರಗಳ ಮಾಡಿನಲಿ
ಬಣ್ಣದ ಎಲೆಗಳ ಗೂಡಿನಲಿ
ಮರಿಗಳ ಕೂಡಿ ನಲಿಯುವ ಹಕ್ಕಿಯ
ಸಂತಸ ಚಿಮ್ಮಿಸಿ ಹಾಡಿನಲಿ.

ಅರುಣನ ಬೆನ್ನಿಗೆ ಎಳ ಬಿಸಿಲ
ಬೆಳೆಯುವ ಗದ್ದೆಗೆ ಹೊಸ ಫಸಲ,
ತೂಗುವ ಗಾಳಿಗೆ ಆಡುವ ತೆನೆಯ
ಬಾಗಿ ತಬ್ಬಿ ಕೇಳುತ ಕುಶಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೬
Next post ಹಾಗಾದರೆ ಯಾರೂ ಮಾತಾಡಬಾರದೇ?

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…