ಪೋಸ್ಟರ್ ಬರೆಯುವ ಮಂದಿ

ನವಿಲಿನ ಕಣ್ಣಿನ ಬಣ್ಣವ ಹಿಡಿದು
ಮುಳುಗುವ ಸೂರ್ಯನ ಕಿರಣವ ತಡೆದು
ಮಾರ್ಗದ ಮಧ್ಯೆ ನಿಲ್ಲಿಸುವವರು
ಪೋಸ್ಟರ್ ಬರೆಯುವ ಅನಾಮಿಕರು

ರೆಡ್ಡಿಯಂಗಡಿ ಅಟ್ಟದ ಮೇಲೆ
ಬಣ್ಣ ಬಣ್ಣಗಳ ಸರಮಾಲೆ
ಸಕ್ಕರೆ ಕಾರ್ಖಾನೆಯಲಿ ನಾಳೆಯಿಂದ ಸಂಪು
ಅದಕೆಂದೇ ಇಲ್ಲಿ ಇಷ್ಟೊಂದು ಕೆಂಪು

ಕೆಂಪು ಕ್ರಾಂತಿಯ ಸಂಕೇತ
ಗುಂಪು ಎಂದರೆ ಓತಿಕೇತ
ಎಲ್ಲಾ ಗುಂಪಿನ ತೃಪ್ತಿ
ಪೋಸ್ಟರ್ ಬರೆವ ಮಂದಿಯ ನೀತಿ

ನಾಟಕದವರಿಗು ಬೇಕು
ಸಿನಿಮಾದವರಿಗು ಬೇಕು
ಲಾಟರಿ ಮಾರುವ ನಾಯಕರೇ
ರಾಜಕೀಯದ ನಾಯಕರೇ
ಪೋಸ್ಟರ್ ಎಂದರೆ ಎಲ್ಲರಿಗೂ

ಹಲ್ಲಿನ ನಡುವೆ ಹೊಗೆಯುವ ಬೀಡಿ
ತಲೆಗೂದಲು ಹಾರಾಡಿ
ಮೂಗಿನ ತುಂಬಾ ನೆಗಡಿ
ಒರೆಸಲು ನಿಲುವಂಗಿಯ ಕೈಯೆ
ಕೈಗೂ ತಿಳಿಯದು ಕುಂಚದ ಮಾಯೆ
ತಿಳಕೊಳ್ಳಿರಿ ಅದು ಬಿಚ್ಚುವ ಚಿತ್ರ
ನಾಳಿನ ವಿಶ್ವದ ಸ್ಯಾಂಪಲ್ ಮಾತ್ರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳಿವು-ಉಳಿವು
Next post ಬರ್ಬರ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys